<p><strong>ಹಗರಿಬೊಮ್ಮನಹಳ್ಳಿ</strong>: ‘ಮನುಷ್ಯರ ದುರಾಸೆಗಾಗಿ ಪಕ್ಷಿ ಸಂಕುಲ ಅಪಾಯದಲ್ಲಿದೆ’ ಎಂದು ಧಾರವಾಡದ ಪಕ್ಷಿತಜ್ಞ ಪ್ರಕಾಶ ಗೌಡರ ಆತಂಕ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ಅಂಕಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ, ಗ್ರೀನ್ ಎಚ್ಬಿಎಚ್ ಮತ್ತು ಬಿಎನ್ಎಚ್ಎಸ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಶ್ವ ವಲಸೆ ಹಕ್ಕಿ ದಿನ’ ಮತ್ತು ‘ವಿಶ್ವ ಜೌಗು ಪ್ರದೇಶ ದಿನಾಚರಣೆ’ಯಲ್ಲಿ ಮಾತನಾಡಿದರು.</p>.<p>ಪಕ್ಷಿ ಸಂಕುಲ ಇಲ್ಲದೆ ಮಾನವ ಬದುಕಲಾರ, ಬೆಳಗಿನ ಜಾವ ಪಕ್ಷಿಧ್ವನಿ ಆಲಿಸಿದರೆ ಅದು ಧ್ಯಾನಕ್ಕೆ ಸಮ. ಪಕ್ಷಿಗಳಿಂದ ಪ್ರಕೃತಿಗೆ ನೀಡಿದ ಕೊಡುಗೆ ಅಪಾರ, ಆದರೆ ಹಣದ ಆಸೆಗಾಗಿ ಪಕ್ಷಿಗಳನ್ನು ಕೊಲ್ಲುವ ಅವುಗಳ ಕೊಕ್ಕರೆಯನ್ನು ಮಾರಾಟ ಮಾಡುವ ಘಟನೆಗಳು ಆವ್ಯಾಹತವಾಗಿ ನಡೆಯುತ್ತಿವೆ, ಈ ಕುರಿತು ಅರಿವು ಮೂಡಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ ಎಂದರು.</p>.<p>ವಿದೇಶದಿಂದ ವಲಸೆ ಬರುವ ಬಾರ್ ಹೆಡೆಡ್ ಗೂಸ್(ಪಟ್ಟಿ ತಲೆ ಹೆಬ್ಬಾತು), ಮ್ಯಾಂಕ್ಸ್ಶಿಯರ್ ವಾಟರ್ ಹಾಗೂ ಚಿಟಗುಬ್ಬಿ, ಹಾರ್ನ್ಬಿಲ್(ದಾಸಮಂಗಟ್ಟೆ) ಸೇರಿದಂತೆ ವಿವಿಧ ರೆಕ್ಕೆ ಮಿತ್ರರ ಜೀವನ ಚಕ್ರ ಕುರಿತು ಎಳೆಎಳೆಯಾಗಿ ಬಿಡಿಸಿದ ಕಥಾ ಹಂದರದ ಶೈಲಿ ಗಮನ ಸೆಳೆಯಿತು.</p>.<p>ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಡಿ.ಭಾಸ್ಕರ್ ಕಾರ್ಯಕ್ರಮ ಉದ್ಘಾಟಿಸಿ, ಬಾನಾಡಿಗಳು ಮತ್ತು ವನ್ಯಜೀವಿಗಳ ಆವಾಸ ಪ್ರದೇಶವನ್ನು ರಕ್ಷಿಸುವ ಹೊಣೆ ಯುವಕರ ಮೇಲಿದೆ, ಈ ಕುರಿತು ಪ್ರೌಢಶಾಲೆ ಹಂತದಿಂದಲೇ ವಿದ್ಯಾರ್ಥಿಗಳಿಗೆ ಅಂಕಸಮುದ್ರ ಪಕ್ಷಿಧಾಮದಲ್ಲಿನ ಜೀವವೈವಿಧ್ಯ ಕುರಿತು ಸಮಗ್ರ ಪರಿಚಯಿಸಬೇಕು ಎಂದರು.</p>.<p>ಪಕ್ಷಿತಜ್ಞ ವಿಜಯ್ ಇಟ್ಟಿಗಿ, ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ವಿದೇಶದ ವಲಸೆ ಹಕ್ಕಿ ಲಿಟಲ್ ಟರ್ನ್ 3ವರ್ಷಗಳ ಹಿಂದೆ 60ಗೂಡು ನಿರ್ಮಿಸುವ ಮೂಲಕ ಸಂತಾನೋತ್ಪತ್ತಿ ನಡೆಸಿದ್ದವು, ಈಗ ಕೇವಲ 2 ಉಳಿದಿವೆ, ಇದು ದುರಂತಕ್ಕೆ ಸಾಕ್ಷಿಯಾಗಿದೆ. ಇದು ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ, ಈ ಕುರಿತು ಆಂದೋಲನ ನಡೆಯಬೇಕು ಎಂದು ತಿಳಿಸಿದರು.</p>.<p>ವಲಯ ಅರಣ್ಯಾಧಿಕಾರಿಗಳಾದ ಆರ್.ಉಮೇಶ್, ಕೆ.ಎಂ.ನಾಗರಾಜ್, ಕಿರಣ್ಕುಮಾರ್ ಕಲ್ಲಮ್ಮನವರ್, ಗ್ರೀನ್ ಎಚ್ಬಿಎಚ್ನ ಆನಂದ್ಬಾಬು, ಶಾಲೆಯ ಮುಖ್ಯ ಶಿಕ್ಷಕ ಜಿ.ಶ್ರೀನಿವಾಸ್ ಮಾತನಾಡಿದರು.</p>.<p>ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರೀನ್ ಎಚ್ಬಿಎಚ್ನಿಂದ ಹಮ್ಮಿಕೊಂಡಿದ್ದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಸ್.ವಿಜಯಕುಮಾರ್, ಯು.ವಾಯು, ಹೃತಿಕ್ ಹಾಗೂ ವಿದ್ಯಾ, ಪುಷ್ಪಾ, ರುಕ್ಮಿಣಿ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.</p>.<p>ಎಸ್ಡಿಎಂಸಿ ಅಧ್ಯಕ್ಷ ಕೆ.ನಾಗರಾಜ, ಸದಸ್ಯ ಎಸ್.ಕೊಟ್ರೇಶ್, ಗ್ರೀನ್ ಎಚ್ಬಿಎಚ್ನ ವಿಕಾಸ್ ಬಾಫನಾ, ಅಶೋಕ ಭಾವಿಕಟ್ಟಿ, ಕೆ.ಎಂ.ಪ್ರಶಾಂತ್, ರಾಜ್ಯ ಸಂಪನ್ಮೂಲ ವ್ಯಕ್ತಿ ಕೊಟ್ರೇಶ್ ಸೊನ್ನದ್, ಬಿಎನ್ಎಚ್ಎಸ್ ಸಂಶೋಧಕ ಎಚ್.ರಮೇಶ್, ಡಿಆರ್ಎಫ್ಒ ಹರೀಶ್, ಅರಣ್ಯಾಧಿಕಾರಿಗಳಾದ ಲೀಲಾ, ಮಂಜುನಾಥ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ</strong>: ‘ಮನುಷ್ಯರ ದುರಾಸೆಗಾಗಿ ಪಕ್ಷಿ ಸಂಕುಲ ಅಪಾಯದಲ್ಲಿದೆ’ ಎಂದು ಧಾರವಾಡದ ಪಕ್ಷಿತಜ್ಞ ಪ್ರಕಾಶ ಗೌಡರ ಆತಂಕ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ಅಂಕಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ, ಗ್ರೀನ್ ಎಚ್ಬಿಎಚ್ ಮತ್ತು ಬಿಎನ್ಎಚ್ಎಸ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಶ್ವ ವಲಸೆ ಹಕ್ಕಿ ದಿನ’ ಮತ್ತು ‘ವಿಶ್ವ ಜೌಗು ಪ್ರದೇಶ ದಿನಾಚರಣೆ’ಯಲ್ಲಿ ಮಾತನಾಡಿದರು.</p>.<p>ಪಕ್ಷಿ ಸಂಕುಲ ಇಲ್ಲದೆ ಮಾನವ ಬದುಕಲಾರ, ಬೆಳಗಿನ ಜಾವ ಪಕ್ಷಿಧ್ವನಿ ಆಲಿಸಿದರೆ ಅದು ಧ್ಯಾನಕ್ಕೆ ಸಮ. ಪಕ್ಷಿಗಳಿಂದ ಪ್ರಕೃತಿಗೆ ನೀಡಿದ ಕೊಡುಗೆ ಅಪಾರ, ಆದರೆ ಹಣದ ಆಸೆಗಾಗಿ ಪಕ್ಷಿಗಳನ್ನು ಕೊಲ್ಲುವ ಅವುಗಳ ಕೊಕ್ಕರೆಯನ್ನು ಮಾರಾಟ ಮಾಡುವ ಘಟನೆಗಳು ಆವ್ಯಾಹತವಾಗಿ ನಡೆಯುತ್ತಿವೆ, ಈ ಕುರಿತು ಅರಿವು ಮೂಡಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ ಎಂದರು.</p>.<p>ವಿದೇಶದಿಂದ ವಲಸೆ ಬರುವ ಬಾರ್ ಹೆಡೆಡ್ ಗೂಸ್(ಪಟ್ಟಿ ತಲೆ ಹೆಬ್ಬಾತು), ಮ್ಯಾಂಕ್ಸ್ಶಿಯರ್ ವಾಟರ್ ಹಾಗೂ ಚಿಟಗುಬ್ಬಿ, ಹಾರ್ನ್ಬಿಲ್(ದಾಸಮಂಗಟ್ಟೆ) ಸೇರಿದಂತೆ ವಿವಿಧ ರೆಕ್ಕೆ ಮಿತ್ರರ ಜೀವನ ಚಕ್ರ ಕುರಿತು ಎಳೆಎಳೆಯಾಗಿ ಬಿಡಿಸಿದ ಕಥಾ ಹಂದರದ ಶೈಲಿ ಗಮನ ಸೆಳೆಯಿತು.</p>.<p>ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಡಿ.ಭಾಸ್ಕರ್ ಕಾರ್ಯಕ್ರಮ ಉದ್ಘಾಟಿಸಿ, ಬಾನಾಡಿಗಳು ಮತ್ತು ವನ್ಯಜೀವಿಗಳ ಆವಾಸ ಪ್ರದೇಶವನ್ನು ರಕ್ಷಿಸುವ ಹೊಣೆ ಯುವಕರ ಮೇಲಿದೆ, ಈ ಕುರಿತು ಪ್ರೌಢಶಾಲೆ ಹಂತದಿಂದಲೇ ವಿದ್ಯಾರ್ಥಿಗಳಿಗೆ ಅಂಕಸಮುದ್ರ ಪಕ್ಷಿಧಾಮದಲ್ಲಿನ ಜೀವವೈವಿಧ್ಯ ಕುರಿತು ಸಮಗ್ರ ಪರಿಚಯಿಸಬೇಕು ಎಂದರು.</p>.<p>ಪಕ್ಷಿತಜ್ಞ ವಿಜಯ್ ಇಟ್ಟಿಗಿ, ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ವಿದೇಶದ ವಲಸೆ ಹಕ್ಕಿ ಲಿಟಲ್ ಟರ್ನ್ 3ವರ್ಷಗಳ ಹಿಂದೆ 60ಗೂಡು ನಿರ್ಮಿಸುವ ಮೂಲಕ ಸಂತಾನೋತ್ಪತ್ತಿ ನಡೆಸಿದ್ದವು, ಈಗ ಕೇವಲ 2 ಉಳಿದಿವೆ, ಇದು ದುರಂತಕ್ಕೆ ಸಾಕ್ಷಿಯಾಗಿದೆ. ಇದು ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ, ಈ ಕುರಿತು ಆಂದೋಲನ ನಡೆಯಬೇಕು ಎಂದು ತಿಳಿಸಿದರು.</p>.<p>ವಲಯ ಅರಣ್ಯಾಧಿಕಾರಿಗಳಾದ ಆರ್.ಉಮೇಶ್, ಕೆ.ಎಂ.ನಾಗರಾಜ್, ಕಿರಣ್ಕುಮಾರ್ ಕಲ್ಲಮ್ಮನವರ್, ಗ್ರೀನ್ ಎಚ್ಬಿಎಚ್ನ ಆನಂದ್ಬಾಬು, ಶಾಲೆಯ ಮುಖ್ಯ ಶಿಕ್ಷಕ ಜಿ.ಶ್ರೀನಿವಾಸ್ ಮಾತನಾಡಿದರು.</p>.<p>ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರೀನ್ ಎಚ್ಬಿಎಚ್ನಿಂದ ಹಮ್ಮಿಕೊಂಡಿದ್ದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಸ್.ವಿಜಯಕುಮಾರ್, ಯು.ವಾಯು, ಹೃತಿಕ್ ಹಾಗೂ ವಿದ್ಯಾ, ಪುಷ್ಪಾ, ರುಕ್ಮಿಣಿ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.</p>.<p>ಎಸ್ಡಿಎಂಸಿ ಅಧ್ಯಕ್ಷ ಕೆ.ನಾಗರಾಜ, ಸದಸ್ಯ ಎಸ್.ಕೊಟ್ರೇಶ್, ಗ್ರೀನ್ ಎಚ್ಬಿಎಚ್ನ ವಿಕಾಸ್ ಬಾಫನಾ, ಅಶೋಕ ಭಾವಿಕಟ್ಟಿ, ಕೆ.ಎಂ.ಪ್ರಶಾಂತ್, ರಾಜ್ಯ ಸಂಪನ್ಮೂಲ ವ್ಯಕ್ತಿ ಕೊಟ್ರೇಶ್ ಸೊನ್ನದ್, ಬಿಎನ್ಎಚ್ಎಸ್ ಸಂಶೋಧಕ ಎಚ್.ರಮೇಶ್, ಡಿಆರ್ಎಫ್ಒ ಹರೀಶ್, ಅರಣ್ಯಾಧಿಕಾರಿಗಳಾದ ಲೀಲಾ, ಮಂಜುನಾಥ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>