ಬರದ ನಡುವೆಯೂ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಹೆಚ್ಚುವರಿ ಹಾಲನ್ನು ಬಳಸಿ ಹಾಲಿನ ಪುಡಿ ಮಾಡಲಾಗುತ್ತಿದೆ. ಹಾಲಿನ ಉತ್ಪಾದನೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ನಂತರ ಉಪ ಉತ್ಪನ್ನಗಳನ್ನು ತಯಾರಿಸಲು ಹೆಚ್ಚುವರಿ ಹಾಲು ಬಳಸಲಾಗುವುದು
ತಿರುಪತಪ್ಪ ಟಿ. ವ್ಯವಸ್ಥಾಪಕ ನಿರ್ದೇಶಕ ರಾಬಕೊ
ಪ್ರೋತ್ಸಾಹಿಸದ ಸರ್ಕಾರ!
ರಾಬಕೊ ವ್ಯಾಪ್ತಿಗೆ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳು ಸೇರುತ್ತವೆ. ಈ ನಾಲ್ಕೂ ಜಿಲ್ಲೆಗಳಲ್ಲಿ ಒಟ್ಟಾರೆ ಸರಿ ಸುಮಾರು 30 ಸಾವಿರ ರೈತರು ಹಾಲು ಪೂರೈಕೆ ಮಾಡುತ್ತಾರೆ. ಹಾಲು ಪೂರೈಕೆದಾರರಿಗೆ 2023ರ ಸೆಪ್ಟೆಂಬರ್ನಿಂದ ಈ ವರೆಗೆ ₹5ಗಳ ಪ್ರೋತ್ಸಾಹಧನವನ್ನು ಸರ್ಕಾರ ಕೊಟ್ಟಿಲ್ಲ. ಈ ಮಧ್ಯೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಲು ಉತ್ಪಾದಕರಿಗೆ ಒಂದೆರಡು ತಿಂಗಳ ಪ್ರೋತ್ಸಾಹಧನ ಸಿಕ್ಕಿರುವುದು ಬಿಟ್ಟರೆ ಬಹುತೇಕರಿಗೆ 8 ತಿಂಗಳ ಪ್ರೋತ್ಸಾಹಧನ ಪಾವತಿ ಬಾಕಿ ಇದೆ. ಒಟ್ಟು ₹219226072 ಯಷ್ಟು ಬಾಕಿ ಪಾವತಿ ಮಾಡಬೇಕಿದೆ ಎಂದು ಅಧಿಕೃತ ದಾಖಲೆಗಳಿಂದ ಗೊತ್ತಾಗಿದೆ.