ಜೂನ್ 22 ರಂದು ಆರೋಪಿಯನ್ನು ಬಂಧಿಸಿ ಎರಡು ದಿನ ವಿಚಾರಣೆಗೆಂದು ಠಾಣೆಯಲ್ಲಿ ಇರಿಸಿಕೊಳ್ಳಲಾಗಿತ್ತು, ಜೂನ್ 26ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಲು ಆರೋಗ್ಯ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಕೊರೊನ ಸೋಂಕು ಇರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆ ತಂದ ನಂತರ ನ್ಯಾಯಾಲಯದ ಆವರಣ ಮತ್ತು ಕಲಾಪದ ಸಭಾಂಗಣದಲ್ಲಿದ್ದ ಎಲ್ಲ ವಕೀಲರನ್ನು ಹೊರಗೆ ಕಳುಹಿಸಿ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಪ್ರತ್ಯೇಕವಾಗಿ ಇರಿಸುವುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.