‘ಹಂಪಿಯಷ್ಟೇ ಮಹತ್ವ ಈ ಸ್ಥಳಕ್ಕೂ ಇದೆ. ಆದರೆ, ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಶಾಸನಗಳು, ಶಿಲೆಗಳು, ಮಂಟಪ ಹಾಗೂ ಮೂರ್ತಿಗಳನ್ನು ಸಂರಕ್ಷಿಸಲು ಈಗಲಾದರೂ ಕ್ರಮ ಕೈಗೊಳ್ಳಬೇಕು. ಜೈನ ಬಸದಿ ಜೀರ್ಣೊದ್ಧಾರಗೊಳಿಸಿ, ಅದರ ಬಗ್ಗೆ ಪ್ರಚಾರ ಮಾಡಬೇಕು. ಆಗ ಪ್ರವಾಸಿಗರು ಬರುತ್ತಾರೆ. ಸ್ಥಳೀಯರಿಗೆ ಸಣ್ಣಪುಟ್ಟ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ’ ಎಂದು ಸ್ಥಳೀಯರಾದ ಎಚ್.ಎಂ. ವೀರೇಶ್, ಕಾಳಪ್ಪ, ಮಲ್ಲಿಕಾರ್ಜುನ ಹೇಳಿದರು.