<p><strong>ಬಳ್ಳಾರಿ</strong>: ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸೋಮವಾರ ಹಮಾಲರು ಮತ್ತು ದಲ್ಲಾಳಿಗಳ ನಡುವೆ ಜಗಳ ನಡೆದಿದ್ದು, ದಿನದ ಮಟ್ಟಿಗೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು.</p>.<p>ಎಪಿಎಂಸಿಗೆ ಸೋಮವಾರ ಶೇಂಗಾ, ಜೋಳ ಹೆಚ್ಚಿನ ಆವಕವಾಗಿದೆ. ಹೀಗಾಗಿ ಉತ್ಪನ್ನಗಳನ್ನು ರಾಶಿ ಹಾಕುವ ವಿಚಾರಕ್ಕೆ ಮೊದಲಿಗೆ ಎರಡು ಅಂಗಡಿಗಳ ಹಮಾಲರ ನಡುವೆ ಜಗಳ ನಡೆದಿದೆ. ಈ ಜಗಳದಲ್ಲಿ ದಲ್ಲಾಳಿಗಳು ಮಧ್ಯ ಪ್ರವೇಶ ಮಾಡಿದ್ದರು. ಬಳಿಕ ಇದು ಹಮಾಲರು ಮತ್ತು ದಲ್ಲಾಳಿಗಳ ಜಗಳವಾಗಿ ಪರಿವರ್ತನೆಯಾಯಿತು ಎನ್ನಲಾಗಿದೆ.</p>.<p>ಇಬ್ಬರ ನಡುವಿನ ಜಗಳದ ಪರಿಣಾಮವಾಗಿ ಇಡೀ ದಿನ ವ್ಯಾಪಾರ ಸ್ಥಗಿತಗೊಂಡಿತು. ಸಂಜೆ ಹೊತ್ತಿಗೆ ಮುಖಂಡರ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದು ಟೆಂಡರ್ ಆರಂಭವಾಯಿತು. ಆದರೆ ತೂಕ ಲೆಕ್ಕ ಹಾಕುವ ಕಾರ್ಯವನ್ನು ಮಾರನೇ ದಿನಕ್ಕೆ ಮುಂದೂಡಲಾಗಿದೆ.</p>.<p>ಮಂಗಳವಾರ ಬೆಳಿಗ್ಗೆ ಐದರಿಂದಲೇ ತೂಕ ಲೆಕ್ಕಹಾಕುವ ಕಾರ್ಯ ಆರಂಭವಾಗಲಿದ್ದು, ವ್ಯಾಪಾರ ನಡೆಯಲಿದೆ ಎಂದು ದಲ್ಲಾಳಿಗಳ ಸಂಘದ ಮುಖಂಡ ಗುರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>ರೈತರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸೋಮವಾರ ಹಮಾಲರು ಮತ್ತು ದಲ್ಲಾಳಿಗಳ ನಡುವೆ ಜಗಳ ನಡೆದಿದ್ದು, ದಿನದ ಮಟ್ಟಿಗೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು.</p>.<p>ಎಪಿಎಂಸಿಗೆ ಸೋಮವಾರ ಶೇಂಗಾ, ಜೋಳ ಹೆಚ್ಚಿನ ಆವಕವಾಗಿದೆ. ಹೀಗಾಗಿ ಉತ್ಪನ್ನಗಳನ್ನು ರಾಶಿ ಹಾಕುವ ವಿಚಾರಕ್ಕೆ ಮೊದಲಿಗೆ ಎರಡು ಅಂಗಡಿಗಳ ಹಮಾಲರ ನಡುವೆ ಜಗಳ ನಡೆದಿದೆ. ಈ ಜಗಳದಲ್ಲಿ ದಲ್ಲಾಳಿಗಳು ಮಧ್ಯ ಪ್ರವೇಶ ಮಾಡಿದ್ದರು. ಬಳಿಕ ಇದು ಹಮಾಲರು ಮತ್ತು ದಲ್ಲಾಳಿಗಳ ಜಗಳವಾಗಿ ಪರಿವರ್ತನೆಯಾಯಿತು ಎನ್ನಲಾಗಿದೆ.</p>.<p>ಇಬ್ಬರ ನಡುವಿನ ಜಗಳದ ಪರಿಣಾಮವಾಗಿ ಇಡೀ ದಿನ ವ್ಯಾಪಾರ ಸ್ಥಗಿತಗೊಂಡಿತು. ಸಂಜೆ ಹೊತ್ತಿಗೆ ಮುಖಂಡರ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದು ಟೆಂಡರ್ ಆರಂಭವಾಯಿತು. ಆದರೆ ತೂಕ ಲೆಕ್ಕ ಹಾಕುವ ಕಾರ್ಯವನ್ನು ಮಾರನೇ ದಿನಕ್ಕೆ ಮುಂದೂಡಲಾಗಿದೆ.</p>.<p>ಮಂಗಳವಾರ ಬೆಳಿಗ್ಗೆ ಐದರಿಂದಲೇ ತೂಕ ಲೆಕ್ಕಹಾಕುವ ಕಾರ್ಯ ಆರಂಭವಾಗಲಿದ್ದು, ವ್ಯಾಪಾರ ನಡೆಯಲಿದೆ ಎಂದು ದಲ್ಲಾಳಿಗಳ ಸಂಘದ ಮುಖಂಡ ಗುರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>ರೈತರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>