<p><strong>ಸಿರುಗುಪ್ಪ: </strong>ಅತಿದೊಡ್ಡ ಹಬ್ಬವಾದ ಗಣೇಶೋತ್ಸವವನ್ನು ಕೋವಿಡ್-19ನ ಮೂರನೇ ಅಲೆಯ ನೆಪವೊಡ್ಡಿ ನಿಷೇದ ಹೇರುವುದು ಸರಿಯಲ್ಲ ಎಂದು ಭಜರಂಗ ದಳದ ತಾಲೂಕು ಸಂಯೋಜಕ ಎಂ.ಆರ್.ಹೇಮನಗೌಡ ಅಸಮಧಾನ ವ್ಯಕ್ತಪಡಿಸಿದರು.</p>.<p>ಗಣೇಶೋತ್ಸವಕ್ಕೆ ಅನುಮತಿ ಕೇಳಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಶಿರಸ್ತೇದಾರ್ ಎನ್.ಬಾಬು ಅವರಿಗೆ ಗುರುವಾರ ಸಲ್ಲಿಸಿ ಮಾತನಾಡಿದರು.</p>.<p>ಗಣೇಶೋತ್ಸವ ನಿಷೇಧ ಮಾಡಿ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಂತಾಗಿದ್ದು ಆಚರಣೆಗೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.</p>.<p>ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಉಪಾಧ್ಯಕ್ಷ ಆನಂದ ಹೆಗಡೆ, ಚನ್ನಬಸವ, ಮನೋಹರ, ಗೋಪಾಲಕೃಷ್ಣ, ಶಿವಕುಮಾರ್, ಶಾಂತಸ್ವಾಮಿ, ಮಂಜುನಾಥಸ್ವಾಮಿ, ಶ್ರೀನಿವಾಸ, ಪಣೀಂದ್ರ ಈ ಸಂದರ್ಭದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ: </strong>ಅತಿದೊಡ್ಡ ಹಬ್ಬವಾದ ಗಣೇಶೋತ್ಸವವನ್ನು ಕೋವಿಡ್-19ನ ಮೂರನೇ ಅಲೆಯ ನೆಪವೊಡ್ಡಿ ನಿಷೇದ ಹೇರುವುದು ಸರಿಯಲ್ಲ ಎಂದು ಭಜರಂಗ ದಳದ ತಾಲೂಕು ಸಂಯೋಜಕ ಎಂ.ಆರ್.ಹೇಮನಗೌಡ ಅಸಮಧಾನ ವ್ಯಕ್ತಪಡಿಸಿದರು.</p>.<p>ಗಣೇಶೋತ್ಸವಕ್ಕೆ ಅನುಮತಿ ಕೇಳಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಶಿರಸ್ತೇದಾರ್ ಎನ್.ಬಾಬು ಅವರಿಗೆ ಗುರುವಾರ ಸಲ್ಲಿಸಿ ಮಾತನಾಡಿದರು.</p>.<p>ಗಣೇಶೋತ್ಸವ ನಿಷೇಧ ಮಾಡಿ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಂತಾಗಿದ್ದು ಆಚರಣೆಗೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.</p>.<p>ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಉಪಾಧ್ಯಕ್ಷ ಆನಂದ ಹೆಗಡೆ, ಚನ್ನಬಸವ, ಮನೋಹರ, ಗೋಪಾಲಕೃಷ್ಣ, ಶಿವಕುಮಾರ್, ಶಾಂತಸ್ವಾಮಿ, ಮಂಜುನಾಥಸ್ವಾಮಿ, ಶ್ರೀನಿವಾಸ, ಪಣೀಂದ್ರ ಈ ಸಂದರ್ಭದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>