<p><strong>ಕೂಡ್ಲಿಗಿ</strong>: ಕಳೆದ ನಾಲ್ಕು ದಿನಗಳಲ್ಲಿ ಪಟ್ಟಣದ ಚೋರನೂರು ರಸ್ತೆಯಲ್ಲಿ ಎರಡು ಮನೆಯಲ್ಲಿ ಸರಣಿ ಕಳ್ಳತನ ನಡೆದಿದ್ದು, ಜನರು ಭಯಭೀತರಾಗಿದ್ದಾರೆ.</p>.<p>ನಾಲ್ಕು ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹೈದರ್ ಎಂಬುವರ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಬೀರುವಿನಲ್ಲಿ ಇದ್ದ 4 ತೊಲೆ ಬಂಗಾರ, 50 ಸಾವಿರ ನಗದು, 250 ಗ್ರಾಂ ಬೆಳ್ಳಿ, 6 ರೇಷ್ಮೆ ಸೀರೆ ಸೇರಿ ಸಿಸಿ ಕ್ಯಾಮಾರದ ಹಾರ್ಡ್ ಡಿಸ್ನ್ನು ಎತ್ತಿಕೊಂಡು ಹೋಗಿದ್ದಾರೆ. ಬೆಂಗಳೂರಿನಿಂದ ಭಾನುವಾರ ಬೆಳಿಗ್ಗೆ ಹೈದಾರ್ ಮನೆಗೆ ಬಂದಾಗ ಪ್ರಕರಣ ಬೆಳಿಕೆ ಬಂದಿದೆ.</p>.<p>ಇದರಂತೆ ಮಂಗಳವಾರ ನಿವೃತ್ತ ನೌಕರ ಸೋಮಶೇಖರ ಅವರು ಬೆಳಿಗ್ಗೆ ಹೊರಗಡೆ ಹೋದಾಗ ಮಧ್ಯಹ್ನದ ವೇಳೆ ಚಿಲಕ ಮುರಿದು 4 ತೊಲೆ ಬಂಗಾರ, 1 ಕೆಜಿ ಬೆಳ್ಳಿ, ₹ 10 ಸಾವಿರ ಕಳ್ಳತನ ಮಾಡಿದ್ದಾರೆ. ಎರಡು ಪ್ರಕರಣಗಳು ಪಟ್ಟಣದ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಪರಿಶೀಲಿಸಿದ್ದಾರೆ.</p>.<p>ಪಟ್ಟಣದಲ್ಲಿ ಹಾಡು ಹಗಲೇ ಕಳ್ಳತನ ನಡೆಯುತ್ತಿರುವುದು ಜನರಲ್ಲಿ ಭಯಭೀತಿ ಉಂಟು ಮಾಡಿದೆ. ರಾತ್ರಿ ವೇಳೆ ಪೊಲೀಸ್ ಗಸ್ತು ಹಾಕಬೇಕು. ಹಾಡು ಹಗಲೇ ಕಳ್ಳತನವಾಗುವುದನ್ನು ತಡೆಯಬೇಕು ಎಂದು ಜನರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ</strong>: ಕಳೆದ ನಾಲ್ಕು ದಿನಗಳಲ್ಲಿ ಪಟ್ಟಣದ ಚೋರನೂರು ರಸ್ತೆಯಲ್ಲಿ ಎರಡು ಮನೆಯಲ್ಲಿ ಸರಣಿ ಕಳ್ಳತನ ನಡೆದಿದ್ದು, ಜನರು ಭಯಭೀತರಾಗಿದ್ದಾರೆ.</p>.<p>ನಾಲ್ಕು ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹೈದರ್ ಎಂಬುವರ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಬೀರುವಿನಲ್ಲಿ ಇದ್ದ 4 ತೊಲೆ ಬಂಗಾರ, 50 ಸಾವಿರ ನಗದು, 250 ಗ್ರಾಂ ಬೆಳ್ಳಿ, 6 ರೇಷ್ಮೆ ಸೀರೆ ಸೇರಿ ಸಿಸಿ ಕ್ಯಾಮಾರದ ಹಾರ್ಡ್ ಡಿಸ್ನ್ನು ಎತ್ತಿಕೊಂಡು ಹೋಗಿದ್ದಾರೆ. ಬೆಂಗಳೂರಿನಿಂದ ಭಾನುವಾರ ಬೆಳಿಗ್ಗೆ ಹೈದಾರ್ ಮನೆಗೆ ಬಂದಾಗ ಪ್ರಕರಣ ಬೆಳಿಕೆ ಬಂದಿದೆ.</p>.<p>ಇದರಂತೆ ಮಂಗಳವಾರ ನಿವೃತ್ತ ನೌಕರ ಸೋಮಶೇಖರ ಅವರು ಬೆಳಿಗ್ಗೆ ಹೊರಗಡೆ ಹೋದಾಗ ಮಧ್ಯಹ್ನದ ವೇಳೆ ಚಿಲಕ ಮುರಿದು 4 ತೊಲೆ ಬಂಗಾರ, 1 ಕೆಜಿ ಬೆಳ್ಳಿ, ₹ 10 ಸಾವಿರ ಕಳ್ಳತನ ಮಾಡಿದ್ದಾರೆ. ಎರಡು ಪ್ರಕರಣಗಳು ಪಟ್ಟಣದ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಪರಿಶೀಲಿಸಿದ್ದಾರೆ.</p>.<p>ಪಟ್ಟಣದಲ್ಲಿ ಹಾಡು ಹಗಲೇ ಕಳ್ಳತನ ನಡೆಯುತ್ತಿರುವುದು ಜನರಲ್ಲಿ ಭಯಭೀತಿ ಉಂಟು ಮಾಡಿದೆ. ರಾತ್ರಿ ವೇಳೆ ಪೊಲೀಸ್ ಗಸ್ತು ಹಾಕಬೇಕು. ಹಾಡು ಹಗಲೇ ಕಳ್ಳತನವಾಗುವುದನ್ನು ತಡೆಯಬೇಕು ಎಂದು ಜನರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>