<p><strong>ಸಂಡೂರು:</strong> ತಾಲ್ಲೂಕಿನ ತೋರಣಗಲ್ಲು ಗ್ರಾಮದಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ನೂತನ ವಾಣಿಜ್ಯ ಮಳಿಗೆಗಳ ಕಟ್ಟಡವು ಕಳೆದ ಒಂದು ವರ್ಷದಿಂದ ಉದ್ಘಾಟನೆಯ ಭಾಗ್ಯ ಕಾಣದೆ ಸಂಪೂರ್ಣವಾಗಿ ಪಾಳು ಬಿದ್ದಿದೆ.</p>.<p>ಗ್ರಾಮದಲ್ಲಿನ ನೂತನ ವಾಣಿಜ್ಯ ಮಳಿಗೆಗಳ ಕಟ್ಟಡವನ್ನು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಾತ್ ಇಲಾಖೆಯವತಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ರೊರ್ಬನ್ ಯೋಜನೆಯ ಅನುದಾನದಲ್ಲಿ ರೂ.80ಲಕ್ಷ ವೆಚ್ಚದಲ್ಲಿ ಒಟ್ಟು 10ಮಳಿಗೆಗಳನ್ನು ನಿರ್ಮಿಸಲಾಗಿದೆ.</p>.<p>ನೂತನ ವಾಣಿಜ್ಯ ಮಳಿಗೆಗಳ ಕಟ್ಟಡದ ಕಾಮಗಾರಿಯನ್ನು 2023ರ ಜ.1ರಂದು ಆರಂಭಿಸಿ 2024ರ ನ.21ಕ್ಕೆ ಮುಗಿಸಲಾಗಿದ್ದು, ಅಧಿಕಾರಿಗಳಾ, ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ, ನಿರ್ಲಕ್ಷ್ಯದಿಂದ ಕಳೆದ ವರ್ಷದಿಂದ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯದೇ ನಿರುಪಯುಕ್ತವಾಗಿ ಅವನತಿಯತ್ತಸಾಗಿವೆ.</p>.<p>ನೂತನ ವಾಣಿಜ್ಯ ಮಳಿಗೆಗಳ ಕಟ್ಟಡವು ಪ್ರಸ್ತುತ ದಿನಗಳಲ್ಲಿ ಕುಡಕರ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟಿದ್ದು, ಮಳಿಗೆಗಳ ಆವರಣದಲ್ಲಿ ಮದ್ಯದ ಬಾಟಲಿ, ಪೌಚ್ಗಳು, ಗುಟ್ಕಾ ಚೀಟಿಗಳು ಸೇರಿದಂತೆ ಇತರೆ ತ್ಯಾಜ್ಯವು ಎಲ್ಲೆಂದರಲ್ಲೆ ರಾರಾಜಿಸುತ್ತಿದ್ದು, ಆಸ್ವಚ್ಚತೆಯಿಂದ ಕೂಡಿದೆ.</p>.<p>ವಾಣಿಜ್ಯ ಮಳಿಗೆಗಳ ಮೊದಲ ಮಹಡಿಯಲ್ಲಿನ ಕೆಲ ಕೊಠಡಿಗಳ ಕಭ್ಬಿಣದ ಬಾಗಿಲು ತೆರದಿದ್ದರಿಂದ ಮಳಿಗೆಗಳ ಒಳ ಆವರಣವು ಧೂಳುನಿಂದ ಆವರಿಸಿದ್ದು, ವ್ಯರ್ಥವಾದ ತ್ಯಾಜ್ಯವು ಸಂಗ್ರಹಗೊಂಡಿದೆ. ಕೊಠಡಿಗಳಿಗೆ ವಿದ್ಯುತ್ ಸಂಕರ್ಪವಿಲ್ಲದಿರುವುದರಿಂದ ವಿದ್ಯುತ್ ಸಂಪರ್ಕದ ಬೋರ್ಡ್, ಇತರೆ ವಿದ್ಯುತ್ ಪರಿಕರಗಳನ್ನು ಕೆಲ ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ.</p>.<p>ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಳಿಗೆಗಳನ್ನು ಗ್ರಾಮದ ಜನವಸತಿ ಪ್ರದೇಶದಲ್ಲಿ ನಿರ್ಮಾಣಮಾಡಿದ್ದರಿಂದ ಮಳಿಗೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಹರಾಜು ಪ್ರಕ್ರಿಯೆ ನಡೆಸಿ ಗ್ರಾಮದ ಬಡ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮದ ಜನರ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಡೂರು:</strong> ತಾಲ್ಲೂಕಿನ ತೋರಣಗಲ್ಲು ಗ್ರಾಮದಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ನೂತನ ವಾಣಿಜ್ಯ ಮಳಿಗೆಗಳ ಕಟ್ಟಡವು ಕಳೆದ ಒಂದು ವರ್ಷದಿಂದ ಉದ್ಘಾಟನೆಯ ಭಾಗ್ಯ ಕಾಣದೆ ಸಂಪೂರ್ಣವಾಗಿ ಪಾಳು ಬಿದ್ದಿದೆ.</p>.<p>ಗ್ರಾಮದಲ್ಲಿನ ನೂತನ ವಾಣಿಜ್ಯ ಮಳಿಗೆಗಳ ಕಟ್ಟಡವನ್ನು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಾತ್ ಇಲಾಖೆಯವತಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ರೊರ್ಬನ್ ಯೋಜನೆಯ ಅನುದಾನದಲ್ಲಿ ರೂ.80ಲಕ್ಷ ವೆಚ್ಚದಲ್ಲಿ ಒಟ್ಟು 10ಮಳಿಗೆಗಳನ್ನು ನಿರ್ಮಿಸಲಾಗಿದೆ.</p>.<p>ನೂತನ ವಾಣಿಜ್ಯ ಮಳಿಗೆಗಳ ಕಟ್ಟಡದ ಕಾಮಗಾರಿಯನ್ನು 2023ರ ಜ.1ರಂದು ಆರಂಭಿಸಿ 2024ರ ನ.21ಕ್ಕೆ ಮುಗಿಸಲಾಗಿದ್ದು, ಅಧಿಕಾರಿಗಳಾ, ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ, ನಿರ್ಲಕ್ಷ್ಯದಿಂದ ಕಳೆದ ವರ್ಷದಿಂದ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯದೇ ನಿರುಪಯುಕ್ತವಾಗಿ ಅವನತಿಯತ್ತಸಾಗಿವೆ.</p>.<p>ನೂತನ ವಾಣಿಜ್ಯ ಮಳಿಗೆಗಳ ಕಟ್ಟಡವು ಪ್ರಸ್ತುತ ದಿನಗಳಲ್ಲಿ ಕುಡಕರ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟಿದ್ದು, ಮಳಿಗೆಗಳ ಆವರಣದಲ್ಲಿ ಮದ್ಯದ ಬಾಟಲಿ, ಪೌಚ್ಗಳು, ಗುಟ್ಕಾ ಚೀಟಿಗಳು ಸೇರಿದಂತೆ ಇತರೆ ತ್ಯಾಜ್ಯವು ಎಲ್ಲೆಂದರಲ್ಲೆ ರಾರಾಜಿಸುತ್ತಿದ್ದು, ಆಸ್ವಚ್ಚತೆಯಿಂದ ಕೂಡಿದೆ.</p>.<p>ವಾಣಿಜ್ಯ ಮಳಿಗೆಗಳ ಮೊದಲ ಮಹಡಿಯಲ್ಲಿನ ಕೆಲ ಕೊಠಡಿಗಳ ಕಭ್ಬಿಣದ ಬಾಗಿಲು ತೆರದಿದ್ದರಿಂದ ಮಳಿಗೆಗಳ ಒಳ ಆವರಣವು ಧೂಳುನಿಂದ ಆವರಿಸಿದ್ದು, ವ್ಯರ್ಥವಾದ ತ್ಯಾಜ್ಯವು ಸಂಗ್ರಹಗೊಂಡಿದೆ. ಕೊಠಡಿಗಳಿಗೆ ವಿದ್ಯುತ್ ಸಂಕರ್ಪವಿಲ್ಲದಿರುವುದರಿಂದ ವಿದ್ಯುತ್ ಸಂಪರ್ಕದ ಬೋರ್ಡ್, ಇತರೆ ವಿದ್ಯುತ್ ಪರಿಕರಗಳನ್ನು ಕೆಲ ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ.</p>.<p>ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಳಿಗೆಗಳನ್ನು ಗ್ರಾಮದ ಜನವಸತಿ ಪ್ರದೇಶದಲ್ಲಿ ನಿರ್ಮಾಣಮಾಡಿದ್ದರಿಂದ ಮಳಿಗೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಹರಾಜು ಪ್ರಕ್ರಿಯೆ ನಡೆಸಿ ಗ್ರಾಮದ ಬಡ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮದ ಜನರ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>