ಮೃತರನ್ನು ನಾಗರಾಜ್ ಮೂರ್ತಿ (65) ಎಂದು ಗುರುತಿಸಲಾಗಿದೆ. ಅವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆಂದು ಹೋಗುತ್ತಿದ್ದರು. ಶುಕ್ರವಾರ ಸಂಜೆ 5ಕ್ಕೆ ಮನೆಬಿಟ್ಟು ಹೋದವರು ರಾತ್ರಿ 7.30ವರಗೂ ಬಂದಿರಲಿಲ್ಲ. ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ನಂತರ ಶನಿವಾರ ಬೆಳಿಗ್ಗೆ ಹುಡುಕಾಟ ನಡೆಸಿದಾಗ ಹತ್ಯೆಯಾಗಿರುವುದು ಗೊತ್ತಾಯಿತು ಎಂದು ಕುಟುಂಬದ ಸದಸ್ಯರಾದ ವಿಶ್ವನಾಥ್ ಮತ್ತು ಅನಿಲ್ ಕುಮಾರ್ ಮಾಹಿತಿ ನೀಡಿದರು.