<p>ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ಮತ್ತು ವಕೀಲರು ಇಲ್ಲಿನ ಕಾರಾಗೃಹದಲ್ಲಿ ಗುರುವಾರ ಭೇಟಿಯಾಗಿ, ಅರ್ಧಗಂಟೆ ಚರ್ಚಿಸಿದರು.</p>.<p>ಮಧ್ಯಾಹ್ನ 12.30 ರಿಂದ 1ಗಂಟೆಯವರೆಗೆ ಭೇಟಿಯಾಯಿತು. ವಿಶೇಷ ಭದ್ರತಾ ಕೊಠಡಿಯಿಂದ ಬರುವಾಗ ಮತ್ತು ಮರಳುವಾಗ ದರ್ಶನ್ ಕೈಯಲ್ಲಿ ಎರಡು ಚೀಲಗಳಿದ್ದವು.</p>.<p>ಗುವಾಹಟಿಯ ಕಾಮಾಕ್ಯ ದೇವಸ್ಥಾನದಿಂದ ತರಲಾಗಿದ್ದ ಪ್ರಸಾದವನ್ನು ದರ್ಶನ್ ಅವರಿಗೆ ಪತ್ನಿ ವಿಜಯಲಕ್ಷ್ಮೀ ನೀಡಿದರು ಎನ್ನಲಾಗಿದೆ. ಅದು ಖಚಿತವಾಗಿಲ್ಲ. </p>.<p>‘ದೋಷಾರೋಪ ಪಟ್ಟಿ ಮತ್ತು ಕಾನೂನು ಹೋರಾಟದ ಬಗ್ಗೆ ಚರ್ಚಿಸಿದೆವು. ಹಿರಿಯ ವಕೀಲರ ಜೊತೆ ಚರ್ಚಿಸಿ, ಜಾಮೀನು ಅರ್ಜಿ ಸಲ್ಲಿಕೆ ಕುರಿತು ತೀರ್ಮಾನಿಸುತ್ತೇವೆ’ ಎಂದು ಅವರ ವಕೀಲರು ತಿಳಿಸಿದರು.</p>.<p class="Subhead">ಮಾಧ್ಯಮಗಳಿಗೆ ಬೆರಳು:</p>.<p>ವಕೀಲರ ಭೇಟಿಗೆ ಮಧ್ಯಾಹ್ನ 4.15ಕ್ಕೆ ವಿಶೇಷ ಭದ್ರತಾ ಕೊಠಡಿಯಿಂದ ಜೈಲಿನ ಸಂದರ್ಶಕರ ಕೊಠಡಿಗೆ ನಡೆದು ಹೋಗುತ್ತಿದ್ದ ದರ್ಶನ್, ಕಾರಾಗೃಹದ ಗೇಟು ಬಳಿ ನಿಂತಿದ್ದ ಮಾಧ್ಯಮದವರನ್ನು ಕಂಡು ಮಧ್ಯದ ಬೆರಳು ಪ್ರದರ್ಶಿಸಿದರು. ಕೊಠಡಿಗೆ ಮರಳುವಾಗಲೂ ಅವರು ಮಧ್ಯದ ಬೆರಳನ್ನು ಪ್ರದರ್ಶಿಸಿದರು. ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ಮತ್ತು ವಕೀಲರು ಇಲ್ಲಿನ ಕಾರಾಗೃಹದಲ್ಲಿ ಗುರುವಾರ ಭೇಟಿಯಾಗಿ, ಅರ್ಧಗಂಟೆ ಚರ್ಚಿಸಿದರು.</p>.<p>ಮಧ್ಯಾಹ್ನ 12.30 ರಿಂದ 1ಗಂಟೆಯವರೆಗೆ ಭೇಟಿಯಾಯಿತು. ವಿಶೇಷ ಭದ್ರತಾ ಕೊಠಡಿಯಿಂದ ಬರುವಾಗ ಮತ್ತು ಮರಳುವಾಗ ದರ್ಶನ್ ಕೈಯಲ್ಲಿ ಎರಡು ಚೀಲಗಳಿದ್ದವು.</p>.<p>ಗುವಾಹಟಿಯ ಕಾಮಾಕ್ಯ ದೇವಸ್ಥಾನದಿಂದ ತರಲಾಗಿದ್ದ ಪ್ರಸಾದವನ್ನು ದರ್ಶನ್ ಅವರಿಗೆ ಪತ್ನಿ ವಿಜಯಲಕ್ಷ್ಮೀ ನೀಡಿದರು ಎನ್ನಲಾಗಿದೆ. ಅದು ಖಚಿತವಾಗಿಲ್ಲ. </p>.<p>‘ದೋಷಾರೋಪ ಪಟ್ಟಿ ಮತ್ತು ಕಾನೂನು ಹೋರಾಟದ ಬಗ್ಗೆ ಚರ್ಚಿಸಿದೆವು. ಹಿರಿಯ ವಕೀಲರ ಜೊತೆ ಚರ್ಚಿಸಿ, ಜಾಮೀನು ಅರ್ಜಿ ಸಲ್ಲಿಕೆ ಕುರಿತು ತೀರ್ಮಾನಿಸುತ್ತೇವೆ’ ಎಂದು ಅವರ ವಕೀಲರು ತಿಳಿಸಿದರು.</p>.<p class="Subhead">ಮಾಧ್ಯಮಗಳಿಗೆ ಬೆರಳು:</p>.<p>ವಕೀಲರ ಭೇಟಿಗೆ ಮಧ್ಯಾಹ್ನ 4.15ಕ್ಕೆ ವಿಶೇಷ ಭದ್ರತಾ ಕೊಠಡಿಯಿಂದ ಜೈಲಿನ ಸಂದರ್ಶಕರ ಕೊಠಡಿಗೆ ನಡೆದು ಹೋಗುತ್ತಿದ್ದ ದರ್ಶನ್, ಕಾರಾಗೃಹದ ಗೇಟು ಬಳಿ ನಿಂತಿದ್ದ ಮಾಧ್ಯಮದವರನ್ನು ಕಂಡು ಮಧ್ಯದ ಬೆರಳು ಪ್ರದರ್ಶಿಸಿದರು. ಕೊಠಡಿಗೆ ಮರಳುವಾಗಲೂ ಅವರು ಮಧ್ಯದ ಬೆರಳನ್ನು ಪ್ರದರ್ಶಿಸಿದರು. ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>