<p><strong>ಸಂಡೂರು</strong>: ತಾಲ್ಲೂಕಿನ ವಡೆರಾಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕ ಸಣ್ಣಹನುಮಂತಪ್ಪ(55) ಅವರು ಬುಧವಾರ ಹೃದಯಘಾತದಿಂದ ನಿಧನರಾಗಿದ್ದರು. ಅವರ ಪತ್ನಿ ಸುಜಾತಾ (50) ಕೂಡಾ ಮರುದಿನ ಗುರುವಾರ ಹೃದಯಘಾತದಿಂದ ಮೃತಪಟ್ಟರು. ಪತಿ - ಪತ್ನಿ ಇಬ್ಬರು ಸಾವಿನಲ್ಲೂ ಒಂದಾಗಿರುವುದಕ್ಕೆ ಜನರು ಮರುಕ ವ್ಯಕ್ತಪಡಿಸಿದರು.</p>.<p>ಹೊಸಪೇಟೆ ತಾಲ್ಲೂಕಿನ ಸಣ್ಣಹನುಂತಪ್ಪ ಅವರು ಸಂಡೂರು ತಾಲ್ಲೂಕಿನ ತೊಕೆನಹಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿ ಪ್ರಸ್ತುತ ವಡೇರಹಳ್ಳಿ ಶಾಲೆಗೆ ವರ್ಗಾವಣೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೂಡ್ಲಿಗಿ ತಾಲ್ಲೂಕಿನ ರಾಮದುರ್ಗ ಪತ್ನಿ ತವರಿನಲ್ಲೇ ಮನೆ ಮಾಡಿಕೊಂಡು ಜೊತೆ ವಾಸವಿದ್ದರು.</p>.<p>ಬುಧವಾರ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ಹೃದಯಘಾತದಿಂದ ಮೃತಪಟ್ಟಿದ್ದರು. ಅವರ ಕಾರಿಗನೂರು ಗ್ರಾಮದಲ್ಲಿ ಪತಿಯ ಅಂತ್ಯಕ್ರಿಯೆ ಮುಗಿಸಿ ರಾಮದುರ್ಗಕ್ಕೆ ಸುಜಾತಾ ಮರಳಿದ್ದರು. ಗುರುವಾರ ಬೆಳಗಿನ ಜಾವ ಸುಜಾತಾ ಅವರೂ ಹೃದಯಘಾತದಿಂದ ನಿಧನರಾಗಿದ್ದಾರೆ.</p>.<p>ಮೃತ ದಂಪತಿಗೆ ಪುತ್ರ, ಪುತ್ರಿ ಇದ್ದಾರೆ. ಪುತ್ರಿಗೆ ವಿವಾಹವಾಗಿದೆ. ಪತಿಯ ಅಂತ್ಯ ಸಂಸ್ಕಾರ ಮಾಡಿದ ಕಾರಿಗನೂರು ಗ್ರಾಮದಲ್ಲೇ ಪತ್ನಿಯ ಅಂತ್ಯಕ್ರಿಯೆ ನಡೆಸಲಾಗಿದ್ದು, ಸಾವಿನಲ್ಲೂ ಒಂದಾದ ದಂಪತಿಯನ್ನು ಬಂಧು ಮಿತ್ರರು ಸಂಬಂಧಿಗಳು ನೆನೆದು ಕಂಬನಿ ಮಿಡಿದಿದ್ದಾರೆ.</p>.<p>‘ಶಿಕ್ಷಕ ಸಣ್ಣಹನುಮಂತಪ್ಪ ಅವರು ಹೃದಯಘಾತದಿಂದ ನಿಧನರಾಗಿದ್ದರು. ಅದೇ ನೆನೆಪಿನಲ್ಲಿಯೂ ಅವರ ಪತ್ನಿಯು ಸಹ ಹೃದಯಘಾತದಿಂದ ನಿಧನರಾಗಿರುವುದು ಅತಿ ದು:ಖಕರ ಸಂಗತಿ. ಮೃತ ಶಿಕ್ಷಕರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಅವರ ಮಕ್ಕಳಿಗೆ ದೊರಕಿಸಲಾಗುವುದು’ ಎಂದು ಸಂಡೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಆರ್.ಅಕ್ಕಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಡೂರು</strong>: ತಾಲ್ಲೂಕಿನ ವಡೆರಾಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕ ಸಣ್ಣಹನುಮಂತಪ್ಪ(55) ಅವರು ಬುಧವಾರ ಹೃದಯಘಾತದಿಂದ ನಿಧನರಾಗಿದ್ದರು. ಅವರ ಪತ್ನಿ ಸುಜಾತಾ (50) ಕೂಡಾ ಮರುದಿನ ಗುರುವಾರ ಹೃದಯಘಾತದಿಂದ ಮೃತಪಟ್ಟರು. ಪತಿ - ಪತ್ನಿ ಇಬ್ಬರು ಸಾವಿನಲ್ಲೂ ಒಂದಾಗಿರುವುದಕ್ಕೆ ಜನರು ಮರುಕ ವ್ಯಕ್ತಪಡಿಸಿದರು.</p>.<p>ಹೊಸಪೇಟೆ ತಾಲ್ಲೂಕಿನ ಸಣ್ಣಹನುಂತಪ್ಪ ಅವರು ಸಂಡೂರು ತಾಲ್ಲೂಕಿನ ತೊಕೆನಹಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿ ಪ್ರಸ್ತುತ ವಡೇರಹಳ್ಳಿ ಶಾಲೆಗೆ ವರ್ಗಾವಣೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೂಡ್ಲಿಗಿ ತಾಲ್ಲೂಕಿನ ರಾಮದುರ್ಗ ಪತ್ನಿ ತವರಿನಲ್ಲೇ ಮನೆ ಮಾಡಿಕೊಂಡು ಜೊತೆ ವಾಸವಿದ್ದರು.</p>.<p>ಬುಧವಾರ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ಹೃದಯಘಾತದಿಂದ ಮೃತಪಟ್ಟಿದ್ದರು. ಅವರ ಕಾರಿಗನೂರು ಗ್ರಾಮದಲ್ಲಿ ಪತಿಯ ಅಂತ್ಯಕ್ರಿಯೆ ಮುಗಿಸಿ ರಾಮದುರ್ಗಕ್ಕೆ ಸುಜಾತಾ ಮರಳಿದ್ದರು. ಗುರುವಾರ ಬೆಳಗಿನ ಜಾವ ಸುಜಾತಾ ಅವರೂ ಹೃದಯಘಾತದಿಂದ ನಿಧನರಾಗಿದ್ದಾರೆ.</p>.<p>ಮೃತ ದಂಪತಿಗೆ ಪುತ್ರ, ಪುತ್ರಿ ಇದ್ದಾರೆ. ಪುತ್ರಿಗೆ ವಿವಾಹವಾಗಿದೆ. ಪತಿಯ ಅಂತ್ಯ ಸಂಸ್ಕಾರ ಮಾಡಿದ ಕಾರಿಗನೂರು ಗ್ರಾಮದಲ್ಲೇ ಪತ್ನಿಯ ಅಂತ್ಯಕ್ರಿಯೆ ನಡೆಸಲಾಗಿದ್ದು, ಸಾವಿನಲ್ಲೂ ಒಂದಾದ ದಂಪತಿಯನ್ನು ಬಂಧು ಮಿತ್ರರು ಸಂಬಂಧಿಗಳು ನೆನೆದು ಕಂಬನಿ ಮಿಡಿದಿದ್ದಾರೆ.</p>.<p>‘ಶಿಕ್ಷಕ ಸಣ್ಣಹನುಮಂತಪ್ಪ ಅವರು ಹೃದಯಘಾತದಿಂದ ನಿಧನರಾಗಿದ್ದರು. ಅದೇ ನೆನೆಪಿನಲ್ಲಿಯೂ ಅವರ ಪತ್ನಿಯು ಸಹ ಹೃದಯಘಾತದಿಂದ ನಿಧನರಾಗಿರುವುದು ಅತಿ ದು:ಖಕರ ಸಂಗತಿ. ಮೃತ ಶಿಕ್ಷಕರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಅವರ ಮಕ್ಕಳಿಗೆ ದೊರಕಿಸಲಾಗುವುದು’ ಎಂದು ಸಂಡೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಆರ್.ಅಕ್ಕಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>