ಈ ಎರಡು ಏಜೆನ್ಸಿಗಳಿಗೆ ಮಾತ್ರ ಹೇಗೆ ಕೆಲಸ ಸಿಕ್ಕಿತು. ಸ್ಥಳೀಯವಾಗಿ ಕಲಾವಿದರು ಇರಲಿಲ್ಲವೇ, ಬರೀ ಬೋರ್ಡ್ ಬರೆಸಲು ಅಷ್ಟೊಂದು ಹಣ ಖರ್ಚು ಮಾಡಿದ್ದೇಕೆ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಮೌನ ಗಮನಿಸಿದರೆ ಅವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನ ಬರುತ್ತಿದೆ ಎಂದು ಬಿಜೆಪಿ ಸದಸ್ಯ ಹೂವಪ್ಪ ರಾಥೋಡ ಕಾಲೆಳೆದರು.