<p><strong>ಕುರುಗೋಡು:</strong> ತಾಲ್ಲೂಕಿನ ಕೆರೆಕೆರೆ ಗ್ರಾಮದಲ್ಲಿ ಮಾರೆಮ್ಮದೇವಿ ಹಾಗೂ ಸುಂಕ್ಲಮ್ಮದೇವಿ ಕುಂಭೋತ್ಸವ ಬುಧವಾರ ಸಂಭ್ರಮದಿಂದ ಜರುಗಿತು.</p>.<p>ಕುಂಭೋತ್ಸವದ ಅಂಗವಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿವಿಧಾನಗಳು ಜರುಗಿದವು.</p>.<p>ಐದು ವರ್ಷಕ್ಕೊಮ್ಮೆ ಜರುಗುವ ಕುಂಭೋತ್ಸವದ ಅಂಗವಾಗಿ ಮಾರೆಮ್ಮದೇವಿ ಹಾಗೂ ಸುಂಕ್ಲಮ್ಮದೇವಿಯರ ಉತ್ಸವಮೂರ್ತಿ ಮೆರವಣಿಗೆ ಜರುಗಿತು. ದೇವಸ್ಥಾನದ ಆವರಣದಿಂದ ಆರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡಿತು.</p>.<p>ಡೊಳ್ಳು, ಸಮಾಳ, ತಾಸಿರಾಮ್, ರಾಮ್ ಡೋಲ್, ಪೂರ್ಣಕುಂಭ ಮತ್ತು ಕಳಸ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಕುರುಗೋಡು, ಕೆರೆಕೆರೆ, ಕಲ್ಲುಕಂಬ, ಬಾದನಹಟ್ಟಿ, ಮುಷ್ಟಗಟ್ಟೆ, ಗೆಣಿಕೆಹಾಳು, ಕುರುಗೋಡು, ಸೋಮಲಾಪುರ, ಕ್ಯಾದಿಗೆಹಾಳು, ಎಮ್ಮಿಗನೂರು, ಕಂಪ್ಲಿ. ಲಕ್ಷಿಪುರ, ಶ್ರೀನಿವಾಸಕ್ಯಾಂಪು, ರ್ವಾಯಿ-ಗುತ್ತಿಗನೂರು ಗ್ರಾಮಗಳ ಜನರು ಭಾಗವಹಿಸಿದ್ದರು. ಅಹಿತಕರ ಘಟನೆ ಜರುಗದಂತೆ ಸಿಪಿಐ ವಿಶ್ವನಾಥ ಕೆ. ಹಿರೇಗೌಡರ್, ಪಿಎಸ್ಐ ಸುಪ್ರೀತ್ ವಿರೂಪಾಕ್ಷಪ್ಪ ಮತ್ತು ಸಿಬ್ಬಂದಿ ಬಿಗಿ ಭದ್ರತೆ ಕೈಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು:</strong> ತಾಲ್ಲೂಕಿನ ಕೆರೆಕೆರೆ ಗ್ರಾಮದಲ್ಲಿ ಮಾರೆಮ್ಮದೇವಿ ಹಾಗೂ ಸುಂಕ್ಲಮ್ಮದೇವಿ ಕುಂಭೋತ್ಸವ ಬುಧವಾರ ಸಂಭ್ರಮದಿಂದ ಜರುಗಿತು.</p>.<p>ಕುಂಭೋತ್ಸವದ ಅಂಗವಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿವಿಧಾನಗಳು ಜರುಗಿದವು.</p>.<p>ಐದು ವರ್ಷಕ್ಕೊಮ್ಮೆ ಜರುಗುವ ಕುಂಭೋತ್ಸವದ ಅಂಗವಾಗಿ ಮಾರೆಮ್ಮದೇವಿ ಹಾಗೂ ಸುಂಕ್ಲಮ್ಮದೇವಿಯರ ಉತ್ಸವಮೂರ್ತಿ ಮೆರವಣಿಗೆ ಜರುಗಿತು. ದೇವಸ್ಥಾನದ ಆವರಣದಿಂದ ಆರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡಿತು.</p>.<p>ಡೊಳ್ಳು, ಸಮಾಳ, ತಾಸಿರಾಮ್, ರಾಮ್ ಡೋಲ್, ಪೂರ್ಣಕುಂಭ ಮತ್ತು ಕಳಸ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಕುರುಗೋಡು, ಕೆರೆಕೆರೆ, ಕಲ್ಲುಕಂಬ, ಬಾದನಹಟ್ಟಿ, ಮುಷ್ಟಗಟ್ಟೆ, ಗೆಣಿಕೆಹಾಳು, ಕುರುಗೋಡು, ಸೋಮಲಾಪುರ, ಕ್ಯಾದಿಗೆಹಾಳು, ಎಮ್ಮಿಗನೂರು, ಕಂಪ್ಲಿ. ಲಕ್ಷಿಪುರ, ಶ್ರೀನಿವಾಸಕ್ಯಾಂಪು, ರ್ವಾಯಿ-ಗುತ್ತಿಗನೂರು ಗ್ರಾಮಗಳ ಜನರು ಭಾಗವಹಿಸಿದ್ದರು. ಅಹಿತಕರ ಘಟನೆ ಜರುಗದಂತೆ ಸಿಪಿಐ ವಿಶ್ವನಾಥ ಕೆ. ಹಿರೇಗೌಡರ್, ಪಿಎಸ್ಐ ಸುಪ್ರೀತ್ ವಿರೂಪಾಕ್ಷಪ್ಪ ಮತ್ತು ಸಿಬ್ಬಂದಿ ಬಿಗಿ ಭದ್ರತೆ ಕೈಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>