<p>ಹುನಗುಂದ ತಾಲ್ಲೂಕಿನ ತಿಮ್ಮಾಪುರದ ಗ್ರಾಮದ ಮಾರುತಿ ಮತ್ತು ಬಸವಣ್ಣನ ಜಾತ್ರೆ ತಾಲ್ಲೂಕಿನಲ್ಲೇ ಹೆಸರು ಪಡೆದ ಜಾತ್ರೆ. <br /> <br /> ಉತ್ತರಿ ಮಳೆ ಆರಂಭದ ಮೊದಲ ಶನಿವಾರ ಜಾತ್ರೆಗೆ ಚಾಲನೆ ದೊರೆಯುತ್ತದೆ. ಒಂದು ತಿಂಗಳಿನಿಂದ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಉತ್ತರಿ ಮಳೆಯ ದಿನವೇ ರಾತ್ರಿ 8 ಕ್ಕೆ ಮಲಪ್ರಭೆ ನದಿಗೆ ಹೋಗಿ ದೇವರ ಪಲ್ಲಕ್ಕಿ ಹತಾರ, ಕಳಸ ಎಲ್ಲ ಪೂಜೆಯ ಸಾಮಾನುಗಳನ್ನು ಮಡಿ ಮಾಡಿಕೊಂಡು ಬರುತ್ತಾರೆ. <br /> <br /> ಕರೆಕಲ್ಲ ಮಠಕ್ಕೆ ಬಂದಾಗ ಅಲ್ಲಿ ವಾರ್ಷಿಕ ಭವಿಷ್ಯವಾಣಿ (ನುಡಿ) ಆಗುತ್ತದೆ. ನಂತರ ಪಲ್ಲಕ್ಕಿ ಉತ್ಸವ ನಡೆದು ಪೂಜಾರಿಯು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತ ಹರಿತವಾದ ಆಯುಧದಿಂದ ಮೈಗೆ ಚುಚ್ಚಿ ಬಡಿದುಕೊಳ್ಳುವ ಈ ದೃಶ್ಯ ನೆರೆದ ಭಕ್ತರಲ್ಲಿ ಭಕ್ತಿ ಮತ್ತು ರೋಮಾಂಚನ ತರುತ್ತದೆ. <br /> <br /> ನೆರೆದ ಸಾವಿರಾರು ಹರಕೆಯ ಭಕ್ತರು ದೇವರಿಗೆ ಸುತ್ತುಗಾಯಿ ಒಡೆಯುವ ದೃಶ್ಯ ಜನರ ಭಕ್ತಿಯ ಪರಾಕಾಷ್ಠೆಗೆ ಹಿಡಿದ ಕನ್ನಡಿಯಾಗುತ್ತದೆ. ಸುಮಾರು 5 ರಿಂದ 100 ಕಾಯಿಯವರೆಗೆ ಜನರು ತಮ್ಮ ಭಕ್ತಿಯ ಹರಕೆಯನ್ನು ಸಲ್ಲಿಸುತ್ತಾರೆ. ಮತ್ತೆ ಹತಾರ ಸೇವೆ ನಡೆದು `ಹಸ್ತ ಬಂಗಾರ, ಮಳಿ ಬಂಗಾರಬೆಳ್ಳಿ, ಹತ್ಯಾಗ ಮತ್ತ ಇಟ್ಟೈತಿ, ಸಿಕ್ಕವರಿಗೆ ಸಿಕ್ತು ಸಿಗದವರಿಗೆ ಇಲ್ಲ, ಬಯಲಾಗ ಬುತ್ತಿ ಬಿಚ್ಚು~ ಪೂಜಾರಿಯ ಹೇಳಿಕೆ ನಡೆಯುತ್ತದೆ. ಇದನ್ನು ಕೇಳಿದ ಗ್ರಾಮಸ್ಥರು ಲೆಕ್ಕ ಹಾಕುತ್ತ ಮನೆಗೆ ಸಾಗುತ್ತಾರೆ.<br /> <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುನಗುಂದ ತಾಲ್ಲೂಕಿನ ತಿಮ್ಮಾಪುರದ ಗ್ರಾಮದ ಮಾರುತಿ ಮತ್ತು ಬಸವಣ್ಣನ ಜಾತ್ರೆ ತಾಲ್ಲೂಕಿನಲ್ಲೇ ಹೆಸರು ಪಡೆದ ಜಾತ್ರೆ. <br /> <br /> ಉತ್ತರಿ ಮಳೆ ಆರಂಭದ ಮೊದಲ ಶನಿವಾರ ಜಾತ್ರೆಗೆ ಚಾಲನೆ ದೊರೆಯುತ್ತದೆ. ಒಂದು ತಿಂಗಳಿನಿಂದ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಉತ್ತರಿ ಮಳೆಯ ದಿನವೇ ರಾತ್ರಿ 8 ಕ್ಕೆ ಮಲಪ್ರಭೆ ನದಿಗೆ ಹೋಗಿ ದೇವರ ಪಲ್ಲಕ್ಕಿ ಹತಾರ, ಕಳಸ ಎಲ್ಲ ಪೂಜೆಯ ಸಾಮಾನುಗಳನ್ನು ಮಡಿ ಮಾಡಿಕೊಂಡು ಬರುತ್ತಾರೆ. <br /> <br /> ಕರೆಕಲ್ಲ ಮಠಕ್ಕೆ ಬಂದಾಗ ಅಲ್ಲಿ ವಾರ್ಷಿಕ ಭವಿಷ್ಯವಾಣಿ (ನುಡಿ) ಆಗುತ್ತದೆ. ನಂತರ ಪಲ್ಲಕ್ಕಿ ಉತ್ಸವ ನಡೆದು ಪೂಜಾರಿಯು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತ ಹರಿತವಾದ ಆಯುಧದಿಂದ ಮೈಗೆ ಚುಚ್ಚಿ ಬಡಿದುಕೊಳ್ಳುವ ಈ ದೃಶ್ಯ ನೆರೆದ ಭಕ್ತರಲ್ಲಿ ಭಕ್ತಿ ಮತ್ತು ರೋಮಾಂಚನ ತರುತ್ತದೆ. <br /> <br /> ನೆರೆದ ಸಾವಿರಾರು ಹರಕೆಯ ಭಕ್ತರು ದೇವರಿಗೆ ಸುತ್ತುಗಾಯಿ ಒಡೆಯುವ ದೃಶ್ಯ ಜನರ ಭಕ್ತಿಯ ಪರಾಕಾಷ್ಠೆಗೆ ಹಿಡಿದ ಕನ್ನಡಿಯಾಗುತ್ತದೆ. ಸುಮಾರು 5 ರಿಂದ 100 ಕಾಯಿಯವರೆಗೆ ಜನರು ತಮ್ಮ ಭಕ್ತಿಯ ಹರಕೆಯನ್ನು ಸಲ್ಲಿಸುತ್ತಾರೆ. ಮತ್ತೆ ಹತಾರ ಸೇವೆ ನಡೆದು `ಹಸ್ತ ಬಂಗಾರ, ಮಳಿ ಬಂಗಾರಬೆಳ್ಳಿ, ಹತ್ಯಾಗ ಮತ್ತ ಇಟ್ಟೈತಿ, ಸಿಕ್ಕವರಿಗೆ ಸಿಕ್ತು ಸಿಗದವರಿಗೆ ಇಲ್ಲ, ಬಯಲಾಗ ಬುತ್ತಿ ಬಿಚ್ಚು~ ಪೂಜಾರಿಯ ಹೇಳಿಕೆ ನಡೆಯುತ್ತದೆ. ಇದನ್ನು ಕೇಳಿದ ಗ್ರಾಮಸ್ಥರು ಲೆಕ್ಕ ಹಾಕುತ್ತ ಮನೆಗೆ ಸಾಗುತ್ತಾರೆ.<br /> <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>