<p><strong>ಆನೇಕಲ್ : </strong>ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರೇಮಿಗಳು ಅಂಬೇಡ್ಕರ್ ಜಯಂತಿಯಂದು ದೇವರಕೊಂಡಪ್ಪ ವೃತ್ತದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸೋಮವಾರ ನವಜೀವನಕ್ಕೆ ಕಾಲಿಟ್ಟಿದ್ದಾರೆ.</p>.<p>ಮೈಸೂರಿನ ಟಿ.ನರಸೀಪುರದ ಕಿರಣ್ ಮತ್ತು ಪ್ರಿಯಾಂಕ ಅಂಬೇಡ್ಕರ್ ಜಯಂತಿಯಂದು ಹೊಸಜೀವನ ಆರಂಭಿಸಿದ ಜೋಡಿ.</p>.<p>ಸಂವಿಧಾನದ ಪೀಠಿಕೆ ಓದುವ ಮತ್ತು ಪಂಚಶೀಲ ತತ್ವ ದೀಕ್ಷೆ ಪಡೆಯುವ ಮೂಲಕ ನವಜೋಡಿ ವಿವಾಹವಾದರು. ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ವಿಶೇಷ ತಹಶೀಲ್ದಾರ್ ಕರಿಯ ನಾಯಕ್ ವಿವಾಹಕ್ಕೆ ಸಾಕ್ಷಿಯಾದರು.</p>.<p>‘ಒಂದೇ ಊರಿನವರಾದ ನಾವು ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಆದರೆ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಅವರ ಪುತ್ಥಳಿಯ ಮುಂಭಾಗದಲ್ಲಿಯೇ ವಿವಾಹವಾಗಿದ್ದೇವೆ’ ಎಂದು ಕಿರಣ್ ತಿಳಿಸಿದರು. ರಾವಣ, ಮಂಜು, ವೆಂಕಟೇಶ್ ಮೂರ್ತಿ ವಿಜಯಕುಮಾರಿ ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್ : </strong>ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರೇಮಿಗಳು ಅಂಬೇಡ್ಕರ್ ಜಯಂತಿಯಂದು ದೇವರಕೊಂಡಪ್ಪ ವೃತ್ತದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸೋಮವಾರ ನವಜೀವನಕ್ಕೆ ಕಾಲಿಟ್ಟಿದ್ದಾರೆ.</p>.<p>ಮೈಸೂರಿನ ಟಿ.ನರಸೀಪುರದ ಕಿರಣ್ ಮತ್ತು ಪ್ರಿಯಾಂಕ ಅಂಬೇಡ್ಕರ್ ಜಯಂತಿಯಂದು ಹೊಸಜೀವನ ಆರಂಭಿಸಿದ ಜೋಡಿ.</p>.<p>ಸಂವಿಧಾನದ ಪೀಠಿಕೆ ಓದುವ ಮತ್ತು ಪಂಚಶೀಲ ತತ್ವ ದೀಕ್ಷೆ ಪಡೆಯುವ ಮೂಲಕ ನವಜೋಡಿ ವಿವಾಹವಾದರು. ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ವಿಶೇಷ ತಹಶೀಲ್ದಾರ್ ಕರಿಯ ನಾಯಕ್ ವಿವಾಹಕ್ಕೆ ಸಾಕ್ಷಿಯಾದರು.</p>.<p>‘ಒಂದೇ ಊರಿನವರಾದ ನಾವು ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಆದರೆ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಅವರ ಪುತ್ಥಳಿಯ ಮುಂಭಾಗದಲ್ಲಿಯೇ ವಿವಾಹವಾಗಿದ್ದೇವೆ’ ಎಂದು ಕಿರಣ್ ತಿಳಿಸಿದರು. ರಾವಣ, ಮಂಜು, ವೆಂಕಟೇಶ್ ಮೂರ್ತಿ ವಿಜಯಕುಮಾರಿ ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>