<p><strong>ಮರಿಯಮ್ಮನಹಳ್ಳಿ:</strong> ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜೋಳ ಬೆಳೆದ ರೈತರಲ್ಲಿ ಆತಂಕ ಮನೆ ಮಾಡಿದೆ.</p>.<p>ಮೇ, ಜೂನ್ ತಿಂಗಳಲ್ಲಿ ಸುರಿದ ಉತ್ತಮ ಮುಂಗಾರು ಮಳೆಗೆ ಈ ಬಾರಿ ಅತಿ ಹೆಚ್ಚಿನ ಪ್ರದೇಶದಲ್ಲಿ ಬಿತ್ತಿದ್ದ ಜೋಳದ ಬೆಳೆಗಳು ಈಗಾಗಲೇ ಬಹುತೇಕ ಕಟಾವು ಹಂತಕ್ಕೆ ಬಂದಿದ್ದರೆ, ಅನೇಕ ರೈತರು ಕಟಾವು ಮಾಡಿ ತೆನೆಗಳನ್ನು ರಾಶಿ ಹಾಕಿದ್ದಾರೆ.</p>.<p>ಈ ಬಾರಿ ಡಣಾಯಕನಕೆರೆ ಮಾಗಾಣಿ, ಹಾರುವನಹಳ್ಳಿ, ಚಿಲಕನಹಟ್ಟಿ, ತಿಮ್ಮಲಾಪುರ ಭಾಗ ಸೇರಿದಂತೆ ಇತರೆಡೆ ಒಂದು ಸಾವಿರ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಜೋಳ ಬೆಳೆದಿದ್ದು, ಉತ್ತಮ ಇಳುವರಿ ಹಾಗೂ ಆದಾಯದ ನಿರೀಕ್ಷೆಯಲ್ಲಿದ್ದಾರೆ ರೈತರು.</p>.<p>ಆದರೆ ದಿನ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಮಾಡಿ ರಾಶಿ ಹಾಕಿದ ತೆನೆಗಳನ್ನು ಒಣಗಿಸಲು ಆಗದೆ ರೈತರು ಪರದಾಡುವಂತಾಗಿದ್ದು, ಬೆಳೆ ರಕ್ಷಣೆಗೆ ಪ್ಲಾಸ್ಟಿಕ್ ತಾಡಪಾಲುಗಳ ಮೊರೆ ಹೋಗುವಂತಾಗಿದೆ.</p>.<p>ಗುರುವಾರ ಮಧ್ಯಾಹ್ನ ಮಳೆ ಕೊಂಚ ಬಿಡುವು ನೀಡುತ್ತಿದ್ದಂತೆ ಮರಿಯಮ್ಮನಹಳ್ಳಿ ತಾಂಡಾ ಬಳಿ ನೂರಕ್ಕು ಹೆಚ್ಚು ರೈತರು ಕಟಾವು ಮಾಡಿ ರಾಶಿ ಹಾಕಿ ತಾಟಪಾಲುಗಳಿಂದ ಮುಚ್ಚಿದ್ದ ಗೂಡುಗಳನ್ನು ತೆರೆದು ತೆನೆಗಳನ್ನು ಒಣಗಿಸಲು ಮುಂದಾಗುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>ನಿರಂತರ ಮಳೆಗೆ ಜೋಳಕ್ಕೆ ಕಾಡಿಗೆ ರೋಗ, ಫಂಗಸ್ ಕಾಣಿಸಿಕೊಳ್ಳುವ ಹಾಗೂ ತೆನೆಗಳಲ್ಲಿಯೇ ಕಾಳುಗಳು ಮೊಳಕೆಯೊಡಿಯುವ ಆತಂಕ ಎದುರಾಗಿದೆ. ಅಲ್ಲದೆ ಕಳೆದ ವರ್ಷವೂ ಸಹ ಜೋಳ ಕಟಾವು ಸಂದರ್ಭದಲ್ಲಿ ಇದೇ ರೀತಿ ಮಳೆ ಹತ್ತಿಕೊಂಡು ನಷ್ಟ ಅನುಭವಿದ್ದೆವು ಎನ್ನುತ್ತಾರೆ ತಾಂಡಾ ರೈತರು.</p>.<p>‘ನೋಡ್ರಿ ಈ ಬಾರಿ ಮಳಿ ಚೆನ್ನಾಗಿ ಆತು ಅಂತ ಜೋಳ ಬೆಳದ್ವಿ, ಬೆಳೆನೂ ಚೆನ್ನಾಗಿ ಬಂದೈತಿ, ಆದ್ರ ಕಟಾವು ಮಾಡಿ ರಾಶಿ ಹಾಕಿ ಇನ್ನೇನೆ ಕಾಳ ಮಾಡಬೇಕು, ಆದ್ರ ಮಳಿ ಬಿಡುವು ಕೊಡ್ತಿಲ್ಲ’ ಎನ್ನುತ್ತಾರೆ ತಾಂಡಾದ ರೈತರಾದ ರಾಮಾನಾಯ್ಕ, ಲಕ್ಷ್ಮಣನಾಯ್ಕ ಹಾಗೂ ಇತರರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮರಿಯಮ್ಮನಹಳ್ಳಿ:</strong> ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜೋಳ ಬೆಳೆದ ರೈತರಲ್ಲಿ ಆತಂಕ ಮನೆ ಮಾಡಿದೆ.</p>.<p>ಮೇ, ಜೂನ್ ತಿಂಗಳಲ್ಲಿ ಸುರಿದ ಉತ್ತಮ ಮುಂಗಾರು ಮಳೆಗೆ ಈ ಬಾರಿ ಅತಿ ಹೆಚ್ಚಿನ ಪ್ರದೇಶದಲ್ಲಿ ಬಿತ್ತಿದ್ದ ಜೋಳದ ಬೆಳೆಗಳು ಈಗಾಗಲೇ ಬಹುತೇಕ ಕಟಾವು ಹಂತಕ್ಕೆ ಬಂದಿದ್ದರೆ, ಅನೇಕ ರೈತರು ಕಟಾವು ಮಾಡಿ ತೆನೆಗಳನ್ನು ರಾಶಿ ಹಾಕಿದ್ದಾರೆ.</p>.<p>ಈ ಬಾರಿ ಡಣಾಯಕನಕೆರೆ ಮಾಗಾಣಿ, ಹಾರುವನಹಳ್ಳಿ, ಚಿಲಕನಹಟ್ಟಿ, ತಿಮ್ಮಲಾಪುರ ಭಾಗ ಸೇರಿದಂತೆ ಇತರೆಡೆ ಒಂದು ಸಾವಿರ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಜೋಳ ಬೆಳೆದಿದ್ದು, ಉತ್ತಮ ಇಳುವರಿ ಹಾಗೂ ಆದಾಯದ ನಿರೀಕ್ಷೆಯಲ್ಲಿದ್ದಾರೆ ರೈತರು.</p>.<p>ಆದರೆ ದಿನ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಮಾಡಿ ರಾಶಿ ಹಾಕಿದ ತೆನೆಗಳನ್ನು ಒಣಗಿಸಲು ಆಗದೆ ರೈತರು ಪರದಾಡುವಂತಾಗಿದ್ದು, ಬೆಳೆ ರಕ್ಷಣೆಗೆ ಪ್ಲಾಸ್ಟಿಕ್ ತಾಡಪಾಲುಗಳ ಮೊರೆ ಹೋಗುವಂತಾಗಿದೆ.</p>.<p>ಗುರುವಾರ ಮಧ್ಯಾಹ್ನ ಮಳೆ ಕೊಂಚ ಬಿಡುವು ನೀಡುತ್ತಿದ್ದಂತೆ ಮರಿಯಮ್ಮನಹಳ್ಳಿ ತಾಂಡಾ ಬಳಿ ನೂರಕ್ಕು ಹೆಚ್ಚು ರೈತರು ಕಟಾವು ಮಾಡಿ ರಾಶಿ ಹಾಕಿ ತಾಟಪಾಲುಗಳಿಂದ ಮುಚ್ಚಿದ್ದ ಗೂಡುಗಳನ್ನು ತೆರೆದು ತೆನೆಗಳನ್ನು ಒಣಗಿಸಲು ಮುಂದಾಗುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>ನಿರಂತರ ಮಳೆಗೆ ಜೋಳಕ್ಕೆ ಕಾಡಿಗೆ ರೋಗ, ಫಂಗಸ್ ಕಾಣಿಸಿಕೊಳ್ಳುವ ಹಾಗೂ ತೆನೆಗಳಲ್ಲಿಯೇ ಕಾಳುಗಳು ಮೊಳಕೆಯೊಡಿಯುವ ಆತಂಕ ಎದುರಾಗಿದೆ. ಅಲ್ಲದೆ ಕಳೆದ ವರ್ಷವೂ ಸಹ ಜೋಳ ಕಟಾವು ಸಂದರ್ಭದಲ್ಲಿ ಇದೇ ರೀತಿ ಮಳೆ ಹತ್ತಿಕೊಂಡು ನಷ್ಟ ಅನುಭವಿದ್ದೆವು ಎನ್ನುತ್ತಾರೆ ತಾಂಡಾ ರೈತರು.</p>.<p>‘ನೋಡ್ರಿ ಈ ಬಾರಿ ಮಳಿ ಚೆನ್ನಾಗಿ ಆತು ಅಂತ ಜೋಳ ಬೆಳದ್ವಿ, ಬೆಳೆನೂ ಚೆನ್ನಾಗಿ ಬಂದೈತಿ, ಆದ್ರ ಕಟಾವು ಮಾಡಿ ರಾಶಿ ಹಾಕಿ ಇನ್ನೇನೆ ಕಾಳ ಮಾಡಬೇಕು, ಆದ್ರ ಮಳಿ ಬಿಡುವು ಕೊಡ್ತಿಲ್ಲ’ ಎನ್ನುತ್ತಾರೆ ತಾಂಡಾದ ರೈತರಾದ ರಾಮಾನಾಯ್ಕ, ಲಕ್ಷ್ಮಣನಾಯ್ಕ ಹಾಗೂ ಇತರರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>