<p><strong>ಮಹಾಲಿಂಗಪುರ:</strong> ಪಟ್ಟಣದ ಢವಳೇಶ್ವರ ರಸ್ತೆಯ ಸಿದ್ದಪ್ಪಗೌಡ ನಗರದಲ್ಲಿ ಹೇಮ–ವೇಮ ಯುವಕ ಮಂಡಳಿ ವತಿಯಿಂದ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡ ತೆರಬಂಡಿ ಉತ್ಸವದಲ್ಲಿ ಶಿರೋಳದ ಜೋಡೆತ್ತು ಪ್ರಥಮ ಸ್ಥಾನ ಪಡೆದವು.</p>.<p>ತೆರಬಂಡಿ ಉತ್ಸವದಲ್ಲಿ ಮುಧೋಳ, ಹೊಸಯರಗುದ್ರಿ, ಮುಗಳ್ಯಾಳ, ರನ್ನಬೆಳಗಲಿ, ಚಿಮ್ಮಡ, ಮಿರ್ಜಿ ಸೇರಿದಂತೆ ವಿವಿಧ ಭಾಗಗಳ 42 ಜೋಡೆತ್ತುಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನ ಪಡೆದ ಶಿರೋಳ ಜೋಡೆತ್ತು ಮಾಲೀಕರಿಗೆ ₹30 ಸಾವಿರ ., ದ್ವಿತೀಯ ಸ್ಥಾನ ಪಡೆದ ದಾಸನಾಳ ಗ್ರಾಮದ ಜೋಡೆತ್ತು ಮಾಲೀಕರಿಗೆ ₹25 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಅಕ್ಕಿಮರಡಿ ಗ್ರಾಮದ ಜೋಡೆತ್ತು ಮಾಲೀಕರಿಗೆ ₹20 ಸಾವಿರ ನಗದು ಬಹುಮಾನ ಸೇರಿದಂತೆ 12 ಸ್ಥಾನ ಪಡೆದ ಜೋಡೆತ್ತು ಮಾಲೀಕರಿಗೆ ನಗದು ಬಹುಮಾನ ನೀಡಲಾಯಿತು.</p>.<p>ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ರವಿಗೌಡ ಪಾಟೀಲ ಚಾಲನೆ ನೀಡಿದರು. ಲಕ್ಷ್ಮಣಗೌಡ ಪಾಟೀಲ, ಬಸನಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ಸೋಮಲಿಂಗ ಸಂಗನ್ನವರ, ಮಹಾಂತೇಶ ಪಾಟೀಲ, ಶಿವಕುಮಾರ ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ:</strong> ಪಟ್ಟಣದ ಢವಳೇಶ್ವರ ರಸ್ತೆಯ ಸಿದ್ದಪ್ಪಗೌಡ ನಗರದಲ್ಲಿ ಹೇಮ–ವೇಮ ಯುವಕ ಮಂಡಳಿ ವತಿಯಿಂದ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡ ತೆರಬಂಡಿ ಉತ್ಸವದಲ್ಲಿ ಶಿರೋಳದ ಜೋಡೆತ್ತು ಪ್ರಥಮ ಸ್ಥಾನ ಪಡೆದವು.</p>.<p>ತೆರಬಂಡಿ ಉತ್ಸವದಲ್ಲಿ ಮುಧೋಳ, ಹೊಸಯರಗುದ್ರಿ, ಮುಗಳ್ಯಾಳ, ರನ್ನಬೆಳಗಲಿ, ಚಿಮ್ಮಡ, ಮಿರ್ಜಿ ಸೇರಿದಂತೆ ವಿವಿಧ ಭಾಗಗಳ 42 ಜೋಡೆತ್ತುಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನ ಪಡೆದ ಶಿರೋಳ ಜೋಡೆತ್ತು ಮಾಲೀಕರಿಗೆ ₹30 ಸಾವಿರ ., ದ್ವಿತೀಯ ಸ್ಥಾನ ಪಡೆದ ದಾಸನಾಳ ಗ್ರಾಮದ ಜೋಡೆತ್ತು ಮಾಲೀಕರಿಗೆ ₹25 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಅಕ್ಕಿಮರಡಿ ಗ್ರಾಮದ ಜೋಡೆತ್ತು ಮಾಲೀಕರಿಗೆ ₹20 ಸಾವಿರ ನಗದು ಬಹುಮಾನ ಸೇರಿದಂತೆ 12 ಸ್ಥಾನ ಪಡೆದ ಜೋಡೆತ್ತು ಮಾಲೀಕರಿಗೆ ನಗದು ಬಹುಮಾನ ನೀಡಲಾಯಿತು.</p>.<p>ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ರವಿಗೌಡ ಪಾಟೀಲ ಚಾಲನೆ ನೀಡಿದರು. ಲಕ್ಷ್ಮಣಗೌಡ ಪಾಟೀಲ, ಬಸನಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ಸೋಮಲಿಂಗ ಸಂಗನ್ನವರ, ಮಹಾಂತೇಶ ಪಾಟೀಲ, ಶಿವಕುಮಾರ ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>