ಕೊರೊನಾದಿಂದ ಒಂದೂವರೆ ವರ್ಷ ಸರಿಯಾಗಿ ಶಾಲಾ ಕಾಲೇಜುಗಳಿಲ್ಲದೆ ಶಿಕ್ಷಣದಿಂದ ವಂಚಿತರಾಗಿದ್ದೇವೆ. ಇದೀಗ ಶಾಲಾ ಕಾಲೇಜು ಆರಂಭವಾಗಿವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್ ಸೇವೆ ಒದಗಿಸುವ ಮೂಲಕ ಜಿಲ್ಲೆಯವರಾದ ಸಾರಿಗೆ ಸಚಿವ ಬಿ. ಶ್ರೀರಾಮುಲು, ಹಿರಿಯ ಅಧಿಕಾರಿಗಳು ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಾದ ಕೆ. ಹೇಮೇಶ್ವರ, ಉದಯ ಕುಮಾರ್, ಶಿವು, ಶಿವಶಂಕರ್, ಹೈಯದ ಬೀ, ನೀಲಾವತಿ, ಮಂಜುಳಾ, ನೇತ್ರಾವತಿ, ಪಾರ್ವತಿ, ಸುಷ್ಮಾ, ಕಲಾವತಿ, ಶ್ರೀಕಾಂತ್, ಸಿದ್ದೇಶ, ಯುವರಾಜ್, ಮಣಿಕಂಠ, ಸುರೇಶ್, ಕವಿತಾ, ರೋಜಾ, ಕಲ್ಪನಾ, ಕಾವ್ಯ, ನಾಗರಾಜ್, ಶಶಿಕುಮಾರ್, ಸಂಗೀತ, ಸಮೀರ್ ಮನವಿ ಮಾಡಿದರು.