ರಾಜ್ಯ ಸರ್ಕಾರ ಗಣಿಗಾರಿಕೆಗೆ ಭೂಮಿ ನೀಡದಿರಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ. ಆದರೂ ಮುಂದೊಂದು ದಿನ ಬೇರೆ ಸರ್ಕಾರ ಬಂದು ಗಣಿಗಾರಿಕೆಗೆ ಮತ್ತೆ ಅನುಮತಿ ನೀಡುವ ಸಾಧ್ಯತೆಗಳಿವೆ. ಯಾವುದೇ ಸರ್ಕಾರ ಬಂದರೂ ಪರಿಸರ ಕಾಳಜಿ ಇರಬೇಕು
ಸಂತೋಶ್ ಮಾರ್ಟೀನ್ ಪರಿಸರ ಹೋರಾಟಗಾರ ಬಳ್ಳಾರಿ
ಭೂಮಿ ಮನುಷ್ಯನೊಬ್ಬನ ಸ್ವತ್ತಲ್ಲ. ಸಕಲ ಜೀವರಾಶಿಗಳಿಗೂ ಸೇರಿದ್ದು. ಬರಪೀಡಿತ ಬಳ್ಳಾರಿಯಲ್ಲಿ ಸಂಡೂರಿನಂಥ ಅರಣ್ಯ ಇರುವುದು ನಮ್ಮ ಅದೃಷ್ಟ. ಅದನ್ನು ಉಳಿಸಿಕೊಳ್ಳಬೇಕೆ ಹೊರತು ದೋಚಬಾರದು. ಈ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸಬೇಕಿತ್ತು. ಆದರೆ ಅದು ಆಗದೇ ಇರುವುದು ಬೇಸರದ ಸಂಗತಿ. ಇಂಥವುಗಳ ವಿರುದ್ಧ ಜನ ಹೋರಾಡಬೇಕು
ಮಲ್ಲಿಕಾರ್ಜುನ ರೆಡ್ಡಿ ವಕೀಲರು ಬಳ್ಳಾರಿ
ಸಂಡೂರಿನ ಪರಿಸರ ಕಾಪಾಡಲು ನಾಡಿನ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಉತ್ತಮ ಕೆಲಸ ಮಾಡಿದ್ದಾರೆ. ಇಲ್ಲಿನ ಲಕ್ಷಾಂತರ ಮರಗಳ ಮಾರಣ ಹೋಮಕ್ಕೆ ಕಾರಣವಾಗುವ ಗಣಿಗಾರಿಕೆಗೆ ಅವಕಾಶ ನೀಡಬಾರದು ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂಬುದೇ ಜನರ ಆಶಯ. ಅದರಂತೆ ಸರ್ಕಾರ ನಡೆದುಕೊಂಡಿದೆ