ಇಲ್ಲಿನ ರಾಘವ ಕಲಾ ಮಂದಿರದಲ್ಲಿ ನಡೆಯುತ್ತಿರುವ ತೆಲುಗು ಸಮೈಕ್ಯ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ತೆಲುಗು ವಿವಿ ಕುಲಪತಿ ಕಿಶನ್ರಾವ್ ಪತ್ರಕರ್ತರ ಜತೆ ಮಾತನಾಡಿದರು. ತೆಲುಗು ವಿಶ್ವವಿದ್ಯಾಲಯ ವಿಭಜನೆಯಾಗುತ್ತಿದೆ. ಆಂಧ್ರದಲ್ಲಿ ಪ್ರತ್ಯೇಕ ತೆಲುಗು ವಿವಿ ಸ್ಥಾಪನೆಯಾಗುತ್ತಿದೆ. ಈಗಿರುವ ಪೊಟ್ಟಿ ಶ್ರೀರಾಮುಲು ಹೆಸರು ಆಂಧ್ರಕ್ಕೆ ಹೋಗಲಿದೆ. ಹೀಗಾಗಿ, 12–13ನೇ ಶತಮಾನದ ತ್ರಿಭಾಷಾ ಮಹಾಕವಿ ಪಾಲಕುರ್ತಿ ಸೋಮನಾಥರ ಹೆಸರಿಡಲು ಉದ್ದೇಶಿಸಲಾಗಿದೆ. ಈತ ಕನ್ನಡ, ತೆಲುಗು ಜತೆ ಸಂಸ್ಕೃತದಲ್ಲೂ ಬರೆದಿದ್ದಾರೆ ಎಂದು ಅವರು ವಿವರಿಸಿದರು.