ತೆಕ್ಕಲಕೋಟೆ: ಹೊಲದಲ್ಲಿ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ತೆಕ್ಕಲಕೋಟೆ ಗ್ರಾಮದ ಶೇಖಪ್ಪ (38) ಮೃತರು. ಅವರ ಪತ್ನಿ ರೇಣುಕಮ್ಮ ದೂರು ದಾಖಲಿಸಿದ್ದಾರೆ.
ನಡವಿ ರಸ್ತೆಯ ಏಳು ಮಕ್ಕಳ ತಾಯಿ ದೇವಸ್ಥಾನದ ನಿಟ್ಟೂರು ಉಡೆಗೋಳ ರಸ್ತೆಯ ಎ.ಸಿ. ತಿಮ್ಮಪ್ಪ ಅವರ ಹೊಲದಲ್ಲಿ ಅವಘಡ ನಡೆದಿದ್ದು, ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.