<p><strong>ಬಳ್ಳಾರಿ:</strong> ಚೆನ್ನೈನಿಂದ ಬಳ್ಳಾರಿ ನಗರಕ್ಕೆ ದ್ವಿಚಕ್ರ ವಾಹನಗಳನ್ನು ತಂದಿದ್ದ ಟ್ರಕ್ ಬೆಂಕಿಗೆ ಆಹುತಿಯಾಗಿದೆ. ಟ್ರಕ್ ಸಹಿತ 40 ಬೈಕ್ಗಳು ಸುಟ್ಟು ಕರಕಲಾಗಿವೆ. </p>.<p>ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ನಾಶಗೊಂಡಿರುವ ದ್ವಿಚಕ್ರವಾಹನಗಳ ಮೌಲ್ಯ ₹60 ಲಕ್ಷ ಎಂದು ಅಂದಾಜಿಸಲಾಗಿದೆ. </p>.<p>ಬಳ್ಳಾರಿ ನಗರದ ಯಮಹಾ ಶೋರೂಂಗೆ 20, ವಿಜಯಪುರದ ಶೋರೂಂಗೆ 20 ‘ಯಮಹಾ–ಎಫ್ಝಡ್’ ವಾಹನಗಳನ್ನು ಚೆನ್ನೈನಿಂದ ತಂದಿದ್ದ ಲಾರಿಯನ್ನು ಚಾಲಕ ಭಾನುವಾರ ಮಧ್ಯರಾತ್ರಿ ಬಳ್ಳಾರಿ ನಗರದ ಬೈಪಾಸ್ ಬಳಿ ರಸ್ತೆ ಬದಿಯಲ್ಲಿ ಹಾಕಿ ನಿದ್ರೆಗೆ ಜಾರಿದ್ದ ಎನ್ನಲಾಗಿದೆ. ಮುಂಜಾನೆ 5 ಗಂಟೆ ವೇಳೆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದರು. </p>.<p>ಅಗ್ನಿಶಾಮಕ ತಂಡ ಸ್ಥಳಕ್ಕೆ ಆಗಮಿಸಿತಾದರೂ ಅಷ್ಟರ ಒಳಗಾಗಿ ವಾಹನಗಳ ಸಹಿತ, ಬೈಕ್ಗಳೂ ಬೆಂಕಿಗೆ ಆಹುತಿಯಾಗಿವೆ. ಬೈಕ್ ಅಥವಾ ಟ್ರಕ್ನ ಬ್ಯಾಟರಿಯಲ್ಲಿನ ತಾಂತ್ರಿಕ ದೋಷದಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. </p>.<p>ಕಂಪನಿಯ ಅಧಿಕಾರಿಗಳು ಬಂದ ಬಳಿಕ ಎಫ್ಐಆರ್ ದಾಖಲಿಸಲಾಗುವುದು ಎಂದು ಗಾಂಧಿನಗರ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಚೆನ್ನೈನಿಂದ ಬಳ್ಳಾರಿ ನಗರಕ್ಕೆ ದ್ವಿಚಕ್ರ ವಾಹನಗಳನ್ನು ತಂದಿದ್ದ ಟ್ರಕ್ ಬೆಂಕಿಗೆ ಆಹುತಿಯಾಗಿದೆ. ಟ್ರಕ್ ಸಹಿತ 40 ಬೈಕ್ಗಳು ಸುಟ್ಟು ಕರಕಲಾಗಿವೆ. </p>.<p>ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ನಾಶಗೊಂಡಿರುವ ದ್ವಿಚಕ್ರವಾಹನಗಳ ಮೌಲ್ಯ ₹60 ಲಕ್ಷ ಎಂದು ಅಂದಾಜಿಸಲಾಗಿದೆ. </p>.<p>ಬಳ್ಳಾರಿ ನಗರದ ಯಮಹಾ ಶೋರೂಂಗೆ 20, ವಿಜಯಪುರದ ಶೋರೂಂಗೆ 20 ‘ಯಮಹಾ–ಎಫ್ಝಡ್’ ವಾಹನಗಳನ್ನು ಚೆನ್ನೈನಿಂದ ತಂದಿದ್ದ ಲಾರಿಯನ್ನು ಚಾಲಕ ಭಾನುವಾರ ಮಧ್ಯರಾತ್ರಿ ಬಳ್ಳಾರಿ ನಗರದ ಬೈಪಾಸ್ ಬಳಿ ರಸ್ತೆ ಬದಿಯಲ್ಲಿ ಹಾಕಿ ನಿದ್ರೆಗೆ ಜಾರಿದ್ದ ಎನ್ನಲಾಗಿದೆ. ಮುಂಜಾನೆ 5 ಗಂಟೆ ವೇಳೆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದರು. </p>.<p>ಅಗ್ನಿಶಾಮಕ ತಂಡ ಸ್ಥಳಕ್ಕೆ ಆಗಮಿಸಿತಾದರೂ ಅಷ್ಟರ ಒಳಗಾಗಿ ವಾಹನಗಳ ಸಹಿತ, ಬೈಕ್ಗಳೂ ಬೆಂಕಿಗೆ ಆಹುತಿಯಾಗಿವೆ. ಬೈಕ್ ಅಥವಾ ಟ್ರಕ್ನ ಬ್ಯಾಟರಿಯಲ್ಲಿನ ತಾಂತ್ರಿಕ ದೋಷದಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. </p>.<p>ಕಂಪನಿಯ ಅಧಿಕಾರಿಗಳು ಬಂದ ಬಳಿಕ ಎಫ್ಐಆರ್ ದಾಖಲಿಸಲಾಗುವುದು ಎಂದು ಗಾಂಧಿನಗರ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>