<p><strong>ಬಾಗಲಕೋಟೆ:</strong> ಮುಂಗಾರು ಮಳೆ ಸಂಭ್ರಮ ಮರೆಯಾಗುವಂತೆ ದಿನದಿಂದ ದಿನಕ್ಕೆ ತರಕಾರಿ ಬೆಲೆಗಳು ಹೆಚ್ಚುತ್ತಿವೆ. ಟೊಮೆಟೊ ಬೆಲೆ ಪ್ರತಿ ಕೆಜಿಗೆ ₹ 100ರ ಗಡಿ ಮುಟ್ಟಿದೆ.</p>.<p>ತರಕಾರಿ ಬೆಲೆ ಏರಿಕೆಗೆ ವರ್ತಕರು, ಮುನ್ನ ಮಳೆಯೇ ಆಗಿಲ್ಲ ಎನ್ನುತ್ತಿದ್ದರು. ಈಗ ಮಳೆಯಾಗಿದೆ, ಈಗಲೂ ತರಕಾರಿ ಬೆಲೆ ಬೇಸಿಗೆಗಿಂತ ಹೆಚ್ಚಾಗಿದೆ. </p>.<p>ಎರಡು ವಾರಗಳಿಂದ ಪ್ರತಿ ಕೆಜಿಗೆ ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೊ ಈ ವಾರಕ್ಕೆ ಪ್ರತಿ ಕೆಜಿಗೆ ₹100 ಆಗಿದೆ. ಸಂತೆಯಲ್ಲಿ ಸಾಕಷ್ಟು ಟೊಮೆಟೊ ಇದ್ದರೂ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದರು.</p>.<p>‘ಕೋಲಾರ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿತ್ತು. ಮಳೆ ಹೆಚ್ಚಾಗಿ ಹಾಳಾಗಿರುವುದು, ರೋಗ ಬಾಧೆಯಿಂದ ಬರುತ್ತಿಲ್ಲ. ಹಾಗಾಗಿ, ಟೊಮೆಟೊ ಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ನಮಗೆ ಪ್ರತಿ ಕೆಜಿಗೆ ₹80 ರಿಂದ 90 ಬಿದ್ದಿದೆ’ ಎಂದು ವ್ಯಾಪಾರಿ ಶೇಖರ್ ಹೇಳಿದರು.</p>.<p>‘ಟೊಮೆಟೊ ಬೆಲೆ ಕೇಳಿ ಈ ವಾರ ಖರೀದಿ ಮಾಡಲಿಲ್ಲ. ಹುಣಸೆಹಣ್ಣು, ನಿಂಬೆ ಹಣ್ಣು ಬಳಸಿ ಅಡುಗೆ ಮಾಡಲಾಗುವುದು. ಉಳಿದ ತರಕಾರಿ, ಸೊಪ್ಪಿನ ಬೆಲೆಯೂ ಬಹಳ ಹೆಚ್ಚಳವಾಗಿದೆ’ ಎಂದು ಸುರೇಖಾ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಪ್ರತಿ ಕೆಜಿಗೆ ₹80 ಇರುತ್ತಿದ್ದ ಹಿರೇಕಾಯಿಯ ಬೆಲೆ ಎರಡು ವಾರಗಳಿಂದ ₹120 ರಿಂದ 160ರವರೆಗೆ ಹೆಚ್ಚಾಗಿದೆ. ಸೌತೆಕಾಯಿ ₹120, ಗಜ್ಜರಿ ಬೆಲೆ ₹120ಕ್ಕೆ ಹೆಚ್ಚಾಗಿದೆ. ಪ್ರತಿ ಕೆಜಿಗೆ ₹25 ಇದ್ದ ಉಳ್ಳಾಗಡ್ಡಿಯ ಬೆಲೆ ಈಗ ₹40ಕ್ಕೆ ಮುಟ್ಟಿದೆ. ಬಹುತೇಕ ತರಕಾರಿಗಳ ಬೆಲೆಯೂ ಶತಕದ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿವೆ.</p>.<p>ಕೊತ್ತಂಬರಿ ದೊಡ್ಡ ಕಟ್ಟಿಗೆ ₹40 ರಿಂದ ₹50 ಇದ್ದರೆ, ಸಣ್ಣದು ₹20 ಇತ್ತು. ಸಬ್ಬಸಿಗೆ ₹20 ರಿಂದ ₹30, ಕರಿಬೇವು ₹10 ರಿಂದ 15ಕ್ಕೆ ಹೆಚ್ಚಿದೆ. </p>.<p>ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಳವಾಗಿರುವುದರಿಂದ ಕೆಜಿ ಕೊಳ್ಳುತ್ತಿದ್ದ ಗ್ರಾಹಕರು, ಅರ್ಧ ಕೆಜಿಗೆ, ಅರ್ಧ ಕೆಜಿ ಕೊಳ್ಳುತ್ತಿದ್ದ ಗ್ರಾಹಕರು ಕಾಲು ಕೆಜಿ ಖರೀದಿ ಮಾಡುತ್ತಿದ್ದರು. ಮಾರುಕಟ್ಟೆಯಲ್ಲಿ ತರಕಾರಿಯ ಪ್ರಮಾಣವೇ ಕಡಿಮೆಯಾಗಿದೆ.</p>.<div><blockquote>ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ಸಾಗಣೆ ವೆಚ್ಚ ಹೆಚ್ಚಾಗಿ ಬೆಲೆಗಳು ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ</blockquote><span class="attribution">- ರಾಜಶೇಖರ ಹಿರೇಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಮುಂಗಾರು ಮಳೆ ಸಂಭ್ರಮ ಮರೆಯಾಗುವಂತೆ ದಿನದಿಂದ ದಿನಕ್ಕೆ ತರಕಾರಿ ಬೆಲೆಗಳು ಹೆಚ್ಚುತ್ತಿವೆ. ಟೊಮೆಟೊ ಬೆಲೆ ಪ್ರತಿ ಕೆಜಿಗೆ ₹ 100ರ ಗಡಿ ಮುಟ್ಟಿದೆ.</p>.<p>ತರಕಾರಿ ಬೆಲೆ ಏರಿಕೆಗೆ ವರ್ತಕರು, ಮುನ್ನ ಮಳೆಯೇ ಆಗಿಲ್ಲ ಎನ್ನುತ್ತಿದ್ದರು. ಈಗ ಮಳೆಯಾಗಿದೆ, ಈಗಲೂ ತರಕಾರಿ ಬೆಲೆ ಬೇಸಿಗೆಗಿಂತ ಹೆಚ್ಚಾಗಿದೆ. </p>.<p>ಎರಡು ವಾರಗಳಿಂದ ಪ್ರತಿ ಕೆಜಿಗೆ ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೊ ಈ ವಾರಕ್ಕೆ ಪ್ರತಿ ಕೆಜಿಗೆ ₹100 ಆಗಿದೆ. ಸಂತೆಯಲ್ಲಿ ಸಾಕಷ್ಟು ಟೊಮೆಟೊ ಇದ್ದರೂ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದರು.</p>.<p>‘ಕೋಲಾರ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿತ್ತು. ಮಳೆ ಹೆಚ್ಚಾಗಿ ಹಾಳಾಗಿರುವುದು, ರೋಗ ಬಾಧೆಯಿಂದ ಬರುತ್ತಿಲ್ಲ. ಹಾಗಾಗಿ, ಟೊಮೆಟೊ ಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ನಮಗೆ ಪ್ರತಿ ಕೆಜಿಗೆ ₹80 ರಿಂದ 90 ಬಿದ್ದಿದೆ’ ಎಂದು ವ್ಯಾಪಾರಿ ಶೇಖರ್ ಹೇಳಿದರು.</p>.<p>‘ಟೊಮೆಟೊ ಬೆಲೆ ಕೇಳಿ ಈ ವಾರ ಖರೀದಿ ಮಾಡಲಿಲ್ಲ. ಹುಣಸೆಹಣ್ಣು, ನಿಂಬೆ ಹಣ್ಣು ಬಳಸಿ ಅಡುಗೆ ಮಾಡಲಾಗುವುದು. ಉಳಿದ ತರಕಾರಿ, ಸೊಪ್ಪಿನ ಬೆಲೆಯೂ ಬಹಳ ಹೆಚ್ಚಳವಾಗಿದೆ’ ಎಂದು ಸುರೇಖಾ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಪ್ರತಿ ಕೆಜಿಗೆ ₹80 ಇರುತ್ತಿದ್ದ ಹಿರೇಕಾಯಿಯ ಬೆಲೆ ಎರಡು ವಾರಗಳಿಂದ ₹120 ರಿಂದ 160ರವರೆಗೆ ಹೆಚ್ಚಾಗಿದೆ. ಸೌತೆಕಾಯಿ ₹120, ಗಜ್ಜರಿ ಬೆಲೆ ₹120ಕ್ಕೆ ಹೆಚ್ಚಾಗಿದೆ. ಪ್ರತಿ ಕೆಜಿಗೆ ₹25 ಇದ್ದ ಉಳ್ಳಾಗಡ್ಡಿಯ ಬೆಲೆ ಈಗ ₹40ಕ್ಕೆ ಮುಟ್ಟಿದೆ. ಬಹುತೇಕ ತರಕಾರಿಗಳ ಬೆಲೆಯೂ ಶತಕದ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿವೆ.</p>.<p>ಕೊತ್ತಂಬರಿ ದೊಡ್ಡ ಕಟ್ಟಿಗೆ ₹40 ರಿಂದ ₹50 ಇದ್ದರೆ, ಸಣ್ಣದು ₹20 ಇತ್ತು. ಸಬ್ಬಸಿಗೆ ₹20 ರಿಂದ ₹30, ಕರಿಬೇವು ₹10 ರಿಂದ 15ಕ್ಕೆ ಹೆಚ್ಚಿದೆ. </p>.<p>ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಳವಾಗಿರುವುದರಿಂದ ಕೆಜಿ ಕೊಳ್ಳುತ್ತಿದ್ದ ಗ್ರಾಹಕರು, ಅರ್ಧ ಕೆಜಿಗೆ, ಅರ್ಧ ಕೆಜಿ ಕೊಳ್ಳುತ್ತಿದ್ದ ಗ್ರಾಹಕರು ಕಾಲು ಕೆಜಿ ಖರೀದಿ ಮಾಡುತ್ತಿದ್ದರು. ಮಾರುಕಟ್ಟೆಯಲ್ಲಿ ತರಕಾರಿಯ ಪ್ರಮಾಣವೇ ಕಡಿಮೆಯಾಗಿದೆ.</p>.<div><blockquote>ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ಸಾಗಣೆ ವೆಚ್ಚ ಹೆಚ್ಚಾಗಿ ಬೆಲೆಗಳು ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ</blockquote><span class="attribution">- ರಾಜಶೇಖರ ಹಿರೇಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>