<p><strong>ವಿಜಯನಗರ (ಹೊಸಪೇಟೆ):</strong> ‘ಕಾಯಕ ನಿಷ್ಠೆಯ ಮೂಲಕ ಸಮಾಜದಲ್ಲಿ ಗೌರವಕ್ಕೆ ಪಾತ್ರರಾದ ಸೂಲಗಿತ್ತಿ ನರಸಮ್ಮ ಎಲ್ಲರಿಗೂ ಮಾದರಿ’ ಎಂದು ಸಂಶೋಧನಾ ವಿದ್ಯಾರ್ಥಿ ಕೆ.ಎಸ್. ಸುಧಾಕರ ತಿಳಿಸಿದರು.</p>.<p>ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೇಸಿ ಮಾತು–4 ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ನರಸಮ್ಮ ವೃತ್ತಿ ಮತ್ತು ನಾಟಿ ಔಷಧಿ ನೀಡುವ ಮೂಲಕ ಮನೆಮಾತಾಗಿದ್ದರು. ಅವರು ಆಧುನಿಕ ತಂತ್ರಜ್ಞಾನಕ್ಕೆ ಸವಾಲಾಗುವ ಮೂಲಕ ದೇಸಿ ಪದ್ಧತಿಯಿಂದ ಸುಮಾರು 1,500 ಸಹಜ ಹಾಗೂ ಸರಳ ಹೆರಿಗೆಗಳನ್ನು ಮಾಡಿದ್ದರು’ ಎಂದರು.</p>.<p>‘ಗ್ರಾಮೀಣ ಭಾಗದ ಮಹಿಳೆಯರಲ್ಲಿ ಹೆರಿಗೆಯ ನೋವು ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಎಲ್ಲ ಕೆಲಸ ಬದಿಗೊತ್ತಿ ಹೆರಿಗೆ ಮಾಡುತ್ತಿದ್ದರು. ಜಾತಿ-ಮತ-ಧರ್ಮದ ಕರಿನೆರಳು ಬೀಳಿಸಿಕೊಳ್ಳದೇ ಬದುಕಿದ್ದರು’ ಎಂದು ತಿಳಿಸಿದರು.</p>.<p>ವಿಭಾಗದ ಹಿರಿಯ ಪ್ರಾಧ್ಯಾಪಕ ಮಂಜುನಾಥ ಬೇವಿನಕಟ್ಟಿ, ಪ್ರಾಧ್ಯಾಪಕ ಸಿ.ಟಿ.ಗುರುಪ್ರಸಾದ್, ಸಂಶೋಧನಾ ವಿದ್ಯಾರ್ಥಿಗಳಾದ ಡಿ.ಎಂ. ಪ್ರಹ್ಲಾದ, ಐ.ಡಿ. ಧನಲಕ್ಷ್ಮಿ, ಮಣಿಕಂಠ, ನಾಗೇಶ ಪೂಜಾರ್, ವಿದ್ಯಾ ಪಾಟಕರ್, ಕುಮಾರ ಎಲಿಬಳ್ಳಿ, ಬಿಳೇನಿ ಸಿದ್ದು ಬಿರಾದರ್, ಮಹಾಂತೇಶ್, ಬೆಟ್ಟಪ್ಪ, ಜಿ. ರಮೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯನಗರ (ಹೊಸಪೇಟೆ):</strong> ‘ಕಾಯಕ ನಿಷ್ಠೆಯ ಮೂಲಕ ಸಮಾಜದಲ್ಲಿ ಗೌರವಕ್ಕೆ ಪಾತ್ರರಾದ ಸೂಲಗಿತ್ತಿ ನರಸಮ್ಮ ಎಲ್ಲರಿಗೂ ಮಾದರಿ’ ಎಂದು ಸಂಶೋಧನಾ ವಿದ್ಯಾರ್ಥಿ ಕೆ.ಎಸ್. ಸುಧಾಕರ ತಿಳಿಸಿದರು.</p>.<p>ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೇಸಿ ಮಾತು–4 ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ನರಸಮ್ಮ ವೃತ್ತಿ ಮತ್ತು ನಾಟಿ ಔಷಧಿ ನೀಡುವ ಮೂಲಕ ಮನೆಮಾತಾಗಿದ್ದರು. ಅವರು ಆಧುನಿಕ ತಂತ್ರಜ್ಞಾನಕ್ಕೆ ಸವಾಲಾಗುವ ಮೂಲಕ ದೇಸಿ ಪದ್ಧತಿಯಿಂದ ಸುಮಾರು 1,500 ಸಹಜ ಹಾಗೂ ಸರಳ ಹೆರಿಗೆಗಳನ್ನು ಮಾಡಿದ್ದರು’ ಎಂದರು.</p>.<p>‘ಗ್ರಾಮೀಣ ಭಾಗದ ಮಹಿಳೆಯರಲ್ಲಿ ಹೆರಿಗೆಯ ನೋವು ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಎಲ್ಲ ಕೆಲಸ ಬದಿಗೊತ್ತಿ ಹೆರಿಗೆ ಮಾಡುತ್ತಿದ್ದರು. ಜಾತಿ-ಮತ-ಧರ್ಮದ ಕರಿನೆರಳು ಬೀಳಿಸಿಕೊಳ್ಳದೇ ಬದುಕಿದ್ದರು’ ಎಂದು ತಿಳಿಸಿದರು.</p>.<p>ವಿಭಾಗದ ಹಿರಿಯ ಪ್ರಾಧ್ಯಾಪಕ ಮಂಜುನಾಥ ಬೇವಿನಕಟ್ಟಿ, ಪ್ರಾಧ್ಯಾಪಕ ಸಿ.ಟಿ.ಗುರುಪ್ರಸಾದ್, ಸಂಶೋಧನಾ ವಿದ್ಯಾರ್ಥಿಗಳಾದ ಡಿ.ಎಂ. ಪ್ರಹ್ಲಾದ, ಐ.ಡಿ. ಧನಲಕ್ಷ್ಮಿ, ಮಣಿಕಂಠ, ನಾಗೇಶ ಪೂಜಾರ್, ವಿದ್ಯಾ ಪಾಟಕರ್, ಕುಮಾರ ಎಲಿಬಳ್ಳಿ, ಬಿಳೇನಿ ಸಿದ್ದು ಬಿರಾದರ್, ಮಹಾಂತೇಶ್, ಬೆಟ್ಟಪ್ಪ, ಜಿ. ರಮೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>