<p><strong>ತೆಕ್ಕಲಕೋಟೆ:</strong> ಪಟ್ಟಣದ 14ನೇ ವಾರ್ಡಿನ ಪಂಚಸ್ಥಳ ಹತ್ತಿರದ ಶ್ರೀ ಹುಚ್ಚೀರಪ್ಪ ತಾತ ದೇವಸ್ಥಾನದ 46ನೇ ಜಾತ್ರಾ ಮಹೋತ್ಸವ ಸಂಭ್ರಮದಿಂದ ಅದ್ದೂರಿಯಾಗಿ ಶುಕ್ರವಾರ ಸಂಜೆ ನೆರವೇರಿತು.</p>.<p>ಬೆಳಿಗ್ಗೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ಜೋಡಿಗಳು ಹಸೆಮಣೆ ಏರಿದವು.<br> ಸಂಜೆ 5.00 ಗಂಟೆಗೆ ಕೆ ಪಕ್ಕೀರಯ್ಯ ಇವರ ಮನೆಯಿಂದ ಹುಚ್ಚೀರಪ್ಪ ತಾತ ಭಾವಚಿತ್ರದ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ತಾಷ-ತಪ್ಪಡಿ, ಸಮಾಳ ಹಾಗೂ ಸಕಲ ಮಂಗಳ ವಾದ್ಯದೊಂದಿಗೆ ನಡೆಯಿತು. ನಂತರ ಭಜನಾ ತಂಡದವರು ರಥಕ್ಕೆ ಹೂಮಾಲೆ ಹಾಕಿ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ಭಕ್ತರು ಹೂ ಹಾಗೂ ಬಾಳೆಕಾಯಿ (ಓಣು) ರಥಕ್ಕೆ ಎಸೆದು ಹರಕೆ ತೀರಿಸಿದರು. ಜಾತ್ರೆ ಪ್ರಯುಕ್ತ ರಾತ್ರಿ 9.00 ಗಂಟೆಗೆ 'ಪಾಂಡುವಿಜಯ' ಬಯಲಾಟ ಕಾರ್ಯಕ್ರಮ ಆಯೋಜಿಸಲಾಗಿತ್ತು.</p>.<p>ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ನೀಲಮ್ಮ ಎಚ್.ಕೆ. ತಿಮ್ಮಪ್ಪ ದೊಡ್ಡ ರುದ್ರಮ್ಮ, ಪಕ್ಕೀರಯ್ಯ, ಕೊಮಾರೆಪ್ಪ, ಪರಸಪ್ಪ, ಕಾಡಿಸಿದ್ದ ಪಟ್ಟಣ ಅಲ್ಲದೆ ಸುತ್ತಲಿನ ಹಳ್ಳಿಗಳ ಭಕ್ತಾದಿಗಳು ಭಾಗವಹಿಸಿ ಪುನೀತರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ:</strong> ಪಟ್ಟಣದ 14ನೇ ವಾರ್ಡಿನ ಪಂಚಸ್ಥಳ ಹತ್ತಿರದ ಶ್ರೀ ಹುಚ್ಚೀರಪ್ಪ ತಾತ ದೇವಸ್ಥಾನದ 46ನೇ ಜಾತ್ರಾ ಮಹೋತ್ಸವ ಸಂಭ್ರಮದಿಂದ ಅದ್ದೂರಿಯಾಗಿ ಶುಕ್ರವಾರ ಸಂಜೆ ನೆರವೇರಿತು.</p>.<p>ಬೆಳಿಗ್ಗೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ಜೋಡಿಗಳು ಹಸೆಮಣೆ ಏರಿದವು.<br> ಸಂಜೆ 5.00 ಗಂಟೆಗೆ ಕೆ ಪಕ್ಕೀರಯ್ಯ ಇವರ ಮನೆಯಿಂದ ಹುಚ್ಚೀರಪ್ಪ ತಾತ ಭಾವಚಿತ್ರದ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ತಾಷ-ತಪ್ಪಡಿ, ಸಮಾಳ ಹಾಗೂ ಸಕಲ ಮಂಗಳ ವಾದ್ಯದೊಂದಿಗೆ ನಡೆಯಿತು. ನಂತರ ಭಜನಾ ತಂಡದವರು ರಥಕ್ಕೆ ಹೂಮಾಲೆ ಹಾಕಿ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ಭಕ್ತರು ಹೂ ಹಾಗೂ ಬಾಳೆಕಾಯಿ (ಓಣು) ರಥಕ್ಕೆ ಎಸೆದು ಹರಕೆ ತೀರಿಸಿದರು. ಜಾತ್ರೆ ಪ್ರಯುಕ್ತ ರಾತ್ರಿ 9.00 ಗಂಟೆಗೆ 'ಪಾಂಡುವಿಜಯ' ಬಯಲಾಟ ಕಾರ್ಯಕ್ರಮ ಆಯೋಜಿಸಲಾಗಿತ್ತು.</p>.<p>ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ನೀಲಮ್ಮ ಎಚ್.ಕೆ. ತಿಮ್ಮಪ್ಪ ದೊಡ್ಡ ರುದ್ರಮ್ಮ, ಪಕ್ಕೀರಯ್ಯ, ಕೊಮಾರೆಪ್ಪ, ಪರಸಪ್ಪ, ಕಾಡಿಸಿದ್ದ ಪಟ್ಟಣ ಅಲ್ಲದೆ ಸುತ್ತಲಿನ ಹಳ್ಳಿಗಳ ಭಕ್ತಾದಿಗಳು ಭಾಗವಹಿಸಿ ಪುನೀತರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>