<p><strong>ಬಾದಾಮಿ:</strong> ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಮೇಲಿರುವ ಹಾಗನೂರ ಗ್ರಾಮದಲ್ಲಿ ನೆರೆ ತಹಶೀಲ್ದಾರ್ ಮತ್ತು ಪೊಲೀಸ್ ಸಿಬ್ಬಂದಿ ನೆರೆ ಸಂತ್ರಸ್ತರನ್ನು ಹೊರಗೆ ಹಾಗಿ ಸಂತ್ರಸ್ತರ ಮನೆಗಳಿಗೆ ಬೀಗ ಹಾಕಿದ್ದನ್ನು ನೆರೆ ಸಂತ್ರಸ್ತರು ಪ್ರತಿಭಟಿಸಿದರು.<br /> <br /> ಹಾಗನೂರ ಗ್ರಾಮದ 29 ಕುಟುಂಬಗಳ ನೆರೆ ಹಾವಳಿ ಸಂತ್ರಸ್ತರಾದ ಮಹಿಳೆಯರು, ಮಕ್ಕಳು ಮತ್ತು ಕುರಿಗಳ ಸಮೇತ ಬುಧವಾರ ಇಲ್ಲಿನ ಮಿನಿ ವಿಧಾನ ಸೌಧದ ಎದುರಿಗೆ ಉಪವಾಸ ಸತ್ಯಾಗ್ರಹ ಕೈಗೊಂಡರು. ತಹಶೀಲ್ದಾರ್ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.<br /> <br /> `ಎರಡು ವರ್ಷಗಳಿಂದ ಆಸರೆ ಮನೆಯಲ್ಲಿ ವಾಸವಾಗಿದ್ದೇವೆ. ಏಕಾಏಕಿ ಅಧಿಕಾರಿಗಳು ಬಂದು ನೀವು ಆಸರೆ ಮನೆಯಲ್ಲಿ ವಾಸಿಸಲು ಅನರ್ಹ ಕುಟುಂಬಗಳು ಎಂದು ನಮ್ಮನ್ನು ಹೊರಗೆ ಹಾಕಿ ಮನೆಗೆ ಬೀಗಹಾಕಿ ನಮ್ಮನ್ನು ಬೀದಿಪಾಲು ಮಾಡಿದ್ದಾರೆ' ಎಂದು ಸಂತ್ರಸ್ತರು ನೋವನ್ನು ವ್ಯಕ್ತಪಡಿಸಿದರು.<br /> <br /> ಗ್ರಾಮಸಭೆ ನಡೆಸಿ ನಮಗೆ ಮನೆಯ ಹಕ್ಕುಪತ್ರ ಕೊಡಿ ಎಂದು ಎರಡು ವರ್ಷಗಳಿಂದ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.<br /> <br /> ಈ ಕುರಿತು ತಹಶೀಲ್ದಾರ್ ಅಜೀಜ್ ದೇಸಾಯಿ ಅವರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಿ ಅರ್ಹ ನೆರೆ ಸಂತ್ರಸ್ತರನ್ನು ಗುರುತಿಸಿ ಜಿಲ್ಲಾಧಿಕಾರಿ ಮೂಲಕ ಹಕ್ಕುಪತ್ರ ಕೊಡುವುದಾಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಮೇಲಿರುವ ಹಾಗನೂರ ಗ್ರಾಮದಲ್ಲಿ ನೆರೆ ತಹಶೀಲ್ದಾರ್ ಮತ್ತು ಪೊಲೀಸ್ ಸಿಬ್ಬಂದಿ ನೆರೆ ಸಂತ್ರಸ್ತರನ್ನು ಹೊರಗೆ ಹಾಗಿ ಸಂತ್ರಸ್ತರ ಮನೆಗಳಿಗೆ ಬೀಗ ಹಾಕಿದ್ದನ್ನು ನೆರೆ ಸಂತ್ರಸ್ತರು ಪ್ರತಿಭಟಿಸಿದರು.<br /> <br /> ಹಾಗನೂರ ಗ್ರಾಮದ 29 ಕುಟುಂಬಗಳ ನೆರೆ ಹಾವಳಿ ಸಂತ್ರಸ್ತರಾದ ಮಹಿಳೆಯರು, ಮಕ್ಕಳು ಮತ್ತು ಕುರಿಗಳ ಸಮೇತ ಬುಧವಾರ ಇಲ್ಲಿನ ಮಿನಿ ವಿಧಾನ ಸೌಧದ ಎದುರಿಗೆ ಉಪವಾಸ ಸತ್ಯಾಗ್ರಹ ಕೈಗೊಂಡರು. ತಹಶೀಲ್ದಾರ್ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.<br /> <br /> `ಎರಡು ವರ್ಷಗಳಿಂದ ಆಸರೆ ಮನೆಯಲ್ಲಿ ವಾಸವಾಗಿದ್ದೇವೆ. ಏಕಾಏಕಿ ಅಧಿಕಾರಿಗಳು ಬಂದು ನೀವು ಆಸರೆ ಮನೆಯಲ್ಲಿ ವಾಸಿಸಲು ಅನರ್ಹ ಕುಟುಂಬಗಳು ಎಂದು ನಮ್ಮನ್ನು ಹೊರಗೆ ಹಾಕಿ ಮನೆಗೆ ಬೀಗಹಾಕಿ ನಮ್ಮನ್ನು ಬೀದಿಪಾಲು ಮಾಡಿದ್ದಾರೆ' ಎಂದು ಸಂತ್ರಸ್ತರು ನೋವನ್ನು ವ್ಯಕ್ತಪಡಿಸಿದರು.<br /> <br /> ಗ್ರಾಮಸಭೆ ನಡೆಸಿ ನಮಗೆ ಮನೆಯ ಹಕ್ಕುಪತ್ರ ಕೊಡಿ ಎಂದು ಎರಡು ವರ್ಷಗಳಿಂದ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.<br /> <br /> ಈ ಕುರಿತು ತಹಶೀಲ್ದಾರ್ ಅಜೀಜ್ ದೇಸಾಯಿ ಅವರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಿ ಅರ್ಹ ನೆರೆ ಸಂತ್ರಸ್ತರನ್ನು ಗುರುತಿಸಿ ಜಿಲ್ಲಾಧಿಕಾರಿ ಮೂಲಕ ಹಕ್ಕುಪತ್ರ ಕೊಡುವುದಾಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>