‘ರೈಲು ನಿಲ್ದಾಣದ ಅಧಿಕಾರಿಗಳ ಸಹಯೋಗದೊಂದಿಗೆ ಕಳೆದ ಒಂದು ವರ್ಷದಲ್ಲಿ ಒಟ್ಟು 22 ಮಕ್ಕಳನ್ನು ರಕ್ಷಿಸಿ ಅವರ ಪೋಷಕರಿಗೆ ಒಪ್ಪಿಸಲಾಗಿದೆ’ ಎಂದು ಮಕ್ಕಳ ಸಹಾಯವಾಣಿ ಸಂಯೋಜಕ ಚಿದಾನಂದ ಹೇಳಿದರು. ಡಾನ್ ಬಾಸ್ಕೊ ಸಂಸ್ಥೆಯ ಫಾದರ್ ಯೇಸುದಾಸ್, ರೈಲು ನಿಲ್ದಾಣದ ಅಧಿಕಾರಿ ಜಿ. ಸುನೀಲ್, ವೈದ್ಯಕೀಯ ಅಧಿಕಾರಿ ಕೆ. ಭಾರ್ಗವಿ, ನಿಲ್ದಾಣದ ಅಧಿಕಾರಿ ಉಮರ್ ಬಾನಿ ಇದ್ದರು.