<p><strong>ಮರಿಯಮ್ಮನಹಳ್ಳಿ(ಹೊಸಪೇಟೆ ತಾಲ್ಲೂಕು): </strong>‘ಕಣ್ಣಮುಂದೆ ಅತ್ತಿಂದಿತ್ತ ಆಡಾಡ್ತ, ಓಡಾಡ್ತ ಇದ್ದ ಮಕ್ಳು ಕಣ್ಮುಚ್ಚಿ ತೆಗೆಯೊದೊರಳಗೆ ನೀರ್ಪಾಲಾದ್ವು. ಮದುವೆಯಾಗಿ ಮೂರು ವರ್ಸದ ನಂತ್ರ ಕಂಡ ಕಂಡ ದೇವರಿಗೆ ಹರಕೆ ಹೊತ್ತು ಹುಟ್ಟಿದ ಮಗ ಕಣ್ ಮುಂದೆಯೇ ಕಣ್ ಮುಚ್ಚಿಬಿಟ್ನಲ್ಲೊ, ಅದರಾಗ ಮೂವರಿಗೆ ಇರುವ ಒಂದೊಂದು ಕಂದನ್ನು ಕರೆದುಕೊಂಡುಬಿಟ್ಟೆಲ್ಲೊ...’</p>.<p>ಸಮೀಪದ ಜಿ.ನಾಗಲಾಪುರ ತಾಂಡಾಕ್ಕೆ ಮೂವರು ಮಕ್ಕಳ ಶವ ಬರುತ್ತಿದ್ದಂತೆ ಅವರ ಕುಟುಂಬಸ್ಥರು ಮೇಲಿನಂತೆ ನೆನೆದು ಕಣ್ಣೀರಾದರು.</p>.<p>ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮಕ್ಕೆ ಕಬ್ಬು ಕಡಿಯುವ ಕೆಲಸಕ್ಕೆ ಗ್ರಾಮಸ್ಥರು ತೆರಳಿದ್ದರು. ಮಂಗಳವಾರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾಗ ಮಕ್ಕಳು ಕಣ್ತಪ್ಪಿಸಿ ಆಟವಾಡುತ್ತ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು.</p>.<p>ಮೃತ ಮೂವರು ಮಕ್ಕಳು ಒಂದೇ ಕುಟುಂಬಕ್ಕೆ ಸೇರಿದವರು. ತಾಂಡಾದ ರವಿನಾಯ್ಕ ಅವರ ಪುತ್ರ ರೋಹಿತ್ (2), ಸಹೋದರ ಅಮರೇಶ್ನಾಯ್ಕ ಅವರ ಮಗಳು ಕಾವೇರಿ (2) ಹಾಗೂ ಸಹೋದರಿ ಗಂಗೀಬಾಯಿ (ಸಂಡೂರಿನ ಬಾವಳ್ಳಿತಾಂಡಾ) ಅವರ ಮಗ ಸಂಜೀವ್ನಾಯ್ಕ(4) ಮೃತರು.</p>.<p>ಬುಧವಾರ ಮಕ್ಕಳ ಮೃತದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಮೌನ, ದುಃಖ ಆವರಿಸಿಕೊಂಡಿತ್ತು.</p>.<p>1,200 ಜನಸಂಖ್ಯೆ ಇರುವ ಗ್ರಾಮದಲ್ಲಿ 230 ಮನೆಗಳಿವೆ. ಈ ಬಾರಿ ಕೋವಿಡ್ ಕಾರಣಕ್ಕಾಗಿ ಹೋದ ತಿಂಗಳು ಮನೆಯಲ್ಲಿ ಹಿರಿಯರನ್ನು ಬಿಟ್ಟು 100 ಕುಟುಂಬಗಳ 350ಕ್ಕೂ ಜನ ಕಬ್ಬು ಕಡೆಯಲು ಮೈಸೂರು, ಮಂಡ್ಯ, ಟಿ.ನರಸೀಪುರಕ್ಕೆ ತೆರಳಿದ್ದರು.</p>.<p>ಹೋಬಳಿ ವ್ಯಾಪ್ತಿಯಲ್ಲಿ ಬರುವ ತಾಳೇಬಸಾಪುರ ತಾಂಡಾದಲ್ಲಿ ಸುಮಾರು 650 ಜನ, ಗುಂಡಾ ತಾಂಡಾದಲ್ಲಿ 300, ಮರಿಯಮ್ಮನಹಳ್ಳಿ ತಾಂಡಾದಲ್ಲಿ 200ಕ್ಕೂ ಹೆಚ್ಚು ಜನ ಈಗಾಗಲೇ ಕಬ್ಬು ಕಡೆಯಲು ವಲಸೆ ಹೋಗಿದ್ದಾರೆ.</p>.<p>‘ನೋಡ್ರಿ ತಾಂಡಾಗಳಲ್ಲಿ ಬಹುತೇಕ ಕುಟುಂಬಗಳಿಗೆ ಕಬ್ಬು ಕಡೆಯುವ ವೃತ್ತಿ ಜೀವನಾಧಾರ. ಇಲ್ಲಿ ಸಿಗುವ ಕೂಲಿ ಗಿಟ್ಟುವುದಿಲ್ಲ ಎಂದು ಏಳೆಂಟು ತಿಂಗಳು ವಲಸೆ ಹೋಗುತ್ತಾರೆ. ಈ ಬಾರಿ ಮೈಸೂರು, ಮಂಡ್ಯ ಜಿಲ್ಲೆಗಳಿಗೆ ತೆರಳಿದ್ದಾರೆ. ಆದರೆ ಹಿಂದೆ ಎಂದೂ ಇಂತಹ ದುರ್ಘಟನೆಗಳು ಜರುಗಿರಲಿಲ್ಲ. ಏನೂ ಗೊತ್ತಾಗದ ಕೂಸುಗಳು ಸತ್ತಿವೆ’ ಎಂದು ತಾಂಡಾದ ಯುವಕ ಲೋಕ್ಯಾನಾಯ್ಕ ಕಣ್ಣೀರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮರಿಯಮ್ಮನಹಳ್ಳಿ(ಹೊಸಪೇಟೆ ತಾಲ್ಲೂಕು): </strong>‘ಕಣ್ಣಮುಂದೆ ಅತ್ತಿಂದಿತ್ತ ಆಡಾಡ್ತ, ಓಡಾಡ್ತ ಇದ್ದ ಮಕ್ಳು ಕಣ್ಮುಚ್ಚಿ ತೆಗೆಯೊದೊರಳಗೆ ನೀರ್ಪಾಲಾದ್ವು. ಮದುವೆಯಾಗಿ ಮೂರು ವರ್ಸದ ನಂತ್ರ ಕಂಡ ಕಂಡ ದೇವರಿಗೆ ಹರಕೆ ಹೊತ್ತು ಹುಟ್ಟಿದ ಮಗ ಕಣ್ ಮುಂದೆಯೇ ಕಣ್ ಮುಚ್ಚಿಬಿಟ್ನಲ್ಲೊ, ಅದರಾಗ ಮೂವರಿಗೆ ಇರುವ ಒಂದೊಂದು ಕಂದನ್ನು ಕರೆದುಕೊಂಡುಬಿಟ್ಟೆಲ್ಲೊ...’</p>.<p>ಸಮೀಪದ ಜಿ.ನಾಗಲಾಪುರ ತಾಂಡಾಕ್ಕೆ ಮೂವರು ಮಕ್ಕಳ ಶವ ಬರುತ್ತಿದ್ದಂತೆ ಅವರ ಕುಟುಂಬಸ್ಥರು ಮೇಲಿನಂತೆ ನೆನೆದು ಕಣ್ಣೀರಾದರು.</p>.<p>ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮಕ್ಕೆ ಕಬ್ಬು ಕಡಿಯುವ ಕೆಲಸಕ್ಕೆ ಗ್ರಾಮಸ್ಥರು ತೆರಳಿದ್ದರು. ಮಂಗಳವಾರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾಗ ಮಕ್ಕಳು ಕಣ್ತಪ್ಪಿಸಿ ಆಟವಾಡುತ್ತ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು.</p>.<p>ಮೃತ ಮೂವರು ಮಕ್ಕಳು ಒಂದೇ ಕುಟುಂಬಕ್ಕೆ ಸೇರಿದವರು. ತಾಂಡಾದ ರವಿನಾಯ್ಕ ಅವರ ಪುತ್ರ ರೋಹಿತ್ (2), ಸಹೋದರ ಅಮರೇಶ್ನಾಯ್ಕ ಅವರ ಮಗಳು ಕಾವೇರಿ (2) ಹಾಗೂ ಸಹೋದರಿ ಗಂಗೀಬಾಯಿ (ಸಂಡೂರಿನ ಬಾವಳ್ಳಿತಾಂಡಾ) ಅವರ ಮಗ ಸಂಜೀವ್ನಾಯ್ಕ(4) ಮೃತರು.</p>.<p>ಬುಧವಾರ ಮಕ್ಕಳ ಮೃತದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಮೌನ, ದುಃಖ ಆವರಿಸಿಕೊಂಡಿತ್ತು.</p>.<p>1,200 ಜನಸಂಖ್ಯೆ ಇರುವ ಗ್ರಾಮದಲ್ಲಿ 230 ಮನೆಗಳಿವೆ. ಈ ಬಾರಿ ಕೋವಿಡ್ ಕಾರಣಕ್ಕಾಗಿ ಹೋದ ತಿಂಗಳು ಮನೆಯಲ್ಲಿ ಹಿರಿಯರನ್ನು ಬಿಟ್ಟು 100 ಕುಟುಂಬಗಳ 350ಕ್ಕೂ ಜನ ಕಬ್ಬು ಕಡೆಯಲು ಮೈಸೂರು, ಮಂಡ್ಯ, ಟಿ.ನರಸೀಪುರಕ್ಕೆ ತೆರಳಿದ್ದರು.</p>.<p>ಹೋಬಳಿ ವ್ಯಾಪ್ತಿಯಲ್ಲಿ ಬರುವ ತಾಳೇಬಸಾಪುರ ತಾಂಡಾದಲ್ಲಿ ಸುಮಾರು 650 ಜನ, ಗುಂಡಾ ತಾಂಡಾದಲ್ಲಿ 300, ಮರಿಯಮ್ಮನಹಳ್ಳಿ ತಾಂಡಾದಲ್ಲಿ 200ಕ್ಕೂ ಹೆಚ್ಚು ಜನ ಈಗಾಗಲೇ ಕಬ್ಬು ಕಡೆಯಲು ವಲಸೆ ಹೋಗಿದ್ದಾರೆ.</p>.<p>‘ನೋಡ್ರಿ ತಾಂಡಾಗಳಲ್ಲಿ ಬಹುತೇಕ ಕುಟುಂಬಗಳಿಗೆ ಕಬ್ಬು ಕಡೆಯುವ ವೃತ್ತಿ ಜೀವನಾಧಾರ. ಇಲ್ಲಿ ಸಿಗುವ ಕೂಲಿ ಗಿಟ್ಟುವುದಿಲ್ಲ ಎಂದು ಏಳೆಂಟು ತಿಂಗಳು ವಲಸೆ ಹೋಗುತ್ತಾರೆ. ಈ ಬಾರಿ ಮೈಸೂರು, ಮಂಡ್ಯ ಜಿಲ್ಲೆಗಳಿಗೆ ತೆರಳಿದ್ದಾರೆ. ಆದರೆ ಹಿಂದೆ ಎಂದೂ ಇಂತಹ ದುರ್ಘಟನೆಗಳು ಜರುಗಿರಲಿಲ್ಲ. ಏನೂ ಗೊತ್ತಾಗದ ಕೂಸುಗಳು ಸತ್ತಿವೆ’ ಎಂದು ತಾಂಡಾದ ಯುವಕ ಲೋಕ್ಯಾನಾಯ್ಕ ಕಣ್ಣೀರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>