<p><span style="font-size: 26px;"><strong>ಕೆರೂರ</strong>: ಕುಳಗೇರಿ ಕ್ರಾಸ್ನ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಸಣ್ಣ ಮತ್ತು ಇತರೆ ರೈತರಿಗೆ ಸಜ್ಜಿ, ಹೈ ಜೋಳ, ಹೆಸರು, ತೊಗರಿ, ಗೋವಿನ ಜೋಳ, ಹಾಗೂ ಸೂರ್ಯಕಾಂತಿ ಬೀಜ ಗಳನ್ನು 5 ಎಕರೆವರೆಗೆ ಸೌಲಭ್ಯದ ಜೊತೆಗೆ ರಿಯಾಯಿತಿ ದರದಲ್ಲಿ ಜಿಪ್ಸಂ, ಜಿಂಕ್ ಸಲ್ಪೇಟ್, ಬೊರ್ಯಾಕ್ಸ ಟ್ಯೆಕೊ ಡರ್ಮಾ ಲಭ್ಯವಿದ್ದು ಕುಳಗೇರಿ ಹೋಬಳಿಯ ರೈತರು ಉಪಯೋಗ ಪಡೆಯುವಂತೆ ಸಹಾಯಕ ಕೃಷಿ ಅಧಿಕಾರಿ ಎಂ.ಎ. ಫಾರೂಕಿ ಕೋರಿದ್ದಾರೆ.</span><br /> <br /> ಪ್ರಸಕ್ತ ವರ್ಷ ಅವಧಿಗೆ ಮುನ್ನ ಸುರಿದ ಮುಂಗಾರು ಮಳೆರಾಯ, ನಂತರ ಮುನಿಸಿಕೊಂಡಿದ್ದಾನೆ. ಈ ಸಲ ಸ್ವಲ್ಪ ತಡವಾದರೂ ಸಹ ರೈತರ ಮುಖದಲ್ಲಿ ಮಂದಹಾಸ ಮೂಡಿಸುವುದು ಗ್ಯಾರಂಟಿ ಎಂಬ ವಿಶ್ವಾಸ ಕೃಷಿಕರಲ್ಲಿದೆ. ಅದಕ್ಕಾಗಿ ರೈತ ಸಂಪರ್ಕ ಕೇಂದ್ರದಲ್ಲಿ ನೂರಾರು ರೈತರು ಸಾಲುಗಟ್ಟಿ ಬೀಜಗಳನ್ನ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.<br /> <br /> ರಾಜ್ಯದೆಲ್ಲೆಡೆ ಪ್ರಸಕ್ತ ಅವಧಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಿಂದಿನಂತೆ ಈ ಸಲ ಕೈ ಬಿಡುವುದಿಲ್ಲ ಎಂಬ ಆಶಯ ಇಲ್ಲಿನ ರೈತರ ಮೊಗದಲ್ಲಿ ಇಣುಕುತ್ತಿದೆ.<br /> <br /> ಇನ್ನು ಕೆರೂರ ಭಾಗದ ರೈತರು ಎರಡು ವರ್ಷ ಸತತ ಬರಗಾಲದಿಂದ ತತ್ತರಿಸಿದ್ದು ಈ ಸಲವಾದರೂ ಮಳೆರಾಯ ಮುನಿಸಿಕೊಳ್ಳದೇ, ನೆಮ್ಮದಿಯ ಜೀವನ ಸಾಗಿಸುವುದಕ್ಕೆ ಕರುಣೆ ತೋರಿ, ನೇಗಿಲಯೋಗಿಗಳಿಗೆ ಖುಷಿ ಕೊಡಲಿ ಎಂದು ವರುಣನಲ್ಲಿ ಪ್ರಾರ್ಥಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಕೆರೂರ</strong>: ಕುಳಗೇರಿ ಕ್ರಾಸ್ನ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಸಣ್ಣ ಮತ್ತು ಇತರೆ ರೈತರಿಗೆ ಸಜ್ಜಿ, ಹೈ ಜೋಳ, ಹೆಸರು, ತೊಗರಿ, ಗೋವಿನ ಜೋಳ, ಹಾಗೂ ಸೂರ್ಯಕಾಂತಿ ಬೀಜ ಗಳನ್ನು 5 ಎಕರೆವರೆಗೆ ಸೌಲಭ್ಯದ ಜೊತೆಗೆ ರಿಯಾಯಿತಿ ದರದಲ್ಲಿ ಜಿಪ್ಸಂ, ಜಿಂಕ್ ಸಲ್ಪೇಟ್, ಬೊರ್ಯಾಕ್ಸ ಟ್ಯೆಕೊ ಡರ್ಮಾ ಲಭ್ಯವಿದ್ದು ಕುಳಗೇರಿ ಹೋಬಳಿಯ ರೈತರು ಉಪಯೋಗ ಪಡೆಯುವಂತೆ ಸಹಾಯಕ ಕೃಷಿ ಅಧಿಕಾರಿ ಎಂ.ಎ. ಫಾರೂಕಿ ಕೋರಿದ್ದಾರೆ.</span><br /> <br /> ಪ್ರಸಕ್ತ ವರ್ಷ ಅವಧಿಗೆ ಮುನ್ನ ಸುರಿದ ಮುಂಗಾರು ಮಳೆರಾಯ, ನಂತರ ಮುನಿಸಿಕೊಂಡಿದ್ದಾನೆ. ಈ ಸಲ ಸ್ವಲ್ಪ ತಡವಾದರೂ ಸಹ ರೈತರ ಮುಖದಲ್ಲಿ ಮಂದಹಾಸ ಮೂಡಿಸುವುದು ಗ್ಯಾರಂಟಿ ಎಂಬ ವಿಶ್ವಾಸ ಕೃಷಿಕರಲ್ಲಿದೆ. ಅದಕ್ಕಾಗಿ ರೈತ ಸಂಪರ್ಕ ಕೇಂದ್ರದಲ್ಲಿ ನೂರಾರು ರೈತರು ಸಾಲುಗಟ್ಟಿ ಬೀಜಗಳನ್ನ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.<br /> <br /> ರಾಜ್ಯದೆಲ್ಲೆಡೆ ಪ್ರಸಕ್ತ ಅವಧಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಿಂದಿನಂತೆ ಈ ಸಲ ಕೈ ಬಿಡುವುದಿಲ್ಲ ಎಂಬ ಆಶಯ ಇಲ್ಲಿನ ರೈತರ ಮೊಗದಲ್ಲಿ ಇಣುಕುತ್ತಿದೆ.<br /> <br /> ಇನ್ನು ಕೆರೂರ ಭಾಗದ ರೈತರು ಎರಡು ವರ್ಷ ಸತತ ಬರಗಾಲದಿಂದ ತತ್ತರಿಸಿದ್ದು ಈ ಸಲವಾದರೂ ಮಳೆರಾಯ ಮುನಿಸಿಕೊಳ್ಳದೇ, ನೆಮ್ಮದಿಯ ಜೀವನ ಸಾಗಿಸುವುದಕ್ಕೆ ಕರುಣೆ ತೋರಿ, ನೇಗಿಲಯೋಗಿಗಳಿಗೆ ಖುಷಿ ಕೊಡಲಿ ಎಂದು ವರುಣನಲ್ಲಿ ಪ್ರಾರ್ಥಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>