<p><strong>ಹೂವಿನಹಡಗಲಿ</strong>: ಪಟ್ಟಣದಲ್ಲಿ ಗಣೇಶ ಚತುರ್ಥಿ ಹಬ್ಬದ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದ್ದು, ಗ್ರಾಹಕರಿಗೆ ಹಣ್ಣು, ಹೂ ಬೆಲೆ ಏರಿಕೆಯ ಬಿಸಿ ತಟ್ಟಿದೆ.</p>.<p>ಶಾಸ್ತ್ರಿ ವೃತ್ತದಲ್ಲಿ ಬಾಳೆಕಂಬ, ಕಬ್ಬು, ತರೇವಾರಿ ಹೂ, ಹಣ್ಣುಗಳು ಮತ್ತು ಗಣಪತಿ ಮೂರ್ತಿಗಳ ಮಾರಾಟ ನಡೆದಿದೆ. ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿ ಬೆಲೆಗಳು ಏರಿಕೆಯಾಗಿರುವುದರಿಂದ ಗ್ರಾಹಕರು ಚೌಕಾಸಿಗಿಳಿದು ಖರೀದಿಸುವುದು ಕಂಡುಬಂತು.</p>.<p>ಹಬ್ಬದ ಪ್ರಯುಕ್ತ ಒಂದು ಮಾರು ಮಲ್ಲಿಗೆಗೆ ₹100 ವರೆಗೆ ಮಾರಾಟವಾಗುತ್ತಿದೆ. ಸೇವಂತಿಗೆ, ಚೆಂಡು ಹೂ, ಕನಕಾಂಬರ ಬೆಲೆಯೂ ಹೆಚ್ಚಳವಾಗಿದೆ. ಸೇಬುಹಣ್ಣು ಕೆಜಿಗೆ ₹150ರಿಂದ ₹200 ಗಳವರೆಗೆ ಮಾರಾಟವಾಗುತ್ತಿದೆ. ಸೇಬಿಗಿಂತ ದಾಳಿಂಬೆ ಬೆಲೆ ಹೆಚ್ಚಾಗಿದೆ. ಬಾಳೆ, ಕಿತ್ತಳೆ, ಪೇರಲೆ, ಸೀತಾಫಲ, ಸಪೋಟ, ದ್ರಾಕ್ಷಿ ಹಣ್ಣಿನ ಬೆಲೆ ಕೇಳೆ ಗ್ರಾಹಕರು ಅಚ್ಚರಿ ವ್ಯಕ್ತಪಡಿಸುತ್ತಾರೆ.</p>.<p>‘ಗಣೇಶನ ಹಬ್ಬ ಪ್ರಯುಕ್ತ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿದೆ. ಖರೀದಿಸುವವರಿಲ್ಲದೇ ಮಾರುಕಟ್ಟೆ ನೀರಸವಾಗಿದ್ದರೂ ಬೆಲೆಗಳು ಹೆಚ್ಚಾಗಿವೆ. ಖರೀದಿ ಪ್ರಮಾಣ ಕಡಿಮೆಗೊಳಿಸಿಯಾದರೂ ಹಬ್ಬ ಮಾಡುವುದು ಆನಿವಾರ್ಯವಾಗಿದೆ’ ಎಂದು ಹೊಳಗುಂದಿಯ ದೇವರಮನಿ ವೀರೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ಪಟ್ಟಣದಲ್ಲಿ ಗಣೇಶ ಚತುರ್ಥಿ ಹಬ್ಬದ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದ್ದು, ಗ್ರಾಹಕರಿಗೆ ಹಣ್ಣು, ಹೂ ಬೆಲೆ ಏರಿಕೆಯ ಬಿಸಿ ತಟ್ಟಿದೆ.</p>.<p>ಶಾಸ್ತ್ರಿ ವೃತ್ತದಲ್ಲಿ ಬಾಳೆಕಂಬ, ಕಬ್ಬು, ತರೇವಾರಿ ಹೂ, ಹಣ್ಣುಗಳು ಮತ್ತು ಗಣಪತಿ ಮೂರ್ತಿಗಳ ಮಾರಾಟ ನಡೆದಿದೆ. ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿ ಬೆಲೆಗಳು ಏರಿಕೆಯಾಗಿರುವುದರಿಂದ ಗ್ರಾಹಕರು ಚೌಕಾಸಿಗಿಳಿದು ಖರೀದಿಸುವುದು ಕಂಡುಬಂತು.</p>.<p>ಹಬ್ಬದ ಪ್ರಯುಕ್ತ ಒಂದು ಮಾರು ಮಲ್ಲಿಗೆಗೆ ₹100 ವರೆಗೆ ಮಾರಾಟವಾಗುತ್ತಿದೆ. ಸೇವಂತಿಗೆ, ಚೆಂಡು ಹೂ, ಕನಕಾಂಬರ ಬೆಲೆಯೂ ಹೆಚ್ಚಳವಾಗಿದೆ. ಸೇಬುಹಣ್ಣು ಕೆಜಿಗೆ ₹150ರಿಂದ ₹200 ಗಳವರೆಗೆ ಮಾರಾಟವಾಗುತ್ತಿದೆ. ಸೇಬಿಗಿಂತ ದಾಳಿಂಬೆ ಬೆಲೆ ಹೆಚ್ಚಾಗಿದೆ. ಬಾಳೆ, ಕಿತ್ತಳೆ, ಪೇರಲೆ, ಸೀತಾಫಲ, ಸಪೋಟ, ದ್ರಾಕ್ಷಿ ಹಣ್ಣಿನ ಬೆಲೆ ಕೇಳೆ ಗ್ರಾಹಕರು ಅಚ್ಚರಿ ವ್ಯಕ್ತಪಡಿಸುತ್ತಾರೆ.</p>.<p>‘ಗಣೇಶನ ಹಬ್ಬ ಪ್ರಯುಕ್ತ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿದೆ. ಖರೀದಿಸುವವರಿಲ್ಲದೇ ಮಾರುಕಟ್ಟೆ ನೀರಸವಾಗಿದ್ದರೂ ಬೆಲೆಗಳು ಹೆಚ್ಚಾಗಿವೆ. ಖರೀದಿ ಪ್ರಮಾಣ ಕಡಿಮೆಗೊಳಿಸಿಯಾದರೂ ಹಬ್ಬ ಮಾಡುವುದು ಆನಿವಾರ್ಯವಾಗಿದೆ’ ಎಂದು ಹೊಳಗುಂದಿಯ ದೇವರಮನಿ ವೀರೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>