ತಹಶೀಲ್ದಾರ್ ವಿ.ಕಾರ್ತಿಕ್, ಜೆಸ್ಕಾಂ ಎಇಇ ಗದುಗಿನ ಕೇದಾರನಾಥ ಅವರು ಸಿಬ್ಬಂದಿಯೊಂದಿಗೆ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಮನವೊಲಿಸಿ ನದಿಗೆ ಅಳವಡಿಸಿರುವ ಮೋಟಾರ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ತಾಲ್ಲೂಕಿನ ಹರವಿಯಿಂದ ಹಕ್ಕಂಡಿ ಗ್ರಾಮವರೆಗೆ ನದಿ ತೀರದ ಮೋಟಾರ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕ್ರಮ ಕೈಗೊಂಡಿದ್ದು, ಇದಕ್ಕೆ ಕೆಲವೆಡೆ ವಿರೋಧ ವ್ಯಕ್ತವಾಗಿದೆ.