ರಂಜಿತ್ ಕುಮಾರ್ ಬಂಡಾರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ಗೊಂದಲಕ್ಕಿಲ್ಲ ಅವಕಾಶ’: ‘ಮೊದಲಿಗೆ ಮೈಸೂರಿನ ಪೊಲೀಸ್ ಅಕಾಡೆಮಿಗೆ ಆರು ಅಧಿಕಾರಿಗಳನ್ನು ಕಳುಹಿಸಿ ಅವರಿಗೆ ತರಬೇತಿ ಕೊಡಿಸಿದ್ದೆವು. ಅವರನ್ನು ‘ಮಾಸ್ಟರ್ ಟ್ರೈನರ್ಸ್’ ಎಂದು ಕರೆಯುತ್ತೇವೆ. ಅವರ ಮೂಲಕ ಈಗಾಗಲೇ ಶೇ 100ರಷ್ಟು ಅಧಿಕಾರಿಗಳಿಗೆ ಶೇ 80ರಷ್ಟು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಹೊಸ ಕಾನೂನು ಜಾರಿಯಾದಾಗ ಗೊಂದಲಗಳಿಗೆ ಅವಕಾಶ ನೀಡದಂತೆ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಕರಣ ದಾಖಲೀಕರಣದ ವೇಳೆ ಸೆಕ್ಷನ್ ತಪ್ಪಾಗಿ ನಮೂದು ಮಾಡಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಆದರೆ ಇಡೀ ಪ್ರಕ್ರಿಯೆಯಲ್ಲಿ ತಪ್ಪು ಮಾಡಬಾರದು. ಅದಕ್ಕಾಗಿ ತರಬೇತಿ ನೀಡುತ್ತಿದ್ದೇವೆ.
–ರಂಜಿತ್ ಕುಮಾರ್ ಬಂಡಾರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ