<p><strong>ತೇರದಾಳ:</strong> ಸಮಾಜವು ಯುವಕರ ಭವಿಷ್ಯಕ್ಕೆ ಹಲವು ಕಟ್ಟುಪಾಟಡುಗಳನ್ನು ವಿಧಿಸುವಂತೆ ಅವರಿಂದ ಒಗ್ಗಟ್ಟನ್ನು ಬಯಸುತ್ತದೆ. ಅದು ಬೇರೆ ಸಮಾಜಗಳಿಗೆ ತೊಂದರೆಯಾಗದಂತಿರಬೇಕು ಎಂದು ಮುಗಳಖೋಡ-ಶಿರೂರ ಕನಕಬ್ರಹ್ಮ ಮಠದ ಚಿನ್ಮಯಾನಂದ ಶ್ರೀ ಹೇಳಿದರು.</p>.<p>ಕರ್ನಾಟಕ ಪ್ರದೇಶ ಕುರುಬ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಇತ್ತಿಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಹೆಚ್ಚು ಅಂಟಿಕೊಳ್ಳುತ್ತಿದ್ದಾರೆ. ಇದಕ್ಕೆ ಹಿರಿಯರು ಕಡಿವಾಣ ಹಾಕುವುದರ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.</p>.<p>ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಸಿದ್ದಾಪುರ, ಕುರುಬ ಸಮಾಜ ಇನ್ನೂ ಸಾಕಷ್ಟು ಸಂಘಟನೆಗೊಳ್ಳುವ ಅವಶ್ಯಕತೆ ಇದೆ. ಆ ದಿಸೆಯಲ್ಲಿ ಸಮಾಜ ಬಾಂಧವರು ಸಂಘಟನೆಗೆ ಆದ್ಯತೆ ನೀಡಬೇಕು. ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.</p>.<p>ಡಾ.ಡಿ.ಎನ್.ಸನದಿ, ಪಿಎಸ್ಐ ಅಪ್ಪು ಐಗಳಿ ಮಾತನಾಡಿದರು. ಜಮಖಂಡಿ ಬಿಎಲ್ಡಿಇ ಕಾಲೇಜಿನ ಉಪನ್ಯಾಸಕ ಮಹಾದೇವ ಪೂಜಾರಿ ವಿಶೇಷ ಉಪನ್ಯಾಸ ನೀಡಿದರು. ಹಂದಿಗುಂದ ಹಾಲಸಿದ್ದೇಶ್ವರ ಮಠದ ಶ್ರೀಮಂತ ಶಿವಯೋಗಿ ನೇತೃತ್ವ ವಹಿಸಿದ್ದರು. ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ರಾಮ ಕಾಗಿ ಅಧ್ಯಕ್ಷತೆ ವಹಿಸಿದ್ದರು.</p>.<p>ಪ್ರವೀಣ ನಾಡಗೌಡ, ರಂಗನೌಡ ಪಾಟೀಲ, ಲಕ್ಕಪ್ಪ ಬನಾಜನವರ, ಮಲಕಾರಿ ಗಾಡದವರ, ಮಹಾಲಿಂಗಪ್ಪ ಜಕ್ಕನ್ನವರ, ಮಲ್ಲಪ್ಪ ಸಿಂಗಾಡಿ, ದುಂಡಪ್ಪ ಕರಿಗಾರ, ಶೆಟ್ಟೆಪ್ಪ ಸುಣಗಾರ, ಡಾ.ಎಸ್.ಎಂ.ಕರಿಗಾರ, ಡಾ.ಕೆ.ವೈ.ಕೆಂಬಾಗಿ ಇದ್ದರು.</p>.<p>ಅಶೋಕ ಧರ್ಮಟ್ಟಿ, ಈರಣ್ಣ ಲಟ್ಟಿ ಕಾರ್ಯಕ್ರಮ ನಿರ್ವಹಿಸಿದರು.</p>.<p>ಭವ್ಯ ಮೆರವಣಿಗೆ: ಇದಕ್ಕೂ ಮೊದಲು ಕಲ್ಲಟ್ಟಿ ಗಲ್ಲಿಯಿಂದ ಕನಕದಾಸರ ಭಾವಚಿತ್ರ, ಕುಂಭಮೇಳದ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಜರುಗಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಲವು ಡೊಳ್ಳು ಕಲಾವಿದರ ವಾದನ ಮೆರವಣಿಗೆಗೆ ಕಳೆ ಕಟ್ಟಿ ಭಂಡಾರದಲ್ಲಿ ಮಿಂದೆದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇರದಾಳ:</strong> ಸಮಾಜವು ಯುವಕರ ಭವಿಷ್ಯಕ್ಕೆ ಹಲವು ಕಟ್ಟುಪಾಟಡುಗಳನ್ನು ವಿಧಿಸುವಂತೆ ಅವರಿಂದ ಒಗ್ಗಟ್ಟನ್ನು ಬಯಸುತ್ತದೆ. ಅದು ಬೇರೆ ಸಮಾಜಗಳಿಗೆ ತೊಂದರೆಯಾಗದಂತಿರಬೇಕು ಎಂದು ಮುಗಳಖೋಡ-ಶಿರೂರ ಕನಕಬ್ರಹ್ಮ ಮಠದ ಚಿನ್ಮಯಾನಂದ ಶ್ರೀ ಹೇಳಿದರು.</p>.<p>ಕರ್ನಾಟಕ ಪ್ರದೇಶ ಕುರುಬ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಇತ್ತಿಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಹೆಚ್ಚು ಅಂಟಿಕೊಳ್ಳುತ್ತಿದ್ದಾರೆ. ಇದಕ್ಕೆ ಹಿರಿಯರು ಕಡಿವಾಣ ಹಾಕುವುದರ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.</p>.<p>ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಸಿದ್ದಾಪುರ, ಕುರುಬ ಸಮಾಜ ಇನ್ನೂ ಸಾಕಷ್ಟು ಸಂಘಟನೆಗೊಳ್ಳುವ ಅವಶ್ಯಕತೆ ಇದೆ. ಆ ದಿಸೆಯಲ್ಲಿ ಸಮಾಜ ಬಾಂಧವರು ಸಂಘಟನೆಗೆ ಆದ್ಯತೆ ನೀಡಬೇಕು. ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.</p>.<p>ಡಾ.ಡಿ.ಎನ್.ಸನದಿ, ಪಿಎಸ್ಐ ಅಪ್ಪು ಐಗಳಿ ಮಾತನಾಡಿದರು. ಜಮಖಂಡಿ ಬಿಎಲ್ಡಿಇ ಕಾಲೇಜಿನ ಉಪನ್ಯಾಸಕ ಮಹಾದೇವ ಪೂಜಾರಿ ವಿಶೇಷ ಉಪನ್ಯಾಸ ನೀಡಿದರು. ಹಂದಿಗುಂದ ಹಾಲಸಿದ್ದೇಶ್ವರ ಮಠದ ಶ್ರೀಮಂತ ಶಿವಯೋಗಿ ನೇತೃತ್ವ ವಹಿಸಿದ್ದರು. ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ರಾಮ ಕಾಗಿ ಅಧ್ಯಕ್ಷತೆ ವಹಿಸಿದ್ದರು.</p>.<p>ಪ್ರವೀಣ ನಾಡಗೌಡ, ರಂಗನೌಡ ಪಾಟೀಲ, ಲಕ್ಕಪ್ಪ ಬನಾಜನವರ, ಮಲಕಾರಿ ಗಾಡದವರ, ಮಹಾಲಿಂಗಪ್ಪ ಜಕ್ಕನ್ನವರ, ಮಲ್ಲಪ್ಪ ಸಿಂಗಾಡಿ, ದುಂಡಪ್ಪ ಕರಿಗಾರ, ಶೆಟ್ಟೆಪ್ಪ ಸುಣಗಾರ, ಡಾ.ಎಸ್.ಎಂ.ಕರಿಗಾರ, ಡಾ.ಕೆ.ವೈ.ಕೆಂಬಾಗಿ ಇದ್ದರು.</p>.<p>ಅಶೋಕ ಧರ್ಮಟ್ಟಿ, ಈರಣ್ಣ ಲಟ್ಟಿ ಕಾರ್ಯಕ್ರಮ ನಿರ್ವಹಿಸಿದರು.</p>.<p>ಭವ್ಯ ಮೆರವಣಿಗೆ: ಇದಕ್ಕೂ ಮೊದಲು ಕಲ್ಲಟ್ಟಿ ಗಲ್ಲಿಯಿಂದ ಕನಕದಾಸರ ಭಾವಚಿತ್ರ, ಕುಂಭಮೇಳದ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಜರುಗಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಲವು ಡೊಳ್ಳು ಕಲಾವಿದರ ವಾದನ ಮೆರವಣಿಗೆಗೆ ಕಳೆ ಕಟ್ಟಿ ಭಂಡಾರದಲ್ಲಿ ಮಿಂದೆದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>