ಕೃಷಿಗೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ. ಆದರೆ, ಹೊಸ ಪ್ರಯೋಗ ನಡೆಸುವ ಮೂಲಕ ಸ್ವಾವಲಂಬಿ ಬದುಕು ಕಂಡುಕೊಂಡವರು ನಾರಾಯಣರೆಡ್ಡಿ. ಕೃಷಿಯಲ್ಲಿ ಈಗ ಸ್ಥಳೀಯವಾಗಿಯೂ ಸಾಕಷ್ಟು ಜನಪರ್ಯಾಯ ನಡೆಸುತ್ತಿದ್ದಾರೆ. ಇಂತಹವರಿಗೆ ಸ್ಫೂರ್ತಿಯಾಗಿರುವುದೇ ನಾರಾಯಣರೆಡ್ಡಿ ಅವರ ಪ್ರಯೋಗ. ನಮ್ಮದು ಅತೃಪ್ತಿಯ ಅರ್ಥಶಾಸ್ತ್ರವಾಗಿದೆ. ಕೃಷಿ ನಮಗೆ ನೆಮ್ಮದಿ ಹಾಗೂ ಅನ್ನ ನೀಡುತ್ತದೆ. ಇದಕ್ಕಿಂತಲೂ ಮನುಷ್ಯನಿಗೆ ಮತ್ತೇನು ಬೇಕಿದೆ ಎನ್ನುವುದು ನಾರಾಯಣರೆಡ್ಡಿ ಅವರ ಪ್ರತಿಪಾದನೆಯಾಗಿತ್ತು. ಅವರ ಹೊಸ ಕೃಷಿ ವಿಚಾರ ಮೆಚ್ಚಿದ ನಬಾರ್ಡ್ನ ಅಧಿಕಾರಿಯೊಬ್ಬರು ಅವರ ಎಲ್ಲ ಕೃಷಿ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಈ ಪುಸ್ತಕ ಕೃಷಿಯಲ್ಲಿ ಐತಿಹಾಸಿಕ ದಾಖಲಾ
ತಿಯಾಗಿ ಉಳಿಯಲಿದೆ ಎಂದರು.