<p><strong>ಕುರುಗೋಡು:</strong> ಕನ್ನಡ ಚಲನಚಿತ್ರ ರಂಗ ಕಂಡ ಅಪ್ರತಿಮ ಹಾಸ್ಯ ಕಲಾವಿದ ದ್ವಾರಕೀಶ್ ಅವರು ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಚಲನಚಿತ್ರಗಳಲ್ಲಿ ಅವರು ನಟಿಸಿದ ಹಾಸ್ಯಮಯ ಪಾತ್ರಗಳಲ್ಲಿ ಜೀವಂತವಾಗಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಚಿತ್ರನಟ ಸಾಧುಕೋಕಿಲ ಅಭಿಪ್ರಾಯಪಟ್ಟರು.</p>.<p>ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಅನ್ನಪೂರ್ಣ ಕ್ರಿಯೇಷನ್ಸ್ ಭಾನುವಾರ ಆಯೋಜಿಸಿದ್ದ ದ್ವಾರಕೀಶ್ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ದ್ವಾರಕೀಶ್ ಅವರಲ್ಲಿ ಸಹಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಗುಣ ಮನೆಮಾಡಿತ್ತು. ಅವರ ಹಾಸ್ಯಮಯ ನಟನೆಯ ಪ್ರಭಾವದಿಂದ ನಾನು ಚಲನಚಿತ್ರ ರಂಗದಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಲು ಕಾರಣ’ ಎಂದರು.</p>.<p>‘ಹಾಸ್ಯ ಕಲಾವಿದರಾದ ಅವರಲ್ಲಿ ಒಬ್ಬ ಉತ್ತಮ ನಿರ್ದೇಶಕ ಕೂಡ ಇದ್ದ. ಅದರ ಪರಿಣಾಮವಾಗಿ ಕನ್ನಡ, ತೆಲುಗು ಚಿತ್ರಗಳ ಜತೆಗೆ ಹಿಂದಿ ಚಲನಚಿತ್ರ ರಂಗ ದೈತ್ಯ ಪ್ರತಿಭೆ ಅಮಿತಾಬ್ ಬಚ್ಚನ್ ಅವರ ಚಿತ್ರವನ್ನೂ ನಿರ್ದೇಶಿಸಿದ್ದರು’ ಎಂದು ಅವರ ಕಾರ್ಯವೈಖರಿಯನ್ನು ಮೆಲುಕು ಹಾಕಿದರು.</p>.<p>ಸಿರಿಗೇರಿ ಯರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಹುಲುಗಪ್ಪ, ಉಪನ್ಯಾಸಕ ಬಕಾಟೆ ಪಂಪಾಪತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು:</strong> ಕನ್ನಡ ಚಲನಚಿತ್ರ ರಂಗ ಕಂಡ ಅಪ್ರತಿಮ ಹಾಸ್ಯ ಕಲಾವಿದ ದ್ವಾರಕೀಶ್ ಅವರು ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಚಲನಚಿತ್ರಗಳಲ್ಲಿ ಅವರು ನಟಿಸಿದ ಹಾಸ್ಯಮಯ ಪಾತ್ರಗಳಲ್ಲಿ ಜೀವಂತವಾಗಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಚಿತ್ರನಟ ಸಾಧುಕೋಕಿಲ ಅಭಿಪ್ರಾಯಪಟ್ಟರು.</p>.<p>ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಅನ್ನಪೂರ್ಣ ಕ್ರಿಯೇಷನ್ಸ್ ಭಾನುವಾರ ಆಯೋಜಿಸಿದ್ದ ದ್ವಾರಕೀಶ್ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ದ್ವಾರಕೀಶ್ ಅವರಲ್ಲಿ ಸಹಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಗುಣ ಮನೆಮಾಡಿತ್ತು. ಅವರ ಹಾಸ್ಯಮಯ ನಟನೆಯ ಪ್ರಭಾವದಿಂದ ನಾನು ಚಲನಚಿತ್ರ ರಂಗದಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಲು ಕಾರಣ’ ಎಂದರು.</p>.<p>‘ಹಾಸ್ಯ ಕಲಾವಿದರಾದ ಅವರಲ್ಲಿ ಒಬ್ಬ ಉತ್ತಮ ನಿರ್ದೇಶಕ ಕೂಡ ಇದ್ದ. ಅದರ ಪರಿಣಾಮವಾಗಿ ಕನ್ನಡ, ತೆಲುಗು ಚಿತ್ರಗಳ ಜತೆಗೆ ಹಿಂದಿ ಚಲನಚಿತ್ರ ರಂಗ ದೈತ್ಯ ಪ್ರತಿಭೆ ಅಮಿತಾಬ್ ಬಚ್ಚನ್ ಅವರ ಚಿತ್ರವನ್ನೂ ನಿರ್ದೇಶಿಸಿದ್ದರು’ ಎಂದು ಅವರ ಕಾರ್ಯವೈಖರಿಯನ್ನು ಮೆಲುಕು ಹಾಕಿದರು.</p>.<p>ಸಿರಿಗೇರಿ ಯರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಹುಲುಗಪ್ಪ, ಉಪನ್ಯಾಸಕ ಬಕಾಟೆ ಪಂಪಾಪತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>