<p><strong>ಆನೇಕಲ್:</strong> ಇತಿಹಾಸ ಪ್ರಸಿದ್ದ ಧರ್ಮರಾಯಸ್ವಾಮಿ ಕರಗ ಮಹೋತ್ಸವವನ್ನು ಮೇ 23ರಂದು ನಡೆಸಲು ಮತ್ತು ಚಂದ್ರಪ್ಪ ಅವರು ಕರಗವನ್ನು ಹೊರಲು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಅವರು ಆದೇಶ ಹೊರಡಿಸಿದ್ದಾರೆ.</p>.<p>ಆನೇಕಲ್ ಧರ್ಮರಾಯಸ್ವಾಮಿ ಕರಗ ಹೊರುವ ಸಂಬಂಧ ಅರ್ಚಕರು ಮತ್ತು ಕುಲಸ್ಥರ ನಡುವೆ ಗೊಂದಲ ಏರ್ಪಟ್ಟಿತ್ತು. ತಹಶೀಲ್ದಾರ್ ಅವರ ನೇತೃತ್ವದಲ್ಲಿ ಹಲವು ಸುತ್ತುಗಳ ಸಭೆ ನಡೆಸಿದ್ದರು. ಕೊನೆಗೆ ಚಂದ್ರಪ್ಪ ಅವರಿಗೆ ಕರಗವನ್ನು ಹೊರಲು ಆದೇಶ ಹೊರಡಿಸಲಾಗಿದೆ.</p>.<p>ಚಂದ್ರಪ್ಪ ಅವರು 2011, 2012, 2016, 2017 ಮತ್ತು 2022ರಲ್ಲಿ ಕರಗವನ್ನು ಹೊತ್ತಿದ್ದರು. ಆನೇಕಲ್ನ ಕರಗವು ಬೆಂಗಳೂರು ಕರಗದಷ್ಟೇ ಖ್ಯಾತಿ ಹೊಂದಿದ್ದು ಹಲವಾರು ಧಾರ್ಮಿಕ ಆಚರಣೆಗಳಿಂದ ಆನೇಕಲ್ ಕರಗ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ.</p>.<p>ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ವಾತಾವರಣ ಮೂಡಿದೆ. ಧರ್ಮರಾಯಸ್ವಾಮಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ದತೆ ನಡೆಸಲಾಗಿದೆ.</p>.<p>ಆನೇಕಲ್ ಕರಗವು ವಾಡಿಕೆಯಂತೆ ಚಿತ್ತ ಪೂರ್ಣಿಮೆಯ ಏಪ್ರಿಲ್ ತಿಂಗಳ ಹುಣ್ಣಿಮೆಯ ದಿನದಂದು ನಡೆಯಬೇಕಿತ್ತು. ಲೋಕಸಭಾ ಚುನಾವಣೆ ಮತ್ತು ಎರಡು ಗುಂಪುಗಳ ನಡುವೆ ಒಮ್ಮತ ಮೂಡದ ಕಾರಣದಿಂದಾಗಿ ಮೇ ತಿಂಗಳ ಬುದ್ಧ ಪೂರ್ಣಿಮೆಯಂದು ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್:</strong> ಇತಿಹಾಸ ಪ್ರಸಿದ್ದ ಧರ್ಮರಾಯಸ್ವಾಮಿ ಕರಗ ಮಹೋತ್ಸವವನ್ನು ಮೇ 23ರಂದು ನಡೆಸಲು ಮತ್ತು ಚಂದ್ರಪ್ಪ ಅವರು ಕರಗವನ್ನು ಹೊರಲು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಅವರು ಆದೇಶ ಹೊರಡಿಸಿದ್ದಾರೆ.</p>.<p>ಆನೇಕಲ್ ಧರ್ಮರಾಯಸ್ವಾಮಿ ಕರಗ ಹೊರುವ ಸಂಬಂಧ ಅರ್ಚಕರು ಮತ್ತು ಕುಲಸ್ಥರ ನಡುವೆ ಗೊಂದಲ ಏರ್ಪಟ್ಟಿತ್ತು. ತಹಶೀಲ್ದಾರ್ ಅವರ ನೇತೃತ್ವದಲ್ಲಿ ಹಲವು ಸುತ್ತುಗಳ ಸಭೆ ನಡೆಸಿದ್ದರು. ಕೊನೆಗೆ ಚಂದ್ರಪ್ಪ ಅವರಿಗೆ ಕರಗವನ್ನು ಹೊರಲು ಆದೇಶ ಹೊರಡಿಸಲಾಗಿದೆ.</p>.<p>ಚಂದ್ರಪ್ಪ ಅವರು 2011, 2012, 2016, 2017 ಮತ್ತು 2022ರಲ್ಲಿ ಕರಗವನ್ನು ಹೊತ್ತಿದ್ದರು. ಆನೇಕಲ್ನ ಕರಗವು ಬೆಂಗಳೂರು ಕರಗದಷ್ಟೇ ಖ್ಯಾತಿ ಹೊಂದಿದ್ದು ಹಲವಾರು ಧಾರ್ಮಿಕ ಆಚರಣೆಗಳಿಂದ ಆನೇಕಲ್ ಕರಗ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ.</p>.<p>ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ವಾತಾವರಣ ಮೂಡಿದೆ. ಧರ್ಮರಾಯಸ್ವಾಮಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ದತೆ ನಡೆಸಲಾಗಿದೆ.</p>.<p>ಆನೇಕಲ್ ಕರಗವು ವಾಡಿಕೆಯಂತೆ ಚಿತ್ತ ಪೂರ್ಣಿಮೆಯ ಏಪ್ರಿಲ್ ತಿಂಗಳ ಹುಣ್ಣಿಮೆಯ ದಿನದಂದು ನಡೆಯಬೇಕಿತ್ತು. ಲೋಕಸಭಾ ಚುನಾವಣೆ ಮತ್ತು ಎರಡು ಗುಂಪುಗಳ ನಡುವೆ ಒಮ್ಮತ ಮೂಡದ ಕಾರಣದಿಂದಾಗಿ ಮೇ ತಿಂಗಳ ಬುದ್ಧ ಪೂರ್ಣಿಮೆಯಂದು ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>