<p><strong>ಕುರುಗೋಡು</strong>: ರೇಣುಕಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ರೇಣುಕಾಚಾರ್ಯರ ಚಿತ್ರ ಮೆರವಣಿಗೆಯು ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು, ರಾಘವಾಂಕ ಶಿವಾಚಾರ್ಯ ಸ್ವಾಮೀಜಿ ಮಠದ ಆವರಣದಲ್ಲಿ ಸಮಾವೇಶಗೊಂಡಿತು.</p>.<p>ವೀರಭದ್ರ ವೇಷ, ವೀರಗಾಸೆ, ನಂದಿ ಧ್ವಜ, ಡೊಳ್ಳು, ಮೇಳ, ಸಮಾಳ ವಾದ್ಯ ಮೆರುಗು ಹೆಚ್ಚಿಸಿತು. ಮಹಿಳೆಯರು ಕಳಸ ಹಾಗೂ ಪೂರ್ಣಕುಂಭ ಹೊತ್ತು ಸಾಗಿದರು.</p>.<p>ಹರಗಿನಡೋಣಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸರ್ವರಿಗೂ ಹಿತವಾದ ಧರ್ಮವನ್ನು ಬೋಧನೆ ಮಾಡುವ ಸದುದ್ದೇಶದಿಂದಲೇ ರೇಣುಕಾಚಾರ್ಯರು ಭೂಮಿ ಮೇಲೆ ಜನ್ಮ ತಾಳಿದರು. ಪೃಥ್ವಿ ತತ್ವ ಬೋಧಿಸಿದ ಅವರನ್ನು ಎಲ್ಲ ಧರ್ಮಿಯರು ಪೂಜಿಸಬೇಕು’ ಎಂದರು.</p>.<p>‘ಯಾರ ಮನಸನ್ನೂ ನರಳಿಸದೆ, ಕೆರಳಿಸದೆ, ಅರಳಿಸಿದ ಧರ್ಮವೆಂದರೆ ಅದು ವೀರಶೈವ ಧರ್ಮ. ಮನುಜ ಮತವನ್ನು ವಿಶ್ವಪಥವನ್ನಾಗಿಸಿದ ಶ್ರೇಷ್ಠ ಧರ್ಮವಿದು’ ಎಂದು ಬಣ್ಣಿಸಿದರು.</p>.<p>ಇಟಗಿ ಮಠದ ಗುರು ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮತ್ತು ಎಚ್. ವೀರಾಪುರ ಶಿವಲಿಂಗ ಮಠದ ಜಡೇಶ ಸ್ವಾಮಿ ಮಾತನಾಡಿದರು. </p>.<p><strong>ತಾಲ್ಲೂಕು ಕಚೇರಿ:</strong> ಇಲ್ಲಿ ರೇಣುಕಾಚಾರ್ಯರ ಚಿತ್ರಕ್ಕೆ ಗ್ರೇಡ್–2 ತಹಶೀಲ್ದಾರ್ ಮಲ್ಲೇಶಪ್ಪ ಅವರು ಪೂಜೆ ಸಲ್ಲಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು</strong>: ರೇಣುಕಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ರೇಣುಕಾಚಾರ್ಯರ ಚಿತ್ರ ಮೆರವಣಿಗೆಯು ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು, ರಾಘವಾಂಕ ಶಿವಾಚಾರ್ಯ ಸ್ವಾಮೀಜಿ ಮಠದ ಆವರಣದಲ್ಲಿ ಸಮಾವೇಶಗೊಂಡಿತು.</p>.<p>ವೀರಭದ್ರ ವೇಷ, ವೀರಗಾಸೆ, ನಂದಿ ಧ್ವಜ, ಡೊಳ್ಳು, ಮೇಳ, ಸಮಾಳ ವಾದ್ಯ ಮೆರುಗು ಹೆಚ್ಚಿಸಿತು. ಮಹಿಳೆಯರು ಕಳಸ ಹಾಗೂ ಪೂರ್ಣಕುಂಭ ಹೊತ್ತು ಸಾಗಿದರು.</p>.<p>ಹರಗಿನಡೋಣಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸರ್ವರಿಗೂ ಹಿತವಾದ ಧರ್ಮವನ್ನು ಬೋಧನೆ ಮಾಡುವ ಸದುದ್ದೇಶದಿಂದಲೇ ರೇಣುಕಾಚಾರ್ಯರು ಭೂಮಿ ಮೇಲೆ ಜನ್ಮ ತಾಳಿದರು. ಪೃಥ್ವಿ ತತ್ವ ಬೋಧಿಸಿದ ಅವರನ್ನು ಎಲ್ಲ ಧರ್ಮಿಯರು ಪೂಜಿಸಬೇಕು’ ಎಂದರು.</p>.<p>‘ಯಾರ ಮನಸನ್ನೂ ನರಳಿಸದೆ, ಕೆರಳಿಸದೆ, ಅರಳಿಸಿದ ಧರ್ಮವೆಂದರೆ ಅದು ವೀರಶೈವ ಧರ್ಮ. ಮನುಜ ಮತವನ್ನು ವಿಶ್ವಪಥವನ್ನಾಗಿಸಿದ ಶ್ರೇಷ್ಠ ಧರ್ಮವಿದು’ ಎಂದು ಬಣ್ಣಿಸಿದರು.</p>.<p>ಇಟಗಿ ಮಠದ ಗುರು ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮತ್ತು ಎಚ್. ವೀರಾಪುರ ಶಿವಲಿಂಗ ಮಠದ ಜಡೇಶ ಸ್ವಾಮಿ ಮಾತನಾಡಿದರು. </p>.<p><strong>ತಾಲ್ಲೂಕು ಕಚೇರಿ:</strong> ಇಲ್ಲಿ ರೇಣುಕಾಚಾರ್ಯರ ಚಿತ್ರಕ್ಕೆ ಗ್ರೇಡ್–2 ತಹಶೀಲ್ದಾರ್ ಮಲ್ಲೇಶಪ್ಪ ಅವರು ಪೂಜೆ ಸಲ್ಲಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>