<p>ಬಳ್ಳಾರಿ: ಶೇ 75ರಷ್ಟು ಹಾಜರಾತಿ ಪ್ರಮಾಣ ಇರದ ಕಾರಣ ಎಲ್ಎಲ್ಎಂ ಮೊದಲ ಮತ್ತು ಎರಡನೇ ಸೆಮಿಸ್ಟರ್ನ ಬಹುತೇಕ ವಿದ್ಯಾರ್ಥಿಗಳನ್ನು ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪರೀಕ್ಷೆಗೆ ನಿರ್ಬಂಧಿಸಿದೆ.</p>.<p>ನಿಯಮಗಳ ಪ್ರಕಾರ, ಶೇ 75ರಷ್ಟು ಹಾಜರಾತಿ ಪ್ರಮಾಣವಿದ್ದರಷ್ಟೇ ಪರೀಕ್ಷೆಗೆ ಅವಕಾಶವಿದೆ. ಆದರೆ, ಮೊದಲ ಸೆಮಿಸ್ಟರ್ನ 33 ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ, ಎರಡನೇ ಸೆಮಿಸ್ಟರ್ನ 40 ವಿದ್ಯಾರ್ಥಿಗಳಲ್ಲಿ 7 ಜನಕ್ಕೆ ಮಾತ್ರ ನಿಗದಿತ ಹಾಜರಾತಿ ಇತ್ತು. ಇದನ್ನು ಗಮನಿಸಿದ ಕುಲಪತಿ ಪ್ರೊ. ಮುನಿರಾಜು ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ ಅವಕಾಶ ನೀಡಬಾರದು ಎಂದು ವಿಭಾಗದ ಮುಖ್ಯಸ್ಥರಿಗೆ ಸೂಚಿಸಿದ್ದರು. ಅದರಂತೆ ಏಪ್ರಿಲ್ 9 ಮತ್ತು 11ರಂದು ಪರೀಕ್ಷೆ ಬರೆಯಲು 8 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು.</p>.<p>‘ಎಲ್ಎಲ್ಎಂನಲ್ಲಿ ವಿದ್ಯಾರ್ಥಿಗಳು ನಿರಂತರ ಗೈರಾಗುತ್ತಿರುವುದು ಗೊತ್ತಾಯಿತು. ಕಾನೂನು ಅಭ್ಯಾಸ ಮಾಡುವವರೇ ಹೀಗೆ ಮಾಡಿದರೆ ಹೇಗೆ? ಆದ್ದರಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ದೃಷ್ಟಿಯಿಂದ ಇದು ಅನಿವಾರ್ಯ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮುನಿರಾಜು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ಶೇ 75ರಷ್ಟು ಹಾಜರಾತಿ ಪ್ರಮಾಣ ಇರದ ಕಾರಣ ಎಲ್ಎಲ್ಎಂ ಮೊದಲ ಮತ್ತು ಎರಡನೇ ಸೆಮಿಸ್ಟರ್ನ ಬಹುತೇಕ ವಿದ್ಯಾರ್ಥಿಗಳನ್ನು ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪರೀಕ್ಷೆಗೆ ನಿರ್ಬಂಧಿಸಿದೆ.</p>.<p>ನಿಯಮಗಳ ಪ್ರಕಾರ, ಶೇ 75ರಷ್ಟು ಹಾಜರಾತಿ ಪ್ರಮಾಣವಿದ್ದರಷ್ಟೇ ಪರೀಕ್ಷೆಗೆ ಅವಕಾಶವಿದೆ. ಆದರೆ, ಮೊದಲ ಸೆಮಿಸ್ಟರ್ನ 33 ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ, ಎರಡನೇ ಸೆಮಿಸ್ಟರ್ನ 40 ವಿದ್ಯಾರ್ಥಿಗಳಲ್ಲಿ 7 ಜನಕ್ಕೆ ಮಾತ್ರ ನಿಗದಿತ ಹಾಜರಾತಿ ಇತ್ತು. ಇದನ್ನು ಗಮನಿಸಿದ ಕುಲಪತಿ ಪ್ರೊ. ಮುನಿರಾಜು ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ ಅವಕಾಶ ನೀಡಬಾರದು ಎಂದು ವಿಭಾಗದ ಮುಖ್ಯಸ್ಥರಿಗೆ ಸೂಚಿಸಿದ್ದರು. ಅದರಂತೆ ಏಪ್ರಿಲ್ 9 ಮತ್ತು 11ರಂದು ಪರೀಕ್ಷೆ ಬರೆಯಲು 8 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು.</p>.<p>‘ಎಲ್ಎಲ್ಎಂನಲ್ಲಿ ವಿದ್ಯಾರ್ಥಿಗಳು ನಿರಂತರ ಗೈರಾಗುತ್ತಿರುವುದು ಗೊತ್ತಾಯಿತು. ಕಾನೂನು ಅಭ್ಯಾಸ ಮಾಡುವವರೇ ಹೀಗೆ ಮಾಡಿದರೆ ಹೇಗೆ? ಆದ್ದರಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ದೃಷ್ಟಿಯಿಂದ ಇದು ಅನಿವಾರ್ಯ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮುನಿರಾಜು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>