ಮಂಗಳವಾರ, 4 ನವೆಂಬರ್ 2025
×
ADVERTISEMENT
ADVERTISEMENT

ಸಹಕಾರ ಸಂಘಗಳ ರಚನೆಗೆ ಏಜೆನ್ಸಿಗಳ ಲಾಬಿಯೇ ಅಡ್ಡಿ

ಕಾರ್ಯಾರಂಭವಾಗದ ಜಿಲ್ಲಾ ಕಾರ್ಮಿಕರ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘಗಳು
Published : 30 ಆಗಸ್ಟ್ 2025, 18:20 IST
Last Updated : 30 ಆಗಸ್ಟ್ 2025, 18:20 IST
ಫಾಲೋ ಮಾಡಿ
Comments
ಸಂಘ ರಚನೆ ಬಗ್ಗೆ ಕಾರ್ಮಿಕ ಸಚಿವರಿಗೂ ಮನವಿ ಮಾಡಿದ್ದೇವೆ. ಏಜೆನ್ಸಿಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವ ಅನುಮಾನಗಳಿವೆ. ಸರ್ಕಾರ ಈ ಬಗ್ಗೆ ಗಮನಿಸಬೇಕು.
– ಎ.ದೇವದಾಸ್, ಎಐಯುಟಿಯುಸಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ 
ಬಳ್ಳಾರಿ ಸಂಘಕ್ಕೆ ಕೆಟಿಪಿಪಿ ಕಾಯ್ದೆ ಅಡಿ 4(ಜಿ) ವಿನಾಯಿತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ವಿನಾಯಿತಿ ಸಿಕ್ಕ ಕೂಡಲೇ ಸಂಘ ಕಾರ್ಯಾರಂಭವಾಗಲಿದೆ.
– ಪ್ರಶಾಂತ್‌ ಕುಮಾರ್‌ ಮಿಶ್ರಾ, ಜಿಲ್ಲಾಧಿಕಾರಿ
ಏನಿದು ಜಿಲ್ಲಾ ಕಾರ್ಮಿಕ ಸೇವೆಗಳ ಸಹಕಾರ ಸಂಘ?
ಸರ್ಕಾರದ ಪ್ರತಿ ಇಲಾಖೆ, ಮಂಡಳಿ, ನಿಗಮಗಳಿಗೆ ಅಗತ್ಯವಿರುವ ಗುತ್ತಿಗೆ ನೌಕರರನ್ನು ನೇಮಿಸುವುದು ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘಗಳ’ ಮುಖ್ಯ ಉದ್ದೇಶ. ಇದಕ್ಕೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ನೌಕರರಿಗೆ ಸರ್ಕಾರದ ಮೂಲಕವೇ ನೇರವಾಗಿ ವೇತನ ಪಾವತಿ, ಭವಿಷ್ಯ ನಿಧಿ, ಇಎಸ್ಐ, ಸಾಲ ಸೌಲಭ್ಯ ಸೇರಿದಂತೆ ವಿವಿಧ ಭದ್ರತೆಗಳನ್ನು ಸಂಘ ಒದಗಿಸುತ್ತದೆ. ಗುತ್ತಿಗೆ ಕಾರ್ಮಿಕರು ಎದುರಿಸುತ್ತಿರುವ ಅನಿಶ್ಚಿತತೆ ದೂರವಾಗುವ ಆಶಯವಿದೆ. ಕಾರ್ಮಿಕ ಸಂಘ ಆರಂಭವಾದರೆ, ಏಜೆನ್ಸಿಗಳಿಂದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪದ್ಧತಿಯೇ ನಿರ್ಮೂಲನೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT