<p><strong>ಗುಳೇದಗುಡ್ಡ:</strong> ಹತ್ತಿ, ಪಾಲಿಸ್ಟರ್ ಮತ್ತು ರೇಷ್ಮೆ ನೂಲಿನಿಂದ ತಯಾರಾದ ಸೀರೆ ಮತ್ತು ಖಣಗಳ ಮೇಲೆ ಹೆಚ್ಚುವರಿಯಾಗಿ ತೆರಿಗೆ ಆಕರಣೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೂಡಲೇ ಕೈ ಬಿಡುವಂತೆ ಒತ್ತಾಯಿಸಿ ಗುಳೇದಗುಡ್ಡ ಹ್ಯಾಂಡಲೂಮ್ ಅಸೋಸಿಯೇಷನ್ ಮತ್ತು ಪಟ್ಟಣದ ವ್ಯಾಪಾರಸ್ಥರು ಸಂಸದ ಪಿ.ಸಿ.ಗದ್ದಿಗೌಡರಿಗೆ ಮನವಿ ಸಲ್ಲಿಸಿದರು.</p>.<p>ಸೆಪ್ಟೆಂಬರ್ನಲ್ಲಿ ನಡೆದ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ನಲ್ಲಿ ಹತ್ತಿ, ಪಾಲಿಸ್ಟರ್ ಮತ್ತು ರೇಷ್ಮೆ ನೂಲಿನಿಂದ ತಯಾರಾಗುವ ಸೀರೆ ಮತ್ತು ಖಣಗಳ ಮೇಲೆ ಶೇ5ರಷ್ಟು ಇದ್ದಂತಹ ಸರಕು ಮತ್ತು ಸೇವಾ ತೆರಿಗೆಯನ್ನು ಶೇ 12ರಷ್ಟು ಮಾಡುವ ನಿರ್ಣಯ ಮಾಡಿದೆ.</p>.<p>ಹೆಚ್ಚುವರಿ ತೆರಿಗೆ ವಿಧಿಸಿದರೆ ಸೀರೆ ಮತ್ತು ಖಣಗಳ ಮಾರುಕಟ್ಟೆ ಸಂಪೂರ್ಣವಾಗಿ ನೆಲಕಚ್ಚಿ ಹೋಗುತ್ತದೆ. ಈಗಾಗಲೇ ಕೊರೊನಾ ಕಾರಣ ಉದ್ದಿಮೆಯ ಮಾರುಕಟ್ಟೆ ಅವನತಿಯ ಹಾದಿಯಲ್ಲಿದೆ. ಇಂತಹ ಸಂದರ್ಭದಲ್ಲಿ ತೆರಿಗೆ ಏರಿಕೆ ಅಸಂಮಜಸ ಮತ್ತು ಈ ವಲಯದ ಉದ್ಯೋಗಸ್ಥರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.</p>.<p>ಹತ್ತಿ, ಪಾಲಿಸ್ಟರ್ ಮತ್ತು ರೇಷ್ಮೆ ನೂಲಿನ ಮೇಲೆ ಶೇ 5ರಷ್ಟು ತೆರಿಗೆ ಇರುವುದುರಿಂದ ನಮ್ಮ ಉತ್ಪನ್ನಗಳಿಗೂ ಶೇ 5ರಷ್ಟು ತೆರಿಗೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.</p>.<p>ಮುಖಂಡರಾದ ಸಂಪತ್ಕುಮಾರ ರಾಠಿ, ಲಕ್ಷ್ಮೀಕಾಂತ ಝಂವರ, ಗೋವಿಂದ ಬಜಾಜ, ಕಮಲಕಿಶೋರ ಧೂತ, ಸಚಿನ ತೊಗರಿ, ಡಾ. ಆನಂದ ದೊಡಮನಿ, ಸುರೇಶ ಪವಾರ, ನಾರಾಯಣಸಾ ರಾಯಬಾಗಿ, ಅಮರೇಶ ಕೊಳ್ಳಿ, ಬಾಬುಸೇಠ ಯಣ್ಣಿ, ಮುರುಳಿಧರ ಹಬೀಬ ಸೇರಿದಂತೆ ಮತ್ತಿತರರ ಪಟ್ಟಣದ ನೇಕಾರ ವ್ಯಾಪಾರಸ್ಥರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ:</strong> ಹತ್ತಿ, ಪಾಲಿಸ್ಟರ್ ಮತ್ತು ರೇಷ್ಮೆ ನೂಲಿನಿಂದ ತಯಾರಾದ ಸೀರೆ ಮತ್ತು ಖಣಗಳ ಮೇಲೆ ಹೆಚ್ಚುವರಿಯಾಗಿ ತೆರಿಗೆ ಆಕರಣೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೂಡಲೇ ಕೈ ಬಿಡುವಂತೆ ಒತ್ತಾಯಿಸಿ ಗುಳೇದಗುಡ್ಡ ಹ್ಯಾಂಡಲೂಮ್ ಅಸೋಸಿಯೇಷನ್ ಮತ್ತು ಪಟ್ಟಣದ ವ್ಯಾಪಾರಸ್ಥರು ಸಂಸದ ಪಿ.ಸಿ.ಗದ್ದಿಗೌಡರಿಗೆ ಮನವಿ ಸಲ್ಲಿಸಿದರು.</p>.<p>ಸೆಪ್ಟೆಂಬರ್ನಲ್ಲಿ ನಡೆದ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ನಲ್ಲಿ ಹತ್ತಿ, ಪಾಲಿಸ್ಟರ್ ಮತ್ತು ರೇಷ್ಮೆ ನೂಲಿನಿಂದ ತಯಾರಾಗುವ ಸೀರೆ ಮತ್ತು ಖಣಗಳ ಮೇಲೆ ಶೇ5ರಷ್ಟು ಇದ್ದಂತಹ ಸರಕು ಮತ್ತು ಸೇವಾ ತೆರಿಗೆಯನ್ನು ಶೇ 12ರಷ್ಟು ಮಾಡುವ ನಿರ್ಣಯ ಮಾಡಿದೆ.</p>.<p>ಹೆಚ್ಚುವರಿ ತೆರಿಗೆ ವಿಧಿಸಿದರೆ ಸೀರೆ ಮತ್ತು ಖಣಗಳ ಮಾರುಕಟ್ಟೆ ಸಂಪೂರ್ಣವಾಗಿ ನೆಲಕಚ್ಚಿ ಹೋಗುತ್ತದೆ. ಈಗಾಗಲೇ ಕೊರೊನಾ ಕಾರಣ ಉದ್ದಿಮೆಯ ಮಾರುಕಟ್ಟೆ ಅವನತಿಯ ಹಾದಿಯಲ್ಲಿದೆ. ಇಂತಹ ಸಂದರ್ಭದಲ್ಲಿ ತೆರಿಗೆ ಏರಿಕೆ ಅಸಂಮಜಸ ಮತ್ತು ಈ ವಲಯದ ಉದ್ಯೋಗಸ್ಥರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.</p>.<p>ಹತ್ತಿ, ಪಾಲಿಸ್ಟರ್ ಮತ್ತು ರೇಷ್ಮೆ ನೂಲಿನ ಮೇಲೆ ಶೇ 5ರಷ್ಟು ತೆರಿಗೆ ಇರುವುದುರಿಂದ ನಮ್ಮ ಉತ್ಪನ್ನಗಳಿಗೂ ಶೇ 5ರಷ್ಟು ತೆರಿಗೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.</p>.<p>ಮುಖಂಡರಾದ ಸಂಪತ್ಕುಮಾರ ರಾಠಿ, ಲಕ್ಷ್ಮೀಕಾಂತ ಝಂವರ, ಗೋವಿಂದ ಬಜಾಜ, ಕಮಲಕಿಶೋರ ಧೂತ, ಸಚಿನ ತೊಗರಿ, ಡಾ. ಆನಂದ ದೊಡಮನಿ, ಸುರೇಶ ಪವಾರ, ನಾರಾಯಣಸಾ ರಾಯಬಾಗಿ, ಅಮರೇಶ ಕೊಳ್ಳಿ, ಬಾಬುಸೇಠ ಯಣ್ಣಿ, ಮುರುಳಿಧರ ಹಬೀಬ ಸೇರಿದಂತೆ ಮತ್ತಿತರರ ಪಟ್ಟಣದ ನೇಕಾರ ವ್ಯಾಪಾರಸ್ಥರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>