<p><strong>ಹಗರಿಬೊಮ್ಮನಹಳ್ಳಿ:</strong> ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಬಳಿ ರಾಘವೇಂದ್ರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಪಕ್ಕದ ಬೇವಿನ ಮರವೊಂದಕ್ಕೆ ಸತ್ತ ಕುರಿಮರಿಯೊಂದನ್ನು ನೇತು ಹಾಕಲಾಗಿದೆ.</p>.<p>ದಿಢೀರ್ ಕಾಣಿಸಿಕೊಂಡ ರೋಗದಿಂದ ಮೃತಪಟ್ಟ ಕುರಿಮರಿಯನ್ನು ನೇತು ಹಾಕಿರುವುದು ಬುಧವಾರ ಆತಂಕಕ್ಕೆ ಕಾರಣವಾಗಿದೆ.</p>.<p>ಕುರಿಗಳು ಮೈಲಿರೋಗಕ್ಕೆ ತುತ್ತಾದರೆ ಅವುಗಳನ್ನು ಮರಗಳಿಗೆ ನೇತುಹಾಕಲಾಗುತ್ತದೆ. ರಸ್ತೆಯಲ್ಲಿ ನಡೆದಾಡುವ ಜನರ ದೃಷ್ಟಿ ಸತ್ತ ನೇತಾಡುವ ಕುರಿ ಮೇಲೆ ಬಿದ್ದರೆ ಬಂದಿರುವ ರೋಗ ಇತರೆ ಕುರಿಗಳಿಗೆ ತಟ್ಟದು ಎನ್ನುವ ನಂಬಿಕೆ ಇವರದ್ದಾಗಿದೆ.</p>.<p>ಆದರೆ ಇಲ್ಲಿ ಆಗಿದ್ದೇ ಬೇರೆ. ನೇತು ಹಾಕಿದ ಕುರಿಮರಿಯನ್ನು ಬೀದಿ ನಾಯಿಗಳು ತಿಂದು ಹಾಕಿದವು, ನಾಯಿಗಳಿಗೆ ರೋಗ ತಗುಲಿದರೆ ಅದರ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.</p>.<div><blockquote>ಮೈಲಿರೋಗ ಇರುವ ಯಾವುದೇ ಪ್ರಕರಣಗಳು ಇದುವರೆಗೂ ಕಂಡುಬಂದಿಲ್ಲ. ನೇತು ಹಾಕುವುದರಿಂದ ರೋಗಗಳು ವಾಸಿಯಾಗುವುದಿಲ್ಲ. ಸರಿಯಾದ ಸಮಯದಲ್ಲಿ ಲಸಿಕೆ ನೀಡಬೇಕು ಸತ್ತ ಕುರಿಗಳನ್ನು ಸ್ಥಳದಲ್ಲಿಯೇ ಹೂತು ಹಾಕಬೇಕು.</blockquote><span class="attribution">ಡಾ.ಸೂರಪ್ಪ ಪಶುವೈದ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಬಳಿ ರಾಘವೇಂದ್ರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಪಕ್ಕದ ಬೇವಿನ ಮರವೊಂದಕ್ಕೆ ಸತ್ತ ಕುರಿಮರಿಯೊಂದನ್ನು ನೇತು ಹಾಕಲಾಗಿದೆ.</p>.<p>ದಿಢೀರ್ ಕಾಣಿಸಿಕೊಂಡ ರೋಗದಿಂದ ಮೃತಪಟ್ಟ ಕುರಿಮರಿಯನ್ನು ನೇತು ಹಾಕಿರುವುದು ಬುಧವಾರ ಆತಂಕಕ್ಕೆ ಕಾರಣವಾಗಿದೆ.</p>.<p>ಕುರಿಗಳು ಮೈಲಿರೋಗಕ್ಕೆ ತುತ್ತಾದರೆ ಅವುಗಳನ್ನು ಮರಗಳಿಗೆ ನೇತುಹಾಕಲಾಗುತ್ತದೆ. ರಸ್ತೆಯಲ್ಲಿ ನಡೆದಾಡುವ ಜನರ ದೃಷ್ಟಿ ಸತ್ತ ನೇತಾಡುವ ಕುರಿ ಮೇಲೆ ಬಿದ್ದರೆ ಬಂದಿರುವ ರೋಗ ಇತರೆ ಕುರಿಗಳಿಗೆ ತಟ್ಟದು ಎನ್ನುವ ನಂಬಿಕೆ ಇವರದ್ದಾಗಿದೆ.</p>.<p>ಆದರೆ ಇಲ್ಲಿ ಆಗಿದ್ದೇ ಬೇರೆ. ನೇತು ಹಾಕಿದ ಕುರಿಮರಿಯನ್ನು ಬೀದಿ ನಾಯಿಗಳು ತಿಂದು ಹಾಕಿದವು, ನಾಯಿಗಳಿಗೆ ರೋಗ ತಗುಲಿದರೆ ಅದರ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.</p>.<div><blockquote>ಮೈಲಿರೋಗ ಇರುವ ಯಾವುದೇ ಪ್ರಕರಣಗಳು ಇದುವರೆಗೂ ಕಂಡುಬಂದಿಲ್ಲ. ನೇತು ಹಾಕುವುದರಿಂದ ರೋಗಗಳು ವಾಸಿಯಾಗುವುದಿಲ್ಲ. ಸರಿಯಾದ ಸಮಯದಲ್ಲಿ ಲಸಿಕೆ ನೀಡಬೇಕು ಸತ್ತ ಕುರಿಗಳನ್ನು ಸ್ಥಳದಲ್ಲಿಯೇ ಹೂತು ಹಾಕಬೇಕು.</blockquote><span class="attribution">ಡಾ.ಸೂರಪ್ಪ ಪಶುವೈದ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>