<p><strong>ಮುಧೋಳ:</strong> ಸಾವ ತಂದಕೊಳ್ಳಾಕ ದೇವರಿಗೆ ಹೋದಾಂಗಾತಲ್ಲೊ, ಜೀವನದಾಗ ಸುಖಾ ಕೊಡಂತ ಕೇಳಾಕಹೋದ ಮಕ್ಕಳ ಮನಿಗಿ ಬರಲಿಲ್ಲ.... <br /> <br /> ತಾಲ್ಲೂಕಿನ ಒಂಟಗೋಡಿ ಗ್ರಾಮದ ನಾಲ್ಕು ಜನ ಹಾಗೂ ಬುದ್ನಿಯ ಒಬ್ಬ ಯುವಕ ಶಬರಿಮಲೈ ಬೆಟ್ಟಕ್ಕೆ ಹೋಗಿ ದರ್ಶನ ಪಡೆದುಕೊಂಡು ವಾಪಸ್ ಬರುತ್ತಿದ್ದಾಗ ಹರಿಹರ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಈ ಸುದ್ದಿ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿದೆ.<br /> <br /> ಶನಿವಾರ ರಾತ್ರಿ ಮೃತದೇಹಗಳು ಗ್ರಾಮಕ್ಕೆ ಬಂದಾಗ ಇಡೀ ಗ್ರಾಮದ ಜನರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಸಂಕ್ರಮಣ ಹಬ್ಬದಲ್ಲಿಯೂ ಸೂತಕದ ಛಾಯೆ ಮೂಡಿತ್ತು.<br /> <br /> ತಿಪ್ಪಣ್ಣ ದೊಡಮನಿ (25), ವಿಠ್ಠಲ ಹರಿಜನ (30), ಸಿದ್ದು ನಾಯಿಕ (21), ಮಂಜುನಾಥ ದನಗರ (18) ಹಾಗೂ ಚಾಲಕ ಬುದ್ನಿ ಗ್ರಾಮದ ಲಕ್ಕಪ್ಪ ಮೃತಪಟ್ಟಿದ್ದಾರೆ.<br /> <br /> ತಿಪ್ಪಣ್ಣ ದೊಡಮನಿ ಹಾಗೂ ವಿಠ್ಠಲ ಹರಿಜನ ಅವರ ಮದುವೆಯಾಗಿ ಮಕ್ಕಳೂ ಇದ್ದಾರೆ. ಆದರೆ ಸಿದ್ದು ನಾಯಿಕನಿಗೆ ಮದುವೆಯಾಗಿ ವರ್ಷವೂ ಕಳೆದಿಲ್ಲ, ಇದೇ ಮೊದಲ ಬಾರಿಗೆ ಹೆಂಡತಿಯನ್ನು ಕರೆದುಕೊಂಡು ಬರಲಾಗಿದೆ ಎಂದು ಕುಟುಂಬದವರು ಹಾಗೂ ಗ್ರಾಮಸ್ಥರು ರೋದಿಸುತ್ತಿದ್ದರು. <br /> <br /> ಕಳೆದ ವರ್ಷ ಜ್ಯೋತಿಯ ದರ್ಶನಕ್ಕೆಂದು ಹೋಗಿದ್ದ ತಾಲ್ಲೂಕಿನ ಮಂಟೂರಿನ ಶ್ರೀಕಾಂತ ಶ್ರೀಶೈಲ ತಿಮ್ಮಾಪುರ(30) ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರಿಂದ `ಈ ಬಾರಿ ಜ್ಯೋತಿ ದರ್ಶನಕ್ಕೆ ಕಾಯಬೇಡಿ, ಅಯ್ಯಪ್ಪ ದರ್ಶನ ಮುಗಿಸಿಕೊಂಡು ಬಂದು ಬಿಡಿ ಎಂದು ತಾಕೀತು ಮಾಡಿ ಕಳಿಸಲಾಗಿತ್ತು. ಕಳೆದ ಬಾರಿ ಅಂಥ ದುರ್ಘಟನೆಯಲ್ಲಿಯೂ ದೇವರು ಅವರನ್ನು ಸುರಕ್ಷಿತವಾಗಿ ಕರೆತಂದಿದ್ದ....~ ಎಂದು ಕಳೆದ ವರ್ಷದ ಘಟನೆಯನ್ನು ಗ್ರಾಮಸ್ಥರು ನೆನಪಿಸಿಕೊಂಡರು.<br /> <br /> <strong>ಅಂತ್ಯಕ್ರಿಯೆ</strong><br /> ಶನಿವಾರ ರಾತ್ರಿ ಈ ಐದು ಜನರ ಅಂತ್ಯಕ್ರಿಯೆ ಒಂದೇ ಕಡೆ ನಡೆಯಿತು. ಅಯ್ಯಪ್ಪ ಮಾಲಾಧಾರಿಗಳೇ ಎಲ್ಲ ಕೈಂಕರ್ಯಗಳನ್ನು ಮುಗಿಸಿದರು. ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಧೋಳ:</strong> ಸಾವ ತಂದಕೊಳ್ಳಾಕ ದೇವರಿಗೆ ಹೋದಾಂಗಾತಲ್ಲೊ, ಜೀವನದಾಗ ಸುಖಾ ಕೊಡಂತ ಕೇಳಾಕಹೋದ ಮಕ್ಕಳ ಮನಿಗಿ ಬರಲಿಲ್ಲ.... <br /> <br /> ತಾಲ್ಲೂಕಿನ ಒಂಟಗೋಡಿ ಗ್ರಾಮದ ನಾಲ್ಕು ಜನ ಹಾಗೂ ಬುದ್ನಿಯ ಒಬ್ಬ ಯುವಕ ಶಬರಿಮಲೈ ಬೆಟ್ಟಕ್ಕೆ ಹೋಗಿ ದರ್ಶನ ಪಡೆದುಕೊಂಡು ವಾಪಸ್ ಬರುತ್ತಿದ್ದಾಗ ಹರಿಹರ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಈ ಸುದ್ದಿ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿದೆ.<br /> <br /> ಶನಿವಾರ ರಾತ್ರಿ ಮೃತದೇಹಗಳು ಗ್ರಾಮಕ್ಕೆ ಬಂದಾಗ ಇಡೀ ಗ್ರಾಮದ ಜನರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಸಂಕ್ರಮಣ ಹಬ್ಬದಲ್ಲಿಯೂ ಸೂತಕದ ಛಾಯೆ ಮೂಡಿತ್ತು.<br /> <br /> ತಿಪ್ಪಣ್ಣ ದೊಡಮನಿ (25), ವಿಠ್ಠಲ ಹರಿಜನ (30), ಸಿದ್ದು ನಾಯಿಕ (21), ಮಂಜುನಾಥ ದನಗರ (18) ಹಾಗೂ ಚಾಲಕ ಬುದ್ನಿ ಗ್ರಾಮದ ಲಕ್ಕಪ್ಪ ಮೃತಪಟ್ಟಿದ್ದಾರೆ.<br /> <br /> ತಿಪ್ಪಣ್ಣ ದೊಡಮನಿ ಹಾಗೂ ವಿಠ್ಠಲ ಹರಿಜನ ಅವರ ಮದುವೆಯಾಗಿ ಮಕ್ಕಳೂ ಇದ್ದಾರೆ. ಆದರೆ ಸಿದ್ದು ನಾಯಿಕನಿಗೆ ಮದುವೆಯಾಗಿ ವರ್ಷವೂ ಕಳೆದಿಲ್ಲ, ಇದೇ ಮೊದಲ ಬಾರಿಗೆ ಹೆಂಡತಿಯನ್ನು ಕರೆದುಕೊಂಡು ಬರಲಾಗಿದೆ ಎಂದು ಕುಟುಂಬದವರು ಹಾಗೂ ಗ್ರಾಮಸ್ಥರು ರೋದಿಸುತ್ತಿದ್ದರು. <br /> <br /> ಕಳೆದ ವರ್ಷ ಜ್ಯೋತಿಯ ದರ್ಶನಕ್ಕೆಂದು ಹೋಗಿದ್ದ ತಾಲ್ಲೂಕಿನ ಮಂಟೂರಿನ ಶ್ರೀಕಾಂತ ಶ್ರೀಶೈಲ ತಿಮ್ಮಾಪುರ(30) ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರಿಂದ `ಈ ಬಾರಿ ಜ್ಯೋತಿ ದರ್ಶನಕ್ಕೆ ಕಾಯಬೇಡಿ, ಅಯ್ಯಪ್ಪ ದರ್ಶನ ಮುಗಿಸಿಕೊಂಡು ಬಂದು ಬಿಡಿ ಎಂದು ತಾಕೀತು ಮಾಡಿ ಕಳಿಸಲಾಗಿತ್ತು. ಕಳೆದ ಬಾರಿ ಅಂಥ ದುರ್ಘಟನೆಯಲ್ಲಿಯೂ ದೇವರು ಅವರನ್ನು ಸುರಕ್ಷಿತವಾಗಿ ಕರೆತಂದಿದ್ದ....~ ಎಂದು ಕಳೆದ ವರ್ಷದ ಘಟನೆಯನ್ನು ಗ್ರಾಮಸ್ಥರು ನೆನಪಿಸಿಕೊಂಡರು.<br /> <br /> <strong>ಅಂತ್ಯಕ್ರಿಯೆ</strong><br /> ಶನಿವಾರ ರಾತ್ರಿ ಈ ಐದು ಜನರ ಅಂತ್ಯಕ್ರಿಯೆ ಒಂದೇ ಕಡೆ ನಡೆಯಿತು. ಅಯ್ಯಪ್ಪ ಮಾಲಾಧಾರಿಗಳೇ ಎಲ್ಲ ಕೈಂಕರ್ಯಗಳನ್ನು ಮುಗಿಸಿದರು. ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>