ಬಳ್ಳಾರಿಯ ಎಲ್ಲ ಶೀತಲಗೃಹಗಳಲ್ಲಿ ಇದ್ದ ಶೇ 90ರಷ್ಟು ಒಣಮೆಣಸಿನಕಾಯಿ ಈಗಾಗಲೇ ಮಾರಾಟವಾಗಿದೆ. ಹೊಸ ಮಾಲನ್ನು ಶೀತಲಗೃಹಕ್ಕೆ ತಾರದೇ ನೇರವಾಗಿ ಮಾರಲಾಗುತ್ತಿದೆ
–ಸತ್ಯಬಾಬು, ಅಧ್ಯಕ್ಷ ಶೀತಲಗೃಹಗಳ ಮಾಲೀಕರ ಸಂಘ
ಈ ವರ್ಷ ಬಿತ್ತನೆ ಪ್ರದೇಶ ಕಡಿಮೆಯಾಗಿತ್ತು. ಹವಾಮಾನ ವೈಪರೀತ್ಯದಿಂದ ಬೆಳೆಗೆ ರೋಗ ಬಾಧೆ ಕಾಣಿಸಿಕೊಂಡು ಇಳುವರಿ ಕುಸಿದಿದೆ. ಆದರೆ ಉತ್ತಮ ಬೆಲೆ ಸಿಗುತ್ತಿದೆ. ಬೆಲೆ ಇನ್ನೂ ವೃದ್ಧಿಯಾಗುವ ಸಾಧ್ಯತೆಗಳಿವೆ.
–ಶ್ರೀಕಾಂತ್ ಕೋಟೆಮನೆ, ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ