ಕೊರೊನಾ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇರುವ ಕಾರಣ ಉಗಲವಾಟದಲ್ಲಿನ ಸೋದರ ಮಾವ ಬಾಬುಸಾಬ್ ವಾಲಿಕಾರ ಅವರ ಮನೆಗೆ ಮಕ್ಕಳು ಬಂದಿದ್ದರು. ಆಟವಾಡಲು ಬೆಳಿಗ್ಗೆ ಮನೆಯಿಂದ ಹೊರಗೆ ಹೋಗಿದ್ದರು. ಸಮೀಪದ ಕೆರೆಯಲ್ಲಿ ಅವರ ಶವಗಳು ಪತ್ತೆಯಾಗಿವೆ. ಕೆರೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಶವ ಪರೀಕ್ಷೆ ನಡೆಸಿ ಪೊಲೀಸರಿಗೆ ಒಪ್ಪಿಸಲಾಯಿತು.