<p><strong>ವಿಜಯಪುರ</strong>: ಗುಣಮಟ್ಟದ ಹಾಲಿನಿಂದ ಡೇರಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹಳಿಯೂರು ಡೇರಿಯ ನೂತನ ಅಧ್ಯಕ್ಷ ರಘುಪತಿ ಹೇಳಿದರು.</p>.<p>ಹೋಬಳಿಯ ಹಳಿಯೂರು ಡೇರಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದನಂತರ ಅವರು ಮಾತನಾಡಿದರು.</p>.<p>ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿರುವ ಕಾರಣ ರೈತಾಪಿ ವರ್ಗದವರು ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮವನ್ನು ಬಿಟ್ಟು ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ಇದರಿಂದ ಕುಟುಂಬಗಳ ನಿರ್ವಹಣೆ ಮೇಲೆ ಅಷ್ಟೊಂದು ಹೊಡೆತ ಬಿದ್ದಿಲ್ಲ ಎಂದರು.</p>.<p>ಹೈನುಗಾರಿಕೆ ಇಲ್ಲದಿದ್ದರೆ ಈ ಭಾಗದ ರೈತರು ಬೀದಿಗೆ ಬರಬೇಕಾಗಿತ್ತು. ರೈತರು ಉತ್ಪಾದನೆ ಮಾಡುತ್ತಿರುವ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಬೇಕಾಗಿದೆ. ನಾವೂ ಕೂಡ ನಂದಿನಿ ಉತ್ಪನ್ನಗಳನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ಡೇರಿ ಉಪಾಧ್ಯಕ್ಷೆ ಆನಂದಮ್ಮ, ನಿರ್ದೇಶಕರಾದ ಚನ್ನಕೃಷ್ಣ, ವೆಂಕಟಾಚಲ, ಶಿವಕುಮಾರ್, ಕೇಶವ, ನಾಗೇಶ್, ನವೀನ್, ಪ್ರತಾಪ್, ಗೌರಮ್ಮ, ನಾರಾಯಣಪ್ಪ, ಮಂಜು, ಮುನಿಶಾಮಪ್ಪ ಮುಖ್ಯ ಕಾರ್ಯನಿರ್ವಾಹಕ ವೀರಾಂಜನೇಯಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಗುಣಮಟ್ಟದ ಹಾಲಿನಿಂದ ಡೇರಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹಳಿಯೂರು ಡೇರಿಯ ನೂತನ ಅಧ್ಯಕ್ಷ ರಘುಪತಿ ಹೇಳಿದರು.</p>.<p>ಹೋಬಳಿಯ ಹಳಿಯೂರು ಡೇರಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದನಂತರ ಅವರು ಮಾತನಾಡಿದರು.</p>.<p>ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿರುವ ಕಾರಣ ರೈತಾಪಿ ವರ್ಗದವರು ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮವನ್ನು ಬಿಟ್ಟು ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ಇದರಿಂದ ಕುಟುಂಬಗಳ ನಿರ್ವಹಣೆ ಮೇಲೆ ಅಷ್ಟೊಂದು ಹೊಡೆತ ಬಿದ್ದಿಲ್ಲ ಎಂದರು.</p>.<p>ಹೈನುಗಾರಿಕೆ ಇಲ್ಲದಿದ್ದರೆ ಈ ಭಾಗದ ರೈತರು ಬೀದಿಗೆ ಬರಬೇಕಾಗಿತ್ತು. ರೈತರು ಉತ್ಪಾದನೆ ಮಾಡುತ್ತಿರುವ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಬೇಕಾಗಿದೆ. ನಾವೂ ಕೂಡ ನಂದಿನಿ ಉತ್ಪನ್ನಗಳನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ಡೇರಿ ಉಪಾಧ್ಯಕ್ಷೆ ಆನಂದಮ್ಮ, ನಿರ್ದೇಶಕರಾದ ಚನ್ನಕೃಷ್ಣ, ವೆಂಕಟಾಚಲ, ಶಿವಕುಮಾರ್, ಕೇಶವ, ನಾಗೇಶ್, ನವೀನ್, ಪ್ರತಾಪ್, ಗೌರಮ್ಮ, ನಾರಾಯಣಪ್ಪ, ಮಂಜು, ಮುನಿಶಾಮಪ್ಪ ಮುಖ್ಯ ಕಾರ್ಯನಿರ್ವಾಹಕ ವೀರಾಂಜನೇಯಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>