ಸಿರಿವಾರ ಗ್ರಾಮದ ತಾಯಪ್ಪ ಮತ್ತು ಪತ್ನಿ ತಾಯಮ್ಮಾ ನರೇಗಾ ಕೂಲಿ ಕಾರ್ಮಿಕರಾಗಿದ್ದು, ಮೂರು ದಿನಗಳಿಂದ ಕಪ್ಪಗಲ್ಲು ಗ್ರಾಮದ ಕೆ. ರಂಗನಾಥ ಸಾಯಿ ಎಂಬುವವರ ಹೊಲದ ಬಳಿಯ ಹಳ್ಳದಲ್ಲಿ ನರೇಗಾ ಕೂಲಿ ಕೆಲಸ ಮಾಡುತ್ತಿದ್ದರು. ಮಂಗಳವಾರವೂ ಎಂದಿನಂತೆ ಕೆಲಸಕ್ಕೆ ಹೋಗಿದ್ದರಾದರೂ, ಬೆಳಿಗ್ಗೆ 8.30ರ ಹೊತ್ತಿಗೆ ಕೆಲಸ ಮಾಡುತ್ತಿರುವಾಗಲೇ ತಾಯಪ್ಪ ಅಸ್ವಸ್ಥರಾದರು.