<p><strong>ಸಿರಗುಪ್ಪ</strong>: ದಸ್ತಗಿರಿ ವಾರೆಂಟ್ ಹೊಂದಿದ್ದ ತೀರ್ಪು ಋಣಿದಾರ ಆರೋಪಿಯೊಬ್ಬ ನಗರದ ಜೆಎಂಎಫ್ಸಿ ನ್ಯಾಯಾಲಯದ ಆವರಣದಿಂದ ಬುಧವಾರ ಪರಾರಿಯಾಗಿದ್ದಾನೆ. </p><p>2022ರ ಪ್ರಕರಣವೊಂದರಲ್ಲಿ ತೀರ್ಪು ಋಣಿದಾರ ಆರೋಪಿ-3 ಆಗಿದ್ದ ಸಿಂಧನೂರು ನಗರದ ನಿವಾಸಿ ಉಮೇಶ ಪರಾರಿಯಾದ ಆರೋಪಿ.</p><p>ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಲಯ ದಸ್ತಗಿರಿ ವಾರೆಂಟ್ ಹೊರಡಿಸಿದ್ದರಿಂದ ಉಮೇಶ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ನ್ಯಾಯಾಲಯದ ಬೇಲೀಫ್ ಗಾಧಿಲಿಂಗ ಅವರು ಉಮೇಶ್ನನ್ನು ನ್ಯಾಯಾಲಯಕ್ಕೆ ಕರೆತಂದಿದ್ದರು. ಉಮೇಶ್ನ ಕೈಕಾಲುಗಳಿಗೆ ಆಗಿರುವ ತರಚಿದ ಗಾಯಗಳನ್ನು ನೋಡಿದ ನ್ಯಾಯಾಧೀಶರು, ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ತಿಳಿಸಿದ್ದರು. </p>.<p>ಚಿಕಿತ್ಸೆ ನಂತರ ನ್ಯಾಯಾಲಯದ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಉಮೇಶ್ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎಂದು ನ್ಯಾಯಾಲಯದ ಬೇಲೀಫ್ ಕೆ.ಗಾದಿಲಿಂಗ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಗುಪ್ಪ</strong>: ದಸ್ತಗಿರಿ ವಾರೆಂಟ್ ಹೊಂದಿದ್ದ ತೀರ್ಪು ಋಣಿದಾರ ಆರೋಪಿಯೊಬ್ಬ ನಗರದ ಜೆಎಂಎಫ್ಸಿ ನ್ಯಾಯಾಲಯದ ಆವರಣದಿಂದ ಬುಧವಾರ ಪರಾರಿಯಾಗಿದ್ದಾನೆ. </p><p>2022ರ ಪ್ರಕರಣವೊಂದರಲ್ಲಿ ತೀರ್ಪು ಋಣಿದಾರ ಆರೋಪಿ-3 ಆಗಿದ್ದ ಸಿಂಧನೂರು ನಗರದ ನಿವಾಸಿ ಉಮೇಶ ಪರಾರಿಯಾದ ಆರೋಪಿ.</p><p>ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಲಯ ದಸ್ತಗಿರಿ ವಾರೆಂಟ್ ಹೊರಡಿಸಿದ್ದರಿಂದ ಉಮೇಶ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ನ್ಯಾಯಾಲಯದ ಬೇಲೀಫ್ ಗಾಧಿಲಿಂಗ ಅವರು ಉಮೇಶ್ನನ್ನು ನ್ಯಾಯಾಲಯಕ್ಕೆ ಕರೆತಂದಿದ್ದರು. ಉಮೇಶ್ನ ಕೈಕಾಲುಗಳಿಗೆ ಆಗಿರುವ ತರಚಿದ ಗಾಯಗಳನ್ನು ನೋಡಿದ ನ್ಯಾಯಾಧೀಶರು, ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ತಿಳಿಸಿದ್ದರು. </p>.<p>ಚಿಕಿತ್ಸೆ ನಂತರ ನ್ಯಾಯಾಲಯದ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಉಮೇಶ್ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎಂದು ನ್ಯಾಯಾಲಯದ ಬೇಲೀಫ್ ಕೆ.ಗಾದಿಲಿಂಗ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>