ಆಂಧ್ರದ ಅನಂತಪುರ ಜಿಲ್ಲೆಯ ಮೀನಾಕ್ಷಮ್ಮ(52), ಕಮಲಮ್ಮ(50) ಎಂದು ತಿಳಿದು ಬಂದಿದೆ. ‘ಇಬ್ಬರು ಸಹೋದರಿಯವರು ನ. 28ರಂದು ಊರು ಬಿಟ್ಟು ಹಂಪಿ ರಥಬೀದಿಯ ಸಾಲು ಮಂಟಪದಲ್ಲಿ ತಂಗಿದ್ದರು. ಬಹಳ ಹೊತ್ತು ಅಲ್ಲಿಯೇ ಇದ್ದ ಅವರನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಿಬ್ಬಂದಿ ವಿಚಾರಿಸಲು ಹೋಗಿದ್ದಾಗ ಇಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾದ ನಂತರ ಇಬ್ಬರ ಮೃತದೇಹಗಳನ್ನು ನಗರದ ಸರ್ಕಾರಿ ಆಸ್ಪತ್ರೆ ರವಾನಿಸಲಾಗಿತ್ತು. ಆದರೆ, ಯಾವ ಕಾರಣಕ್ಕಾಗಿ ಜೀವ ತ್ಯಜಿಸಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ’ ಎಂದು ಹಂಪಿ ಠಾಣೆ ಪೊಲೀಸರು ತಿಳಿಸಿದ್ದಾರೆ.