<p><strong>ಆನೇಕಲ್: </strong>ತಾಲ್ಲೂಕಿನಾದ್ಯಂತ ಭಾನುವಾರ ಭಾರಿ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿತ್ತು.</p>.<p>ತಾಲ್ಲೂಕಿನಾದ್ಯಂತ ಕಳೆದ 10ದಿನಗಳಿಂದಲೂ ಸುರಿಯುತ್ತಿರುವ ಮಳೆ ಭಾನುವಾರ ಭಾರಿ ಪ್ರಮಾಣದಲ್ಲಿ ಸುರಿದಿದ್ದು, ರಸ್ತೆಗಳು ಕೆರೆಯಂತಾಗಿದ್ದವು.</p>.<p>ಭಾನುವಾರ ಮಧ್ಯಾಹ್ನ 1ರ ವೇಳೆಗೆ ಆರಂಭವಾದ ಮಳೆ ಸಂಜೆ 4ರವರೆಗೂ ಸುರಿಯಿತು. ಆನೇಕಲ್, ಚಂದಾಪುರ, ಬೊಮ್ಮಸಂದ್ರ, ಹೆಬ್ಬಗೋಡಿಗಳಲ್ಲಿ ಮಳೆಯಿಂದ ರಸ್ತೆಗಳು ಕೆರೆಯಂತಾಗಿತ್ತು. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲಾಗದೇ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>ಚಂದಾಪುರ-ಎಲೆಕ್ಟ್ರಾನಿಕ್ಸಿಟಿ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಪರದಾಡಿದರು. ಕಿತ್ತಗಾನಹಳ್ಳಿ ಗೇಟ್ ಬಳಿಯಲ್ಲಿ ರಸ್ತೆಯಲ್ಲಿ ನೀರು ಹರಿಯದೇ ಅಲ್ಲಿಯೇ ನಿಂತಿದ್ದರಿಂದ ಮೊಣಕಾಲುದ್ದ ನೀರು ನಿಂತಿತ್ತು. ದ್ವಿಚಕ್ರ ವಾಹನ ಚಲಾಯಿಸಲಾಗದೇ ಸವಾರರು ತಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>ಬೊಮ್ಮಸಂದ್ರ ಮೆಟ್ರೊ ನಿಲ್ದಾಣದ ಹೊರಗಡೆ ಸಾರ್ವಜನಿಕರು ಪರದಾಡಿದರು. ವಾರಾಂತ್ಯವಾಗಿದ್ದರಿಂದ ಬೆಂಗಳೂರಿಗೆ ಹೋಗುವವರು ಮೆಟ್ರೊ ಬಳಸಿದ್ದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಮಳೆಯಿಂದ ಛತ್ರಿಗಳನ್ನು ಹಿಡಿದು ಬೊಮ್ಮಸಂದ್ರ ಬಳಿ ರಸ್ತೆ ದಾಟುತ್ತಿದ್ದ ದೃಶ್ಯಗಳು ಕಂಡು ಬಂದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲ್ಲೂಕಿನಾದ್ಯಂತ ಭಾನುವಾರ ಭಾರಿ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿತ್ತು.</p>.<p>ತಾಲ್ಲೂಕಿನಾದ್ಯಂತ ಕಳೆದ 10ದಿನಗಳಿಂದಲೂ ಸುರಿಯುತ್ತಿರುವ ಮಳೆ ಭಾನುವಾರ ಭಾರಿ ಪ್ರಮಾಣದಲ್ಲಿ ಸುರಿದಿದ್ದು, ರಸ್ತೆಗಳು ಕೆರೆಯಂತಾಗಿದ್ದವು.</p>.<p>ಭಾನುವಾರ ಮಧ್ಯಾಹ್ನ 1ರ ವೇಳೆಗೆ ಆರಂಭವಾದ ಮಳೆ ಸಂಜೆ 4ರವರೆಗೂ ಸುರಿಯಿತು. ಆನೇಕಲ್, ಚಂದಾಪುರ, ಬೊಮ್ಮಸಂದ್ರ, ಹೆಬ್ಬಗೋಡಿಗಳಲ್ಲಿ ಮಳೆಯಿಂದ ರಸ್ತೆಗಳು ಕೆರೆಯಂತಾಗಿತ್ತು. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲಾಗದೇ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>ಚಂದಾಪುರ-ಎಲೆಕ್ಟ್ರಾನಿಕ್ಸಿಟಿ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಪರದಾಡಿದರು. ಕಿತ್ತಗಾನಹಳ್ಳಿ ಗೇಟ್ ಬಳಿಯಲ್ಲಿ ರಸ್ತೆಯಲ್ಲಿ ನೀರು ಹರಿಯದೇ ಅಲ್ಲಿಯೇ ನಿಂತಿದ್ದರಿಂದ ಮೊಣಕಾಲುದ್ದ ನೀರು ನಿಂತಿತ್ತು. ದ್ವಿಚಕ್ರ ವಾಹನ ಚಲಾಯಿಸಲಾಗದೇ ಸವಾರರು ತಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>ಬೊಮ್ಮಸಂದ್ರ ಮೆಟ್ರೊ ನಿಲ್ದಾಣದ ಹೊರಗಡೆ ಸಾರ್ವಜನಿಕರು ಪರದಾಡಿದರು. ವಾರಾಂತ್ಯವಾಗಿದ್ದರಿಂದ ಬೆಂಗಳೂರಿಗೆ ಹೋಗುವವರು ಮೆಟ್ರೊ ಬಳಸಿದ್ದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಮಳೆಯಿಂದ ಛತ್ರಿಗಳನ್ನು ಹಿಡಿದು ಬೊಮ್ಮಸಂದ್ರ ಬಳಿ ರಸ್ತೆ ದಾಟುತ್ತಿದ್ದ ದೃಶ್ಯಗಳು ಕಂಡು ಬಂದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>