<p>ಸಂಡೂರು: ತಾಲ್ಲೂಕಿನ ಆರಾಧ್ಯ ದೈವ ಕುಮಾರಸ್ವಾಮಿ ದೇವರ ಜೋಳಗಿ ಪೂಜಾ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಮರಾಠ ಸಮಾಜದ ಅಂಬಾಭವಾನಿ ದೇವಸ್ಥಾನದಲ್ಲಿ ಬುಧವಾರ ಕುಮಾರಸ್ವಾಮಿ ಮಾಲಾಧಾರಿಗಳಿಂದ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.</p>.<p>ದೇವಸ್ಥಾನದಲ್ಲಿ ಪಟ್ಟಣದ ಭಕ್ತಾಧಿಗಳಿಂದ ವಿಶೇಷ ಪೂಜೆ, ಭಜನೆ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಕುಮಾರಸ್ವಾಮಿ ಮಾಲಾಧಿಕಾರಿಗಳು 45 ದಿನಗಳ ಕಾಲ ನಿರಂತರವಾಗಿ ವೃತ, ಪೂಜೆ ನಡೆಸಿದ್ದರು. ನಂತರ ಅಂಬಾಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜೋಳಗಿ ಧರಿಸಿ, ಕುಮಾರಸ್ವಾಮಿಯ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳಿ, ಕುಮಾರಸ್ವಾಮಿ ದೇವರ ದರ್ಶನ ಪಡೆದರು.</p>.<p>ಅರ್ಚಕ ಔದಂಬರ್, ಮಾಲಾಧಿಕಾರಿಗಳಾದ ಶಿವರಾಮ ರಾಗಿ, ಪಂಪಸ್ವಾಮಿ, ರಘು, ಅಜಯ್, ಶಂಕರ್, ಸುನಿಲ್, ರಾಜು, ಪಾಲ್ಗೊಂಡಿದ್ದರು.<br /><br /></p>
<p>ಸಂಡೂರು: ತಾಲ್ಲೂಕಿನ ಆರಾಧ್ಯ ದೈವ ಕುಮಾರಸ್ವಾಮಿ ದೇವರ ಜೋಳಗಿ ಪೂಜಾ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಮರಾಠ ಸಮಾಜದ ಅಂಬಾಭವಾನಿ ದೇವಸ್ಥಾನದಲ್ಲಿ ಬುಧವಾರ ಕುಮಾರಸ್ವಾಮಿ ಮಾಲಾಧಾರಿಗಳಿಂದ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.</p>.<p>ದೇವಸ್ಥಾನದಲ್ಲಿ ಪಟ್ಟಣದ ಭಕ್ತಾಧಿಗಳಿಂದ ವಿಶೇಷ ಪೂಜೆ, ಭಜನೆ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಕುಮಾರಸ್ವಾಮಿ ಮಾಲಾಧಿಕಾರಿಗಳು 45 ದಿನಗಳ ಕಾಲ ನಿರಂತರವಾಗಿ ವೃತ, ಪೂಜೆ ನಡೆಸಿದ್ದರು. ನಂತರ ಅಂಬಾಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜೋಳಗಿ ಧರಿಸಿ, ಕುಮಾರಸ್ವಾಮಿಯ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳಿ, ಕುಮಾರಸ್ವಾಮಿ ದೇವರ ದರ್ಶನ ಪಡೆದರು.</p>.<p>ಅರ್ಚಕ ಔದಂಬರ್, ಮಾಲಾಧಿಕಾರಿಗಳಾದ ಶಿವರಾಮ ರಾಗಿ, ಪಂಪಸ್ವಾಮಿ, ರಘು, ಅಜಯ್, ಶಂಕರ್, ಸುನಿಲ್, ರಾಜು, ಪಾಲ್ಗೊಂಡಿದ್ದರು.<br /><br /></p>